8:21 AM Friday4 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಶ್ರೀಕ್ಷೇತ್ರ ಕೇಮಾರಿನಲ್ಲಿ “ಟೆಲಿಬರವು” ತಂತ್ರಾಂಶ ಲೋಕಾರ್ಪಣೆ*

12/06/2023, 20:18

ಮಂಗಳೂರು(reporterkarnataka.com):ಸಂಸ್ಕೃತಿ ಮುಖ್ಯ, ದೇಶ ವಿದೇಶಕ್ಕೂ ಹೋದರೂ ತುಳು ಸಂಸ್ಕೃತಿಯನ್ನು ಮರೆಯಬಾರದು. ಆದರೆ ತುಳು ಭಾಷೆಯನ್ನು ಎಂಟನೇ ಪರೀಚ್ಛೇಧದಲ್ಲಿ ಸೇರಿಸುವಲ್ಲಿ ಈತನಕವೂ ಆಗದೇ ರಾಜಕಾರಣಿಗಳು ಕೇವಲ ಬಂಡಲ್ ಬಿಡುವಲ್ಲೇ ಕಾಲ ಕಳೆದರು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಜೈ ತುಲುನಾಡ್(ರಿ.) ಇದರ ನೇತೃತ್ವದಲ್ಲಿ ಶ್ರೀಕ್ಷೇತ್ರ ಕೇಮಾರಿನಲ್ಲಿ ಭಾನುವಾರ ‘ಟೆಲಿಬರವು’ ಎಂಬ ಆಪ್ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಈ ವೇಳೆ ‘ಟೆಲಿಬರವು’ ತಂತ್ರಾಂಶದ ರಚನೆಕಾರರಾದ ಜ್ಙಾನೇಶ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಈ ತಂತ್ರಾಂಶದಲ್ಲಿ ಕನ್ನಡದಲ್ಲಿ ಬರೆದಂತಹ ಅಕ್ಷರಗಳು ತುಳು ಲಿಪಿಗೆ ಪರಿವರ್ತನೆಯಾಗುತ್ತದೆ ಎಂದು ಸನ್ಮಾನಿತರಾದ ಜ್ಞಾನೇಶ್ ಹೇಳಿದರು. ಸುಮಂತ್ ಹೆಬ್ರಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು..
ಈ ಸಂಧರ್ಭ ಕೇಮಾರ್ ಕ್ಷೇತ್ರದ ನಾಮಪಲಕವನ್ನು ತುಲುಲಿಪಿಯಲ್ಲಿ ಅಳವಡಿಸಿ ಉದ್ಘಾಟಿಸಲಾಯಿತು.
ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ವಿಶು ಶ್ರೀಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷ ಉದಯ್ ಪೂಂಜಾ ಉಪಸ್ಥಿತರಿದ್ದರು. ಪೂರ್ಣಿಮಾ ಬಂಟ್ವಳಾ ಸನ್ಮಾನ ಪತ್ರ ವಾಚಿಸಿದರು. ಪವಿತ್ರ ಪೂಜಾರಿ ಸ್ವಾಗತಿಸಿ ಅಕ್ಷತ ಧನ್ಯವಾದ ಅರ್ಪಿಸಿದರು. ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.

*ಟೆಲಿಬರವು*
ತುಲು ಭಾಷೆಗೆ ಯೂನಿಕೋಡ್ ಇಲ್ಲದಿರುವ ಕಾರಣ ಪರ್ಯಾಯವಾಗಿ ಆಂಗ್ಲ ಭಾಷೆಯ ಫಾಂಟ್ ಅನ್ನು ಜೈತುಲುನಾಡ್ ಸಂಘಟನೆಯು ಮರುವಿನ್ಯಾಸ ಗೊಳಿಸಿ ಸಿದ್ಧಪಡಿಸಿದಂತಃ ಫಾಂಟ್ ಮೂಲಕ ತುಲು ಅಕ್ಷರವನ್ನು ಬರೆಯಬಹುದು. ಆದರೆ ಅದನ್ನು ಬಳಸಲು ಜನಸಾಮಾನ್ಯರಿಗೆ ಅನಾನೂಕೂಲವಾಗುತ್ತಿತ್ತು. ಇದನ್ನರಿತ ಜೈತುಲುನಾಡ್ ಸಂಘಟನೆಯ ಉದಯೋನ್ಮುಖ ಯುವಕ ಜ್ಞಾನೇಶ್ ದೇರಳಕಟ್ಟೆ, ಎಲ್ಲರಿಗೂ ಸುಲಭವಾಗುವ ರೀತಿಯಲ್ಲಿ ಟೆಲಿಗ್ರಾಂ ಎನ್ನುವ ತಂತ್ರಾಂಶದಲ್ಲಿ ಟೆಲಿಬರವು ಅನ್ನು ಅಳವಡಿಸಿ ಸಿದ್ದಪಡಿಸಿದ ಈ ತಂತ್ರಾಂಶದ ವಿಶೇಷವೇನೆಂದರೆ, ಕನ್ನಡ ಅಕ್ಷರದಲ್ಲಿ ಬರೆದು ಕಳಿಸಿದರೆ ತುಳು ಅಕ್ಷರವಾ ಮಾರ್ಪಾಡಾಗಿ ಪಾರದರ್ಶಕ ಚಿತ್ರ(transparent png format image)ವಾಗಿ ನಿಮಗೆ ಸಿಗುತ್ತದೆ. ಈ ಚಿತ್ರವನ್ನು ಸುಲಭವಾಗಿ ಫೋಟೊ ಎಡಿಟಿಂಗ್ ಮಾಡಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು