2:25 AM Thursday18 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಮುಖಂಡರೊಬ್ಬರ ದರ್ಬಾರ್: ನಿಯಮ ಮೀರಿ ಕಾರಿನ ವಿನ್ಯಾಸ ಮಾರ್ಪಾಡು !!: ಅಧಿಕಾರಿಗಳು ಕ್ರಮ ಕೈಗೊಳ್ಳುವರೇ? ಇಲ್ಲ ಸೆಲ್ಯೂಟ್ ಹೊಡೆಯುವರೇ?

03/06/2022, 09:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

ಬಿಜೆಪಿ ಮುಖಂಡರೊಬ್ಬರು ತನಗೆ ಮನಸ್ಸಿಗೆ ಬಂದಂತೆ ಕಾರಿನ ಮೂಲ ಬಣ್ಣ ಸೇರಿದಂತೆ ಇತರ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಓಡಾಡುವ ಮೂಲಕ ಅಂಧ ದರ್ಬಾರ್ ಪ್ರದರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ .

ಇವತ ಹೆಸರು ಎಚ್ .ಸಿ .ತಿಮ್ಮೇಗೌಡ .ಊರು : ಬೆಂಗಳೂರಿನ ಬ್ಯಾಟರಾಯನಪುರ .

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ . ಜತೆಗೆ ಕೇಸರಿ ಫೌಂಡೇಷನ್ ನ ಸಂಸ್ಥಾಪಕ !!

ಕಾರಿಗೆ ಕಣ್ಣಿಗೆ ರಾಚುವಂಥ ಕೇಸರಿ ಬಣ್ಣ. ಹಿಂಬದಿ ಗಾಜಿನಲ್ಲಿ ಇವರ ಭಾವಚಿತ್ರದ ಜತೆಗೆ ಹುದ್ದೆಗಳ ಹೆಸರು .!!

(ಗಾಜುಗಳು ಮುಕ್ತವಾಗಿರಬೇಕು ಎಂಬ ನಿಯಮ ಇದೆ )ಬದಿಯ ಗಾಜುಗಳಿಗೂ ಬಣ್ಣ ಲೇಪನ .

ಬದಿಯ  ಭಾಗದಲ್ಲಿಯೂ ಈತನ ಭಾವಚಿತ್ರ ಜತೆಗೆ ಸಂಪರ್ಕ ಸಂಖ್ಯೆ .
ಹೀಗೆ ಅವಾಂತರಗಳ ಮೇಲೆ ಅವಾಂತರ.ಸಣ್ಣಪುಟ್ಟವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವ ಪೋಲಿಸರು , ಸಾರಿಗೆ ಇಲಾಖೆ ಅಧಿಕಾರಿಗಳು  ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿ ಯಾಗಿದ್ದು  5 ಬಸ್ಸುಗಳಲ್ಲಿ ಜನರನ್ನು ಶೃಂಗೇರಿ – ಹೊರನಾಡು ಇನ್ನಿತರ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆತಂದಿರುವುದು ವಿಶೇಷ .


ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಕ್ರಮ ಕೈಗೊಳ್ಳುವರೇ ಅಥವಾ ಸೆಲ್ಯೂಟ್ ಹೊಡೆದು ಹಾಗೆ ಕಳಿಸುವರೇ  ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು