3:39 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಸ್ವರ್ಣ, ಸೀತಾ ನದಿ; ಇನ್ನಾದಲ್ಲಿ 3 ಮನೆ ಜಲಾವೃತ

06/07/2023, 19:35

ಕಾರ್ಕಳ(reporterkarnataka.com): ಕಳೆದ 5 ದಿನಗಳಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದು, ಸ್ವರ್ಣ ಹಾಗೂ ಸೀತಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಪಶ್ಚಿಮಘಟ್ಟ ತಪ್ಪಲಿನಲ್ಲಿರುವ ಈ ತಾಲೂಕುಗಳಿಗೆ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ನೀರು ಮಾಳ ಮಲ್ಲಾರ್ ಬಳಿ ಸ್ವರ್ಣ ನದಿಗೆ ಭಾರಿ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಡ್ಲಿ ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ತೆರೆಯಲಾಗಿದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮುಂಡ್ಲಿ ಅಣೆಕಟ್ಟಿನ ಸುತ್ತಲೂ ಇರುವ ಗದ್ದೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಕೆರುವಾಶೆ, ಎಣ್ಣೆಹೊಳೆ ಹೆರ್ಮುಂಡೆಯ ಸ್ವರ್ಣ ನದಿಯ ತಟದ ಪ್ರದೇಶಗಳಲ್ಲಿ ನೀರು‌ ನುಗ್ಗಿದೆ.

ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿ ಅಪಾಯ ಮಟ್ಟದಲ್ಲಿ ಹರಿಯುತಿದೆ. ನಾಡ್ಪಾಲು ಬಳಿ ರಾಷ್ಟ್ರೀಯ ರಸ್ತೆಯಲ್ಲಿ ಸೀತಾ ನದಿಯ ನೀರು ಹರಿದಿದೆ. ಇದರಿಂದ ಸಂಚಾರ ದುಸ್ತರವಾಗಿದೆ.
ಶಿವಪುರ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿ
ದ್ದು ಬಟ್ರಾಡಿ, ದೊಡ್ಡಮನೆ ಭಾಗದಲ್ಲಿ ನೀರು ಕೃಷಿ ಭತ್ತದ ಗದ್ದೆಗಳಿಗೆ ಆವರಿಸಿದೆ .ಕಬ್ಬಿನಾಲೆ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು
ಧರ್ಮಸ್ಥಳ ಗ್ರಾಮ ಅಭಿವೃದ್ದಿಯ ಹಡಿಭೂಮಿ ಯೋಜನೆ ಯಲ್ಲಿ ವರಂಗದ ಮಾತಿಬೆಟ್ಟು ಸಮೀಪದಲ್ಲಿ ಇಪ್ಪತ್ತು ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿತ್ತು. ಆದರೆ ಕಬ್ಬಿನಾಲೆ ನದಿ ಪ್ರವಾಹದಿಂದ ನೆರೆ ಉಂಟಾಗಿ ಭತ್ತದ ಗದ್ದೆಗಳು ಮುಳುಗಿವೆ. ಇನ್ನಾ ಗ್ರಾಮದಲ್ಲಿ ಮೂರು ಮನೆಗಳು ಜಲಾವೃತವಾಗಿವೆ.
ಕಳೆದ ಎರಡು ವರ್ಷಗಳ ಹಿಂದೆ ಕಾಂಕ್ರಿಟಿಕರಣಗೊಂಡ ಕಬ್ಬಿನಾಲೆ- ತಿಂಗಳ ಮಕ್ಕಿ ಸಂಪರ್ಕಿಸುವ ರಸ್ತೆಯ ಪೊಲ್ಲಂತು ಎಂಬಲ್ಲಿ ಮಳೆಯಿಂದ ಮಣ್ಣಿನ ಸವಕಳಿಯಾಗಿ ರಸ್ತೆಗೆ ಕುಸಿತದ ಭೀತಿ ಉಂಟಾಗಿದೆ. ಸುಮಾರು ಎರಡು ಅಡಿ ಮಣ್ಣು ಕುಸಿದಿದ್ದು ರಸ್ತೆಯ ಎಡಪಾರ್ಶವು ಆಧಾರವಿಲ್ಲದಂತಾಗಿದೆ .
ಅಜೆಕಾರು- ಮಂಗಪಾಡಿ- ಭೂತಮಾರು ರಸ್ತೆಯ ಮರಬಿದ್ದು ತಡೆಗೋಡೆ ಕುಸಿತವಾಗಿದೆ.ಸ್ಥಳಕ್ಕೆ ಅಗಮಿಸಿದ ಅಜೆಕಾರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಸ್ಥಳಕ್ಕೆ ಆಗಮಿಸಿ ಮರವನ್ನು ಕತ್ತರಿಸಿ ತೆರವು ಗೊಳಿಸಿದರು
ಮಳೆ ವಿವರ : ಕಾರ್ಕಳ ತಾಲೂಕಿನಲ್ಲಿ ಬುಧವಾರ ಬಾರಿ ಮಳೆ ಸುರಿದಿದ್ದು ಕೆದಿಂಜೆ, 258.00ಮಿಮಿ
ಅತ್ಯಧಿಕ ಮಳೆ ದಾಖಲಾಗಿದೆ. ಸಾಣೂರು195.6 ಮಿಮೀ, ಇರುವತ್ತೂರು 213.2 ಮಿಮೀ, ,ಕಾರ್ಕಳ ನಗರ 247.6 ಮಿಮೀ ಕೆರುವಾಶೆ 196.4ಮಿಮಿ ,ಮುಳಿಕಾರಿನಲ್ಲಿ 209 ಮಿಮೀ, ಅಜೆಕಾರಿನಲ್ಲಿ 231.6 ಮಿಮೀ ಮಳೆಯಾಗಿದೆ.ಹೆಬ್ರಿ179 ಮಿಮೀ, ಕಾರ್ಕಳ ತಾಲೂಕಿನಲ್ಲಿ ಒಟ್ಟು 1551.6 ಮಿಮೀ ಮಳೆ ವರದಿಯಾಗಿದೆ. ಸರಾಸರಿ 221 ಮಿಮೀ ಮಳೆ ಬಿದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು