1:26 PM Wednesday8 - July 2026
ಬ್ರೇಕಿಂಗ್ ನ್ಯೂಸ್
ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ…

ಇತ್ತೀಚಿನ ಸುದ್ದಿ

ಮಲಬದ್ಧತೆ: ಇದು ಕಾಯಿಲೆಯೇ? ಇದಕ್ಕೆ ಏನು ಕಾರಣ? ಔಷಧ ಇಲ್ಲದೆ ನಿವಾರಣೆ ಹೇಗೆ ಸಾಧ್ಯ?

02/04/2022, 00:48

ವಯಸ್ಕರಲ್ಲಿ ಹಲವು ಜನರು ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಕರುಳಿನ ಚಲನೆಯಲ್ಲಿ ವ್ಯತ್ಯಯ ಉಂಟಾಗಿ ಮಲದ ವಿಸರ್ಜನೆ ಕಷ್ಟವಾಗಿ ಹಲವಾರು ದಿನ ಅಥವಾ ವಾರಗಳವರೆಗೆ ಉಳಿಯುವುದನ್ನು ಮಲಬದ್ಧತೆ ಎನ್ನುತ್ತಾರೆ. ಸಾಮಾನ್ಯವಾಗಿ ದಿನಂಪ್ರತಿ ವಿಸರ್ಜನೆ ಆದರೆ ಇನ್ನೂ ಕೆಲವರಿಗೆ ಎರಡು ಅಥವಾ ಮೂರು ದಿನಗಳಿಗೊಮ್ಮೆ ಮಲ ವಿಸರ್ಜನೆಯ ಅಭ್ಯಾಸವಿರುತ್ತದೆ. ಇದು ಯಾವುದೇ ರೀತಿಯ ಖಾಯಿಲೆಯಲ್ಲ. ಇದನ್ನು ಸ್ವಾಭಾವಿಕ ಎಂದೇ ಪರಿಗಣಿಸಬಹುದು.

ಮಲಬದ್ಧತೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

1. ಆಟೋನಿಕ್ : ಇದರಲ್ಲಿ ನಮ್ಮ ಕರುಳು ಹಾಗೂ

ಗುದ ನಾಳದ ಮಾಂಸಖಂಡಗಳ ಚಲನೆ ಕುಂಠಿತವಾಗಿ  ಮಲಬದ್ಧತೆ ಉಂಟಾಗುತ್ತದೆ.

2. ಸ್ಪಾಸ್ಟಿಕ್ : ಈ  ವಿಧದಲ್ಲಿ  ಕರುಳು ಸಂಕುಚಿತವಾಗಿ ವಿಸರ್ಜನೆ ಆಗಬೇಕಾದ ವಸ್ತು ಮುಂದಕ್ಕೆ ತಳ್ಳಲ್ಪಡದೆ ಇರುವುದರಿಂದ ಮಲಬದ್ಧತೆ ಉಂಟಾಗುತ್ತದೆ.

ಕಾರಣಗಳು ಏನು?:

    ●ಅನಿಯಮಿತ ಅವಧಿಯಲ್ಲಿ ಆಹಾರ ಸೇವನೆ

    ●ನೀರು ಕುಡಿಯದೇ ಇರುವುದು 

    ●ಆಹಾರದಲ್ಲಿ ನಾರಿನಾಂಶದ ಕೊರತೆ

    ●ಮಾನಸಿಕ ಒತ್ತಡ, ಖಿನ್ನತೆ

    ●IBS, ಥೈರೋಯ್ಡ್, ಹರ್ನಿಯ,  ಮೂಲವ್ಯಾಧಿಯಂತಹ ತೊಂದರೆಗಳಿಂದ

    ●ವ್ಯಾಯಾಮವಿಲ್ಲದೆ ಇರುವುದು

    ●Laxative ಗಳ ಮೇಲೆ ದೀರ್ಘಕಾಲದಿಂದ ಅವಲಂಬಿತರಾಗಿರುವುದು.

    ●ಕೆಲವೊಂದು ಔಷಧಗಳ ಬಳಕೆ

ಲಕ್ಷಣಗಳು :

    ●ತಲೆನೋವು

    ●ನಾಲಗೆ ಮೇಲ್ಪದರ ಬಿಳಿ ಹೊದಿಕೆ

    ●ಬಾಯಿಯ ದುರ್ವಾವಾಸನೆ

    ●ಹಸಿವಿಲ್ಲದಿರುವುದು

    ●ಹೊಟ್ಟೆ ಭಾರ

    ●ಈ ಎಲ್ಲಾ ಲಕ್ಷಣಗಳು ಮಲವಿಸರ್ಜನೆಯ ನಂತರ ವಾಸಿಯಾಗುವುದನ್ನು ಕಾಣಬಹುದು.

ಔಷಧ ರಹಿತ ಚಿಕಿತ್ಸೆ:

ನಾವು ತಿನ್ನುವ ಆಹಾರ ಮಲಬದ್ಧತೆ ಉಂಟಾಗಲು  

ಪ್ರಮುಖ ಕಾರಣವಾಗಿದೆ. ಹಾಗಾಗಿ ನಮ್ಮ ದೈನಂದಿನ ಆಹಾರದಲ್ಲಿ ದವಸ ಧಾನ್ಯ , ಹಸಿರು ತರಕಾರಿ, ನುಗ್ಗೆ ಕಾಯಿ, ಬಸಳೆ ಸೊಪ್ಪು, ಹರಿವೆ, ಬೆಂಡೆ ಕಾಯಿಯಂತಹ ತರಕಾರಿಗಳನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆ ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. 

ಅಗಸೆ ಬೀಜದಲ್ಲಿ  ನಾರಿನಾಂಶ ಹೆಚ್ಚಿರುವುದಲ್ಲದೆ ಒಮೆಗಾ 3 ಫ್ಯಾಟಿ ಆಸಿಡ್ ಅನ್ನು ಹೊಂದಿರುವುದರಿಂದ ಮಲಬದ್ಧತೆ ನಿವಾರಿಸುವುದಲ್ಲದೆ ಚರ್ಮದ ಆರೋಗ್ಯಕ್ಕೂ ಸಹಾಯಕಾರಿಯಾಗಿದೆ.

ಒಣ ದ್ರಾಕ್ಷಿ, ಪ್ರೂನ್ ಹಣ್ಣು, ಮೆಂತೆ ಕಾಳು, ಎಳ್ಳು,ಬಾರ್ಲಿಯು ಕೂಡ ಮಲಬದ್ಧತೆಗೆ ರಾಮಬಾಣವಾಗಿದೆ.

ಪ್ರತೀ ದಿನ 8-10 ಗ್ಲಾಸ್ ನೀರನ್ನು ಕುಡಿಯುವುದು ಅವಶ್ಯಕ.

ಬೆಳಗಿನ ಜಾವದಲ್ಲಿ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಉತ್ತಮ.ತಂಬಾಕು, ಅಲ್ಕೋಹಾಲ್ ಸೇವನೆ ತ್ಯಜಿಸಿ.

ನಡಿಗೆ,ಹೊಟ್ಟೆಯ ಮಾಂಸಖಂಡಗಳ ವ್ಯಾಯಾಮ ನಿರಂತರವಾಗಿ ಮಾಡುವುದು ಸಹಾಯಕಾರಿಯಾಗಿದೆ.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು