12:10 AM Thursday12 - March 2026
ಬ್ರೇಕಿಂಗ್ ನ್ಯೂಸ್
ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ

ಇತ್ತೀಚಿನ ಸುದ್ದಿ

ಕಿನ್ನರಿ ಕಿಂಡರ್‌ಗಾರ್ಟನ್ ಮಕ್ಕಳ ಜತೆ ವಾಯ್ಸ್ ಆಫ್ ಆರಾಧನಾ ನಿರ್ದೇಶಕಿ ಪದ್ಮಶ್ರೀ ಹುಟ್ಟುಹಬ್ಬ

30/09/2022, 11:46

ಮಂಗಳೂರು(reporterkarnataka.com): ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಹಾಗೂ ಆರದಿರಲಿ ಬದುಕು ಆರಾಧನಾ ತಂಡದ ಪ್ರವರ್ತಕಿ ಪದ್ಮಶ್ರೀ ನಿಡ್ಡೋಡಿ ಅವರ ಹುಟ್ಟುಹಬ್ಬ ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಕಿನ್ನರಿ ಕಿಂಡರ್‌ಗಾರ್ಟನ್ ನ ಮಕ್ಕಳ ಜತೆ ಆಚರಿಸಲಾಯಿತು. ಕಿಂಡರ್‌ಗಾರ್ಟನ್ ನ ಸಹಾಯಕ ಶಿಕ್ಷಕಿ ಸುಜಾತಾ ಅವರಿಗೆ ಈ ಸಂದರ್ಭದಲ್ಲಿ ಜಿನಸಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.


ಹುಟ್ಟುಹಬ್ಬದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದ ಪ್ರತಿಭೆಗಳಿಂದ ಸಂಗೀತ ರಸಮಂಜರಿ ನಡೆಯಿತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. p
ಕಿನ್ನರಿ ಕಿಂಡರ್‌ಗಾರ್ಟನ್ ಪರವಾಗಿ ಮೊದಲು ಪದ್ಮಶ್ರೀ ಅವರ ಹುಟ್ಟುಹಬ್ಬದ ಕೇಕ್ ಕಟ್ ಮಾಡಲಾಯಿತು. ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ವಾಯ್ಸ್ ಆಫ್ ಆರಾಧನಾ00l ತಂಡದಿಂದ ಕೇಕ್ ಕಟ್ ಮಾಡಲಾಯಿತು.

ಬಾಲ ಪ್ರತಿಭೆಗಳಾದ ಅಶ್ಮಿತ್ ಎ.ಜೆ., ಅನನ್ಯ ನಾರಾಯಣ. ಯಶಸ್ ಭಟ್ ಮೊದಲಾದವರಿಂದ ಸಂಗೀತ ಸುಧೆ ಹರಿಯಿತು. ವಾಯ್ಸ್ ಆಫ್ ಆರಾಧನಾ ತಂಡದ ಅಭಿಷೇಕ್ ಶೆಟ್ಟಿ ಐಕಳ, ದೀನ್ ರಾಜ್,  ಕೆ. ದೇವಿಪ್ರಸಾದ್, ಬಸವರಾಜ್ ಮಂತ್ರಿ, ಜಯರಾಮ್,  ಜ್ಯೋತ್ಸ್ನಾ, ಆಶಾ, ಪ್ರಸಾದ್, ಕಿನ್ನರಿ ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು. ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿದರು.

ಇತ್ತೀಚಿನ ಸುದ್ದಿ

ಜಾಹೀರಾತು