1:29 AM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕುತುಬ್‌ ಮಿನಾರ್‌: ಪುರಾತತ್ವ ಇಲಾಖೆ ಮಾಜಿ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದೇನು..?

19/05/2022, 12:51

ಹೊಸದಿಲ್ಲಿ(reporterkarnataka.com): ಕುತುಬ್ ಮಿನಾರ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.ದೇಶದೆಲ್ಲೆಡೆ ಸ್ಮಾರಕಗಳ ಬಗ್ಗೆ ವಿವಾದಗಳು ಭುಗಿಲೇಳುತ್ತಿರುವ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕರು ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಅದೇನೆಂದರೆ ಕುತುಬ್‌ ಮಿನಾರ್‌ ನಿರ್ಮಿಸಿದ್ದು ಕುತುಬ್‌ ಉದ್‌ ದೀನ್‌ ಐಬಕ್‌ ಅಲ್ಲ ಎಂದು ಹೇಳಿದ್ದಾರೆ.

5ನೇ ಶತಮಾನದಲ್ಲಿ ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ  ವಿಕ್ರಮಾದಿತ್ಯ ಎಂಬ ರಾಜನು ಸೂರ್ಯನ ಪರಿವೀಕ್ಷಣೆಗೆ ಅದನ್ನು ನಿರ್ಮಾಣ ಮಾಡಿದ್ದಾನೆ. ಇದು ಕುತುಬ್ ಮಿನಾರ್ ಅಲ್ಲ ಸೂರ್ಯ ಗೋಪುರ (ವೀಕ್ಷಣಾ ಗೋಪುರ) ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆ ಅನೇಕ ಪುರಾವೆಗಳಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದಾರೆ. ಎಎಸ್ ಐ ಪರವಾಗಿ ಹಲವು ಬಾರಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಕುತುಬ್‌ ಗೋಪುರವು 25 ಇಂಚು ಓರೆಯಾಗಿದೆ. ಸೂರ್ಯನನ್ನು ವೀಕ್ಷಿಸಲು ಅನುಕೂಲವಾಗಲೆಂದು ಈ ರಚನೆಯಿದೆ. ಜೂನ್‌ 21ರಂದು ಅಯನ ಸಂಕ್ರಾಂತಿಯ ನಡುವೆ ಆ ಪ್ರದೇಶದ ಮೇಲೆ ಕನಿಷ್ಟ ಅರ್ಧಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಮತ್ತು ಪುರಾತತ್ತ್ವ ಶಾಸ್ತ್ರದ ಸತ್ಯ. ಕುತುಬ್‌ ಮಿನಾರ್‌ ಗೂ ಅದರ ಪಕ್ಕದಲ್ಲಿರುವ ಮಸೀದಿಗೂ ಯಾವುದೇ ಸಂಬಂಧವಿಲ್ಲ. ಕುತುಬ್‌ ಮಿನಾರ್‌ ಎಂದು ಕರೆಯಲ್ಪಡುವ ಕಟ್ಟಡವು ಸ್ವತಂತ್ರ ರಚನೆಯಾಗಿದೆ. ಕುತುಬ್ ಮಿನಾರ್‌ನ ಬಾಗಿಲು ಕೂಡ ಉತ್ತರಕ್ಕೆ ಮುಖ ಮಾಡಿದೆ. ಇದು ರಾತ್ರಿ ಸಮಯದಲ್ಲಿ ಧ್ರುವ ನಕ್ಷತ್ರವನ್ನು ನೋಡುವುದನ್ನು ಸೂಚಿಸುತ್ತದೆ.


ಈ ಮಾತುಗಳನ್ನಾಡಿರುವ ಶರ್ಮಾ ಅವರು ಹಲವು ಬಾರಿ ಎಎಸ್ ಐ ಪರವಾಗಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು