3:05 PM Saturday27 - June 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;…

ಇತ್ತೀಚಿನ ಸುದ್ದಿ

ಪೌರಕಾರ್ಮಿಕರ ರಾಜ್ಯಾಧ್ಯಕ್ಷರಾಗಿ ಕೆ.ಪ್ರಭಾಕರ ಆಯ್ಕೆ: ಕೂಡ್ಲಿಗಿ ನಾಗರೀಕರಿಂದ ಅಭಿನಂದನೆ 

14/06/2022, 20:50

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಇತ್ತಿಚೆಗಷ್ಟೆ ಕರಾಪೌಸೇ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ. ಕೂಡ್ಲಿಗಿಯ  ಕೆ.ಪ್ರಭಾಕರ ರವರನ್ನು ಅವರ ಸ್ನೇಹಿತರು, ಹಿತೈಷಿಗಳು, ಸಮಾಜದ ಹಿರಿಯರು ಹಾಗೂ ಯುವಕರು, ಕೆ.ಪ್ರಭಾಕರವರಿಗೆ ಸನ್ಮಾನಿಸಿದರು ಮತ್ತು ಸಿಹಿ ತಿನಿಸು ಮೂಲಕ ಅವರನ್ನು ಅಭಿನಂದಿಸಿದರು. 


ಯುವಕರು ನೆರೆದವರೆಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ, ದಲಿತ ಯುವ ಮುಖಂಡ, ಹೋರಾಟಗಾರರಾದ  ಸಾಲುಮನಿ ರಾಘವೇಂದ್ರ ಪ್ರಭಾಕರರನ್ನು ಅಭಿನಂದಿಸಿ ಮಾತನಾಡಿದರು, ಕೂಡ್ಲಿಗಿ ಪಟ್ಟಣದ ದಲಿತ ಸಮುದಾಯದ ಕಡುಬಡತನದಿಂದ. ಹೊರಹೊಮ್ಮಿರುವ ರಾಜ್ಯದ ಯುವ ದುರೀಣರಾಗಿದ್ದಾರೆ. ಅವರು ಕರ್ನಾಟಕ ರಾಜ್ಯದ ಪೌರ ನೌಕರರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.ದಲಿತ ಸಮುದಾಯ ಮಾತ್ರವಲ್ಲ,ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆಯಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.

ಅಭಿನಂದನೆಗಳನ್ನು ಸ್ವೀಕರಿಸಿದ ರಾಜ್ಯಾಧ್ಯಾಕ್ಷ ಕೆ.ಪ್ರಭಾಕರ್ ಮಾತನಾಡಿ, ಕರ್ನಾಟಕ ರಾಜ್ಯದ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿರುವಂತಹ, ಮಾಜಿ ರಾಜ್ಯಾಧ್ಯಕ್ಷರಾದ ಗೌರವಾನ್ವಿತ  ಜಿ.ಎಸ್.ಮಂಜುನಾಥ, ಹಿರಿಯ ಮುಖಂಡರಾದ ಎಲ್. ನಾರಾಯಣಾಚಾರ್ಯ, ಜೆ.ಟಿ. ಹನುಮಂತರಾಜು,ಚಂದ್ರಶೇಖರ್, ಜನ್ಮೋ ಜಿ ರಾವ್ , ಕುಳ್ಳೆಗೌಡ , ಗೋಪಾಲಕೃಷ್ಣ  ,ವೆಂಕಟೇಶ, ಗುರುನಾಥ ,ಮಾಯಣ್ಣ ಸೇರಿದಂತೆ  ಸಮಸ್ತ ಸಂಘಟನೆಯ ರಾಜ್ಯ ಪಧಾದಿಕಾರಿಗಳು ಹಾಗೂ ಸರ್ವರ ಸದಸ್ಯರಿಗೆ ಅಭಿನಂದಿಸುವೆ. ನನ್ನ ಏಳ್ಗೆಗೆ ಕಾರಣರಾದ ನನ್ನ ಗುರುಗಳಿಗೆ  ಸ್ನೇಹಿತರೆಲ್ಲರಿಗೂ,ರಾಜ್ಯದ ಸಮಸ್ತ ಪೌರ ಸೇವ ನೌಕರರಿಗೆ ಹಾಗೂ ನನ್ನ ಒಡನಾಡಿಗಳಿಗೆ, ಪೌರಕಾರ್ಮಿಕರೆಲ್ಲರ ಕುಟುಂಬಸ ಸದಸ್ಯೆರಿಗೆ, ನಲ್ಮೆಯ ಬಂಧುಗಳಿಗೆ ಹಾಗೂ ಹಿತೈಷಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೆನೆ ಎಂದರು. ನನ್ನ ಜನ್ಮಕ್ಕೆ ಹಾಗೂ ನನ್ನೆಲ್ಲಾ ಬೆಳವಣಿಗೆಗೆ ಕಾರಣವಾದ, ಕೂಡ್ಲಿಗಿ ಪಟ್ಟಣದ ಸಮಸ್ತ ನಾಗರೀಕರು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಎಲ್ಲಾ ಸಮಾಜದವರಿಗೂ,ಎಲ್ಲಾ ಜನಪ್ರತಿನಿಧಿಗಳಿಗೂ,ಎಲ್ಲಾ ಸ್ನೇಹಿತರಿಗೆ ಕೃತಜ್ಞನತೆಗಳನ್ನು ತಿಳಿಸುತ್ತಿರುವುದಾಗಿ.ನಾಡಿನ ಸಮಸ್ತ ಪೌರಸೇವಾ ನೌಕರರ ಹಿತಕ್ಕಾಗಿ ಪ್ರಾಮಣಿಕವಾಗಿ ದುಡಿಯುವೆ,ಅವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಧಕ್ಷತೆಯಿಂದ ಕಾರ್ಯನಿರ್ವಹಿಸುವೆ. ಈ ಮೂಲಕ ಅವರು ನನಗೆ ನೀಡಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತಷ್ಟು ಮೆರಗನ್ನು ತರುವಲ್ಲಿ ಶ್ರಮಿಸುವೆ ಎಂದರು. ವೇದಿಕೆಯಲ್ಲಿದ್ದ ಹಲವು ಮುಖ್ಯ ಅತಿಥಿಗಳು ಮಾತನಾಡಿದರು, ದಲಿತ ಸಮುದಾಯದ ಮುಖಂಡರು ಹಿರಿಯರು,ವಿವಿದ ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ದಲಿತ ಸಮಾಜ ಸೇರಿದಂತೆ ವಿವಿದ ಸಮಾಜದ ಯುವಕರು ನೂರಾರು ಹಿತೈಷಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು