7:38 AM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಮುಖಂಡರೊಬ್ಬರ ದರ್ಬಾರ್: ನಿಯಮ ಮೀರಿ ಕಾರಿನ ವಿನ್ಯಾಸ ಮಾರ್ಪಾಡು !!: ಅಧಿಕಾರಿಗಳು ಕ್ರಮ ಕೈಗೊಳ್ಳುವರೇ? ಇಲ್ಲ ಸೆಲ್ಯೂಟ್ ಹೊಡೆಯುವರೇ?

03/06/2022, 09:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

ಬಿಜೆಪಿ ಮುಖಂಡರೊಬ್ಬರು ತನಗೆ ಮನಸ್ಸಿಗೆ ಬಂದಂತೆ ಕಾರಿನ ಮೂಲ ಬಣ್ಣ ಸೇರಿದಂತೆ ಇತರ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಓಡಾಡುವ ಮೂಲಕ ಅಂಧ ದರ್ಬಾರ್ ಪ್ರದರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ .

ಇವತ ಹೆಸರು ಎಚ್ .ಸಿ .ತಿಮ್ಮೇಗೌಡ .ಊರು : ಬೆಂಗಳೂರಿನ ಬ್ಯಾಟರಾಯನಪುರ .

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ . ಜತೆಗೆ ಕೇಸರಿ ಫೌಂಡೇಷನ್ ನ ಸಂಸ್ಥಾಪಕ !!

ಕಾರಿಗೆ ಕಣ್ಣಿಗೆ ರಾಚುವಂಥ ಕೇಸರಿ ಬಣ್ಣ. ಹಿಂಬದಿ ಗಾಜಿನಲ್ಲಿ ಇವರ ಭಾವಚಿತ್ರದ ಜತೆಗೆ ಹುದ್ದೆಗಳ ಹೆಸರು .!!

(ಗಾಜುಗಳು ಮುಕ್ತವಾಗಿರಬೇಕು ಎಂಬ ನಿಯಮ ಇದೆ )ಬದಿಯ ಗಾಜುಗಳಿಗೂ ಬಣ್ಣ ಲೇಪನ .

ಬದಿಯ  ಭಾಗದಲ್ಲಿಯೂ ಈತನ ಭಾವಚಿತ್ರ ಜತೆಗೆ ಸಂಪರ್ಕ ಸಂಖ್ಯೆ .
ಹೀಗೆ ಅವಾಂತರಗಳ ಮೇಲೆ ಅವಾಂತರ.ಸಣ್ಣಪುಟ್ಟವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವ ಪೋಲಿಸರು , ಸಾರಿಗೆ ಇಲಾಖೆ ಅಧಿಕಾರಿಗಳು  ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿ ಯಾಗಿದ್ದು  5 ಬಸ್ಸುಗಳಲ್ಲಿ ಜನರನ್ನು ಶೃಂಗೇರಿ – ಹೊರನಾಡು ಇನ್ನಿತರ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆತಂದಿರುವುದು ವಿಶೇಷ .


ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಕ್ರಮ ಕೈಗೊಳ್ಳುವರೇ ಅಥವಾ ಸೆಲ್ಯೂಟ್ ಹೊಡೆದು ಹಾಗೆ ಕಳಿಸುವರೇ  ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು