3:33 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕಾರವಾರ ‘ಸಿದ್ಧಬಸವೇಶ್ವರ’ ಅನುಭವ ಮಂಟಪದಲ್ಲಿ ‘ಅನುಭಾವ ಸಂಗಮ’ ಸಂಪನ್ನ

26/08/2022, 20:49

ಕಾರವಾರ(reporterkarnataka.com):
ಶರಣ ಮಾಸದ ಕೊನೆಯ ಸೋಮವಾರದಂದು ಸುಕ್ಷೇತ್ರ ಕಾರವಾರದ ಬಂಗಾರಪ್ಪ ಕಾಲೋನಿಯ “ಸಿದ್ಧಬಸವೇಶ್ವರ” ಅನುಭವ ಮಂಟಪದಲ್ಲಿ “ಅನುಭಾವ ಸಂಗಮ” ಕಾರ್ಯಕ್ರಮ ಸಂತೋಷ ಸಡಗರದಿಂದ ಸಂಪನ್ನಗೊಂಡಿತು.


ಅಂದು ಶರಣ ಸಿದ್ದಯ್ಯಸ್ವಾಮಿ ಚೌಕಿಮಠ ಗೋನಾಳ ಅವರೊಂದಿಗೆ ಅವರ ಸಹೋದರರ ಕುಟುಂಬವು ಪ್ರತಿವರ್ಷದಂತೆ ಸ್ಥಳೀಯ ಆಯುಷ ಇಲಾಖೆಯ ಮುಖ್ಯಸ್ಥರಾದ ಶರಣ ಡಾ.ಮಲ್ಲಿಕಾರ್ಜುನ ಹಿರೇಮಠ ಮಸ್ಕಿ ಅವರ ನೇತೃತ್ವದಲ್ಲಿ ಒಂದಾಗಿ ಸಕಲ ಸಿದ್ದತೆಯನ್ನು ಮಾಡಿದ್ದಾರೆ. ಹಾಗೆಯೆ ಅಂದು ಸಮಾರಂಭದಲ್ಲಿ ಅಕ್ಕಪಕ್ಕದ ಎಲ್ಲಾ ಜನಸಮುದಾಯದ ಜನಾಸಕ್ತರು ಭಾಗವಹಿಸಿದ್ದು, ನಿಜಕ್ಕೂ “ಇವನಮ್ಮವ” ಎಂಬ ಅಪ್ಪ ಸಂಗನಬಸವಣ್ಣ ಅವರ ಪವಿತ್ರ ವಚನವು ನೆನಪಿಗೆ ತರುವಂತೆ ಆಯೋಜನೆಗೊಂಡಿದೆ. ಅಂದು ಅಲ್ಲಮಪ್ರಭೂ ಅನುಭಾವ ಪೀಠ, ಕಾಂತಾವರ, ಕಾರ್ಕಳ, ಉಡುಪಿಯ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ ಅವರು ಬಸವಾದಿ ಶರಣರ ಅನೇಕ ಪವಿತ್ರ ವಚನಗಳನ್ನು ಉಲ್ಲೇಖಿಸುತ್ತಾ, ಅಪ್ಪ ಸಂಗನಬಸವಣ್ಣ ಅವರು ಹಾಕಿಕೊಟ್ಟ ಪಥವನ್ನು ನಾವೆಲ್ಲರೂ ಅನುಸರಿಸಿದರೆ ಮಾತ್ರ ಈ ಜಗತ್ತಿನ ಭಾವಿ ಜನಾಂಗವು ಸುರಕ್ಷಿತವಾಗಿ ಬದುಕಲು ಸಾಧ್ಯವೆಂಬ ಮಾತನ್ನು ಹಲವಾರು ದೃಷ್ಟಾಂತಗಳೊಂದಿಗೆ ಹೇಳಿದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಳವಾಗಿ ಮುಕ್ತಾಯಗೊಂಡಿತ್ತು, 

ಇತ್ತೀಚಿನ ಸುದ್ದಿ

ಜಾಹೀರಾತು