1:32 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಬೆಳಗಾವಿ: ಮುಳ್ಳೂರ ಆಯಿಲ್ ಮಿಲ್ ನಲ್ಲಿ ಭಾರಿ ಅಗ್ನಿ ದುರಂತ; 20 ಲಕ್ಷ ರೂ. ಮೌಲ್ಯದ ಶೇಂಗಾ ಎಣ್ಣೆ ನಾಶ

16/03/2022, 18:30

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com 

ಜಿಲ್ಲೆಯ ರಾಮದುರ್ಗ ಪಟ್ಟಣದ ಗಾಂಧಿನಗರದ ವೆಂಕಟೇಶ್ ಟಾಕೀಸ್ ಹಿಂದುಗಡೆ ಇರುವ ಸಿದ್ದೇಶ್ವರ ಆಯಿಲ್ ಇಂಡಸ್ಟ್ರಿಸ್  ಮುಳ್ಳೂರ ಆಯಿಲ್ ಮಿಲ್ ನಲ್ಲಿ ಬುಧವಾರ  ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಶೇಂಗಾ ಎಣ್ಣೆ ಸುಟ್ಟುಹೋಗಿದೆ.


ತಡರಾತ್ರಿ ಸುಮಾರು 2 ಗಂಟೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಮಿಲಗೆ ಬೆಂಕಿ ಕಾಣಿಸಿಕೊಂಡಿದೆ. ಈ ಆಯಿಲ್ ಮಿಲನಲ್ಲಿ ಶೇಂಗಾ ಎಣ್ಣೆ, ಸೂರ್ಯಪಾನ ಎಸ್ ಎಫ್  ಎಣ್ಣೆ  ತಯಾರಿ ಮಾಡಲಾಗುತ್ತಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಮಿಲಗೆ  ಬೆಂಕಿ ಹತ್ತಿ ಉರಿದಿದೆ.

ಸ್ಥಳಕ್ಕೆ ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯನ್ನು ನಂದಿಸಲು 5 ಗಂಟೆಗಳ ಕಾಲ ಬೇಕಾಯಿತು. 

ಸುಮಾರು 18 ರಿಂದ 20 ಲಕ್ಷ ಮೌಲ್ಯದ ಶೇಂಗಾ ಹಾಗೂ ಎಣ್ಣೆ ಸುಟ್ಟು ಭಸ್ಮವಾಗಿದೆ. 

ಬೆಂಕಿ ಕಾಣಿಸಿಕೊಂಡಿದ್ದು ನೋಡಿ ಸಾರ್ವಜನಿಕರು ಮಾಲೀರಿಗೆ  ಕರೆ ಮಾಡಿ ತಿಳಿಸಿದ್ದಾರೆ. 

ಅಗ್ನಿಶಾಮಕ ದಳದ ಅಧಿಕಾರಿಗಳಾದ ಮಂಜುನಾಥ ಕಲಾದಗಿ ಮಾತನಾಡಿ, ರಾತ್ರಿ 3 ಗಂಟೆಗೆ ಆಯಿಲ್ ಮಿಲ್ ನಲ್ಲಿ ಬೆಂಕಿ ಕಾಣಿಸಿ ಕೊಂಡಿರುವ ಸುದ್ದಿ ತಿಳಿತು. ಸುದ್ದಿಯನ್ನು ಕೇಳಿದ ತಕ್ಷಣ ನಾವು ಒಂದು ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋದೆವು. ಅಲ್ಲಿ ಬೆಂಕಿ ಅತಿ ಹೆಚ್ಚು ಇತ್ತು. ನಂತರ ನಾವು ಇನ್ನೊಂದು ನಮ್ಮ ಅಗ್ನಿ ಜಲವಾಹನ ತಂದು 2 ವಾಹನದಿಂದ ಸತತವಾಗಿ 5 ರಿಂದ 6 ಗಂಟೆ ಕಾರ್ಯಾಚರಣೆ ನಡೆಸಿ 6 ರಿಂದ 8 ಸಲಾ ನೀರನ್ನು ತರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಹೇಳಿದರು. 


ಶ್ರೀ ಸಿದ್ದೇಶ್ವರ ಆಯಿಲ್ ಇಂಡಸ್ಟ್ರಿಜ್  ಮುಳ್ಳೂರ ಆಯಿಲ್ ಮಿಲ್ ಮಾಲಿಕರಾದ ಸಿದ್ದು ಮಲ್ಲಿಕಾರ್ಜುನ್  ಮುಳ್ಳೂರ ಅವರು ಮಾತನಾಡಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದ್ದು ಸುಮಾರು 500 ಚಿಲ್  ಶೇಂಗಾ,  200 ಚಿಲ್ ಶೆಂಗಾ ಕಾಳೂ ಮತ್ತು ಎಣ್ಣೆ ಕೂಡಾ ಇತ್ತು ಸುಮಾರು 18 ರಿಂದ 20 ಲಕ್ಷ  ರೂಪಾಯಿ ವರಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು