3:23 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಜಂಗಮರೆಂದರೆ ಯಾರು?

08/10/2023, 20:32

ಜಂಗಮರೆಂದರೆ ಯಾರು? ಯಾರು??
ಯಾರು? ಯಾರು?? ಜಂಗಮರೆಂದರೆ!! ಪ!!
ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು
ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು
ಕಲ್ಲು ಮನಸುಗಳ ಹೂವಾಗಿಸುವದೆಡೆಗೆ
ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!!

ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು
ಬಿನ್ನಹದಿಂದಲೆ ಜೀವನದ ಸಾರವ ಸಾರೊ
ಕಣ್ಣು ಕಣ್ಣುಗಳ ತೆರೆಸೊ ಜ್ಞಾನ ಭಂಡಾರವು
ಹುಣ್ಣುಮೆಯ ತಂಪನೇ ಚೆಲ್ಲೊ ಕಾಂತಿಯೆ!! ಜಂಗಮ!!

ಬದುಕಿನ ತಿರುಳನ್ನು ವಚನದಲಿ ಸಾರುತ್ತ
ಹೃದಯಗಳಲಿ ಅಮೃತವನೆ ಧಾರೆಯೆರೆವ
ಹದಿಬದೆಯ ಧರ್ಮದ ತಿರುಳನೆ ಬಿತ್ತುವ
ವಿಧಿತದಲಿ ಸರ್ವರಾ ಬಾಳನೆ ಬೆಳಗುವವರೆ!! ಜಂಗಮ!!

ಕಾಮ ಕ್ರೋಧ ಲೋಭ ಮೋಹ ಮತ್ಸರವ
ಯಾಮದಿಂದಲೆ ತೊರೆದು ಸಾಧುವಾಗಿಹ
ಸೋಮ ಸೂರ್ಯರಂತೆಯೆ ಜಗ ಕಾಯುವ
ನಾಮ ನಿರ್ದೇಶಿತ ಕಾವಿಯ ಕಾರ್ಮಿಕರೆ!! ಜಂಗಮ!!

– ಅನಿತಾ ಸಾಲಿಮಠ ಅಂತರಗಂಗೆ
(ವಿದ್ಯಾ ಚೇತನ ಪದವಿ ಪೂರ್ವ ಕಾಲೇಜು ಲಿಂಗಸೂರ್)

ಇತ್ತೀಚಿನ ಸುದ್ದಿ

ಜಾಹೀರಾತು