ಇತ್ತೀಚಿನ ಸುದ್ದಿ
ಗಣೇಶೋತ್ಸವ: ಬೆಂಗಳೂರು ಶ್ರೀ ಕಾಶಿ ಮಠದಲ್ಲಿ ಗಣಪನಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ
03/09/2022, 22:33

ಚಿತ್ರ: ಕೀರ್ತಿ ಸಂತೋಷ್ ನಾಯಕ್
ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಪ್ರಯುಕ್ತ ಶ್ರೀದೇವರಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ ನಡೆಯಿತು.
ಇದಕ್ಕೆ ಮುನ್ನ ದೇಶದ 75ನೇ ಸ್ವಾತಂತ್ರ್ಯೊತ್ಸವ ಸವಿ ನೆನಪಿಗಾಗಿ ಗಣಪತಿ ದೇವರಿಗೆ ತಿರಂಗದ ಅಲಂಕಾರ ಸೇವೆ ಮಾಡಲಾಯಿತು. ಮಧ್ಯಾಹ್ನದಲ್ಲಿ 12.15ಕ್ಕೆ ಸಹಸ್ರ ಮೋದಕ ಹವನ ನಡೆಯಿತು. ಮಧ್ಯಾಹ್ನ 1.30ರಿಂದ ಗೌಡ ಸಾರಸ್ವತ ಮಹಿಳಾ ವೃಂದದ ಭಜನಾ ಮಂಡಳಿಯಿಂದ
ಭಜನಾ ಕಾರ್ಯಕ್ರಮ ಮೇಳೈಸಿತು. 1.45ಕ್ಕೆ ಮಹಾ ನೈವೇದ್ಯ ಹಾಗೂ ಮಧ್ಯಾಹ್ನ 2 ಗಂಟೆಗೆ ಮಹಾಪೂಜೆ ನೆರವೇರಿತು. ಸಂಜೆ 6.15ಕ್ಕೆ ದೀಪ ನಮಸ್ಕಾರ, 7ಗಂಟೆಗೆ ಪಾರ್ಥಸಾರಥಿ ದೇವರಿಗೆ ವಿಶೇಷ ದೀಪಾಲಂಕಾರ ಸೇವೆ, ರಂಗ ಪೂಜೆ ನೆರವೇರಿತು. 8 ಗಂಟೆಗೆ ಮಹಾಪೂಜೆ ನಡೆಯಿತು.
ಬೆಂಗಳೂರು ಕಾಶಿ ಮಠ ವ್ಯವಸ್ಥಾಪನ ಸಮಿತಿ ವತಿಯಿಂದ ಗಣೇಶೋತ್ಸವ ಆಗಸ್ಟ್ 31ರಂದು ಆರಂಭಗೊಂಡಿದ್ದು, ಸೆ.4ರ ವರೆಗೆ ನಡೆಯಲಿದೆ. ಗಣೇಶೋತ್ಸವ ಅಂಗವಾಗಿ ನಿನ್ನೆ ವಿಶೇಷ ಚೆಂಡೆ ವಾದನ ನಡೆಯಿತು.