2:08 PM Friday26 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಕುಲಪತಿ ಹುದ್ದೆಗೆ ಲಂಚ: ಪ್ರಾಧ್ಯಾಪಕ ಮೇಲಿನ ಪ್ರಕರಣವನ್ನು ಮುಚ್ಚಿ ಹಾಕಿದ ಮಂಗಳೂರು ವಿವಿ!; ಪ್ರಭಾವಿಗಳ ಒತ್ತಡ ಕಾರಣ?

09/02/2023, 21:05

ಮಂಗಳೂರು(reporterkarnataka.com): ಕುಲಪತಿ ಹುದ್ದೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಲಂಚ ಕೊಟ್ಟ ಪ್ರಕರಣವನ್ನು ವಿವಿ ಆಡಳಿತ ಮುಚ್ಚಿ ಹಾಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಾಧ್ಯಾಪಕನ ವಿರುದ್ದ ಕ್ರಮ ಕೈಗೊಳ್ಳದೇ ಇತ್ಯರ್ಥ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು ವಿವಿ ಪ್ರಾಧ್ಯಾಪಕ ಜಯಶಂಕರ್ ಅವರು ರಾಯಚೂರು ವಿವಿ ಕುಲಪತಿ ಹುದ್ದೆ ಪಡೆಯಲು ಲಂಚ ಕೊಟ್ಟಿದ್ದರು. ಮಂಗಳೂರು ವಿವಿ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಅವರು 16 ಲಕ್ಷ ಲಂಚ ಕೊಟ್ಟರೂ ಕುಲಪತಿ ಹುದ್ದೆ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು, ಈ ಮಧ್ಯೆ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ್ದ ಜಯಶಂಕರ್ ಗೆ ಮಂಗಳೂರು ವಿವಿ ಸಿಂಡಿಕೇಟ್ ನೋಟೀಸ್ ನೀಡಿತ್ತು. 2021ರ ಏ.9 ರ ಸಿಂಡಿಕೇಟ್ ಸಭೆಯಲ್ಲಿ ಜಯಶಂಕರ್ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಿದ್ದರು.

ನಿವೃತ್ತ ಜಿಲ್ಲಾ ಜಡ್ಜ್ ಬೈಲೂರು ಶಂಕರ ರಾಮ ಸಮಿತಿ ಈ ಕುರಿತು ತನಿಖೆ ನಡೆಸಿ 2022ರ ಜೂನ್ 1ರಂದು ತನಿಖಾ ವರದಿ ಸಲ್ಲಿಸಿತ್ತು. ತನಿಖೆಯಲ್ಲಿ ಜಯಶಂಕರ್ ಅವರು ಕುಲಪತಿ ಹುದ್ದೆಗೆ ಲಂಚ ಕೊಟ್ಟಿರುವುದು ದೃಢಪಟ್ಟಿತ್ತು.
ಕುಲಪತಿ ಹುದ್ದೆ ಪಡೆಯಲು ನ್ಯಾಯೋಚಿತವಲ್ಲದ ದಾರಿಯಲ್ಲಿ ಹಣ ನೀಡಿದ್ದು ಸರಿಯಲ್ಲ. ಮಂಗಳೂರು ವಿವಿಯ ಹೆಸರು, ಘನತೆ, ಪ್ರತಿಷ್ಠೆ ಕೆಳಮಟ್ಟಕ್ಕೆ ಇಳಿದಂತಾಗಿದೆ. ಮಂಗಳೂರು ವಿವಿ ಉದ್ಯೋಗಿಗಳ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಆದರೆ ಮಂಗಳೂರು ವಿಶ್ವ ವಿದ್ಯಾನಿಲಯ ಜಯಶಂಕರ್ ಹಣ ನೀಡಿರುವುದು ದೃಢಪಟ್ಟರೂ ಪ್ರಾಧ್ಯಾಪಕ ಜಯಶಂಕರ್ ಗೆ ತಿಳುವಳಿಗೆ ಪತ್ರ ನೀಡಿ ಪ್ರಕರಣ ಇತ್ಯರ್ಥಗೊಳಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು