4:42 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಪೌರಕಾರ್ಮಿಕರ ರಾಜ್ಯಾಧ್ಯಕ್ಷರಾಗಿ ಕೆ.ಪ್ರಭಾಕರ ಆಯ್ಕೆ: ಕೂಡ್ಲಿಗಿ ನಾಗರೀಕರಿಂದ ಅಭಿನಂದನೆ 

14/06/2022, 20:50

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಇತ್ತಿಚೆಗಷ್ಟೆ ಕರಾಪೌಸೇ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ. ಕೂಡ್ಲಿಗಿಯ  ಕೆ.ಪ್ರಭಾಕರ ರವರನ್ನು ಅವರ ಸ್ನೇಹಿತರು, ಹಿತೈಷಿಗಳು, ಸಮಾಜದ ಹಿರಿಯರು ಹಾಗೂ ಯುವಕರು, ಕೆ.ಪ್ರಭಾಕರವರಿಗೆ ಸನ್ಮಾನಿಸಿದರು ಮತ್ತು ಸಿಹಿ ತಿನಿಸು ಮೂಲಕ ಅವರನ್ನು ಅಭಿನಂದಿಸಿದರು. 


ಯುವಕರು ನೆರೆದವರೆಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ, ದಲಿತ ಯುವ ಮುಖಂಡ, ಹೋರಾಟಗಾರರಾದ  ಸಾಲುಮನಿ ರಾಘವೇಂದ್ರ ಪ್ರಭಾಕರರನ್ನು ಅಭಿನಂದಿಸಿ ಮಾತನಾಡಿದರು, ಕೂಡ್ಲಿಗಿ ಪಟ್ಟಣದ ದಲಿತ ಸಮುದಾಯದ ಕಡುಬಡತನದಿಂದ. ಹೊರಹೊಮ್ಮಿರುವ ರಾಜ್ಯದ ಯುವ ದುರೀಣರಾಗಿದ್ದಾರೆ. ಅವರು ಕರ್ನಾಟಕ ರಾಜ್ಯದ ಪೌರ ನೌಕರರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.ದಲಿತ ಸಮುದಾಯ ಮಾತ್ರವಲ್ಲ,ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆಯಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.

ಅಭಿನಂದನೆಗಳನ್ನು ಸ್ವೀಕರಿಸಿದ ರಾಜ್ಯಾಧ್ಯಾಕ್ಷ ಕೆ.ಪ್ರಭಾಕರ್ ಮಾತನಾಡಿ, ಕರ್ನಾಟಕ ರಾಜ್ಯದ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿರುವಂತಹ, ಮಾಜಿ ರಾಜ್ಯಾಧ್ಯಕ್ಷರಾದ ಗೌರವಾನ್ವಿತ  ಜಿ.ಎಸ್.ಮಂಜುನಾಥ, ಹಿರಿಯ ಮುಖಂಡರಾದ ಎಲ್. ನಾರಾಯಣಾಚಾರ್ಯ, ಜೆ.ಟಿ. ಹನುಮಂತರಾಜು,ಚಂದ್ರಶೇಖರ್, ಜನ್ಮೋ ಜಿ ರಾವ್ , ಕುಳ್ಳೆಗೌಡ , ಗೋಪಾಲಕೃಷ್ಣ  ,ವೆಂಕಟೇಶ, ಗುರುನಾಥ ,ಮಾಯಣ್ಣ ಸೇರಿದಂತೆ  ಸಮಸ್ತ ಸಂಘಟನೆಯ ರಾಜ್ಯ ಪಧಾದಿಕಾರಿಗಳು ಹಾಗೂ ಸರ್ವರ ಸದಸ್ಯರಿಗೆ ಅಭಿನಂದಿಸುವೆ. ನನ್ನ ಏಳ್ಗೆಗೆ ಕಾರಣರಾದ ನನ್ನ ಗುರುಗಳಿಗೆ  ಸ್ನೇಹಿತರೆಲ್ಲರಿಗೂ,ರಾಜ್ಯದ ಸಮಸ್ತ ಪೌರ ಸೇವ ನೌಕರರಿಗೆ ಹಾಗೂ ನನ್ನ ಒಡನಾಡಿಗಳಿಗೆ, ಪೌರಕಾರ್ಮಿಕರೆಲ್ಲರ ಕುಟುಂಬಸ ಸದಸ್ಯೆರಿಗೆ, ನಲ್ಮೆಯ ಬಂಧುಗಳಿಗೆ ಹಾಗೂ ಹಿತೈಷಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೆನೆ ಎಂದರು. ನನ್ನ ಜನ್ಮಕ್ಕೆ ಹಾಗೂ ನನ್ನೆಲ್ಲಾ ಬೆಳವಣಿಗೆಗೆ ಕಾರಣವಾದ, ಕೂಡ್ಲಿಗಿ ಪಟ್ಟಣದ ಸಮಸ್ತ ನಾಗರೀಕರು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಎಲ್ಲಾ ಸಮಾಜದವರಿಗೂ,ಎಲ್ಲಾ ಜನಪ್ರತಿನಿಧಿಗಳಿಗೂ,ಎಲ್ಲಾ ಸ್ನೇಹಿತರಿಗೆ ಕೃತಜ್ಞನತೆಗಳನ್ನು ತಿಳಿಸುತ್ತಿರುವುದಾಗಿ.ನಾಡಿನ ಸಮಸ್ತ ಪೌರಸೇವಾ ನೌಕರರ ಹಿತಕ್ಕಾಗಿ ಪ್ರಾಮಣಿಕವಾಗಿ ದುಡಿಯುವೆ,ಅವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಧಕ್ಷತೆಯಿಂದ ಕಾರ್ಯನಿರ್ವಹಿಸುವೆ. ಈ ಮೂಲಕ ಅವರು ನನಗೆ ನೀಡಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತಷ್ಟು ಮೆರಗನ್ನು ತರುವಲ್ಲಿ ಶ್ರಮಿಸುವೆ ಎಂದರು. ವೇದಿಕೆಯಲ್ಲಿದ್ದ ಹಲವು ಮುಖ್ಯ ಅತಿಥಿಗಳು ಮಾತನಾಡಿದರು, ದಲಿತ ಸಮುದಾಯದ ಮುಖಂಡರು ಹಿರಿಯರು,ವಿವಿದ ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ದಲಿತ ಸಮಾಜ ಸೇರಿದಂತೆ ವಿವಿದ ಸಮಾಜದ ಯುವಕರು ನೂರಾರು ಹಿತೈಷಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು