12:16 AM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ನಂತೂರು ಬಳಿ ರಸ್ತೆ ಮಧ್ಯೆ ಸಮಾಧಿ ತರಹ ತಲೆ ಎತ್ತಿರುವ ಡ್ರೈನೇಜ್ ಪಿಟ್: ಸ್ಕೂಟರ್ ಪಲ್ಟಿ; ಸವಾರ ಆಸ್ಪತ್ರೆಗೆ

07/11/2023, 23:45

ಮಂಗಳೂರು(reporterkarnataka.com): ನಗರದ ನಂತೂರು ಜಂಕ್ಷನ್ ಬಳಿ ಇಂದು ರಾತ್ರಿ ಸ್ಕೂಟರೊಂದು ಅವೈಜ್ಞಾನಿಕವಾಗಿ ನಿರ್ಮಿಸಿದ ಡ್ರೈನೇಜ್ ಪಿಟ್ ನಿಂದ ಅಪಘಾತಕ್ಕೀಡಾದ ಪರಿಣಾಮ ಸ್ಕೂಟರ್ ಸವಾರ ಯುವಕನೊಬ್ಬ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆದಾಖಲಿಸಲಾಗಿದೆ.


ಗಾಯಾಳುವನ್ನು ಶಿಫ್ಕಿ(21) ಎಂದು ಗುರುತಿಸಲಾಗಿದೆ. ಸ್ಕೂಟರ್ ಪಲ್ಟಿಯಾದ ಪರಿಣಾಮ ಯುವಕನ ಗಲ್ಲ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ.
ಮಲ್ಲಿಕಟ್ಟೆ ಕಡೆಯಿಂದ ನಂತೂರು ಕಡೆಗೆ ಸಾಗುವ ಹಾದಿಯಲ್ಲಿ ನಂತೂರು ಬಸ್ ತಂಗುದಾಣದ ಸಮೀಪದಲ್ಲೇ ರಸ್ತೆ ಮಧ್ಯೆ ಈ ಡ್ರೈನೇಜ್ ಪಿಟ್ ಇದೆ. ಇದು ರಸ್ತೆ ಮಟ್ಟದಿಂದ ಎತ್ತರದಲ್ಲಿದ್ದು ದ್ವಿಚಕ್ರ ವಾಹನ ಸವಾರರಿಗೆ ಯಾವಾಗಲೂ ಅಪಾಯಕಾರಿಯಾಗಿದೆ. ಈ ಡ್ರೈನೇಜ್ ಪಿಟ್ ರಸ್ತೆ ಮಧ್ಯದಲ್ಲಿ ಸಮಾಧಿ ತರಹ ಎದ್ದು ಕಾಣುತ್ತದೆ. ಈ ರಸ್ತೆಯಲ್ಲಿ ದಿನಾಲೂ ಸಂಚರಿಸುವವರು ಸ್ವಲ್ಪ ಜಾಗರೂಕತೆ ವಹಿಸಿ ಇದರ ಮೇಲೆ ತಮ್ಮ ವಾಹನಗಳ ಚಕ್ರವನ್ನೇರಿಸುತ್ತಾರೆ. ಆದರೆ ಹೊಸ ಸವಾರರಿಗೆ ಇದು ಹೊಸತಾಗಿರುವುದರಿಂದ ಅಪಾಯಕಾರಿಯಾಗಿದೆ. ಇವತ್ತು ನಡೆದದ್ದು ಕೂಡ ಇದೇ ಅಚಾತುರ್ಯ. ಸ್ಕೂಟರ್ ನಿಂದ ಸವಾರ ಎಸೆಯಲ್ಪಟ್ಟು ಗಲ್ಲ ಮತ್ತು ಕೈಕಾಲಿಗೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು