9:19 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಕಾರವಾರ ‘ಸಿದ್ಧಬಸವೇಶ್ವರ’ ಅನುಭವ ಮಂಟಪದಲ್ಲಿ ‘ಅನುಭಾವ ಸಂಗಮ’ ಸಂಪನ್ನ

26/08/2022, 20:49

ಕಾರವಾರ(reporterkarnataka.com):
ಶರಣ ಮಾಸದ ಕೊನೆಯ ಸೋಮವಾರದಂದು ಸುಕ್ಷೇತ್ರ ಕಾರವಾರದ ಬಂಗಾರಪ್ಪ ಕಾಲೋನಿಯ “ಸಿದ್ಧಬಸವೇಶ್ವರ” ಅನುಭವ ಮಂಟಪದಲ್ಲಿ “ಅನುಭಾವ ಸಂಗಮ” ಕಾರ್ಯಕ್ರಮ ಸಂತೋಷ ಸಡಗರದಿಂದ ಸಂಪನ್ನಗೊಂಡಿತು.


ಅಂದು ಶರಣ ಸಿದ್ದಯ್ಯಸ್ವಾಮಿ ಚೌಕಿಮಠ ಗೋನಾಳ ಅವರೊಂದಿಗೆ ಅವರ ಸಹೋದರರ ಕುಟುಂಬವು ಪ್ರತಿವರ್ಷದಂತೆ ಸ್ಥಳೀಯ ಆಯುಷ ಇಲಾಖೆಯ ಮುಖ್ಯಸ್ಥರಾದ ಶರಣ ಡಾ.ಮಲ್ಲಿಕಾರ್ಜುನ ಹಿರೇಮಠ ಮಸ್ಕಿ ಅವರ ನೇತೃತ್ವದಲ್ಲಿ ಒಂದಾಗಿ ಸಕಲ ಸಿದ್ದತೆಯನ್ನು ಮಾಡಿದ್ದಾರೆ. ಹಾಗೆಯೆ ಅಂದು ಸಮಾರಂಭದಲ್ಲಿ ಅಕ್ಕಪಕ್ಕದ ಎಲ್ಲಾ ಜನಸಮುದಾಯದ ಜನಾಸಕ್ತರು ಭಾಗವಹಿಸಿದ್ದು, ನಿಜಕ್ಕೂ “ಇವನಮ್ಮವ” ಎಂಬ ಅಪ್ಪ ಸಂಗನಬಸವಣ್ಣ ಅವರ ಪವಿತ್ರ ವಚನವು ನೆನಪಿಗೆ ತರುವಂತೆ ಆಯೋಜನೆಗೊಂಡಿದೆ. ಅಂದು ಅಲ್ಲಮಪ್ರಭೂ ಅನುಭಾವ ಪೀಠ, ಕಾಂತಾವರ, ಕಾರ್ಕಳ, ಉಡುಪಿಯ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ ಅವರು ಬಸವಾದಿ ಶರಣರ ಅನೇಕ ಪವಿತ್ರ ವಚನಗಳನ್ನು ಉಲ್ಲೇಖಿಸುತ್ತಾ, ಅಪ್ಪ ಸಂಗನಬಸವಣ್ಣ ಅವರು ಹಾಕಿಕೊಟ್ಟ ಪಥವನ್ನು ನಾವೆಲ್ಲರೂ ಅನುಸರಿಸಿದರೆ ಮಾತ್ರ ಈ ಜಗತ್ತಿನ ಭಾವಿ ಜನಾಂಗವು ಸುರಕ್ಷಿತವಾಗಿ ಬದುಕಲು ಸಾಧ್ಯವೆಂಬ ಮಾತನ್ನು ಹಲವಾರು ದೃಷ್ಟಾಂತಗಳೊಂದಿಗೆ ಹೇಳಿದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಳವಾಗಿ ಮುಕ್ತಾಯಗೊಂಡಿತ್ತು, 

ಇತ್ತೀಚಿನ ಸುದ್ದಿ

ಜಾಹೀರಾತು