10:06 AM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

‘ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್’ ವಿಷಯದ ಕುರಿತು ಒಂದು ದಿನದ ಅಧ್ಯಯನ ಪ್ರವಾಸ 

11/03/2022, 18:59

ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದಿಂದ “ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ ” ವಿಷಯದ ಕುರಿತಾದ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟಿಯ ಹಾಳೆ ತಟ್ಟೆ ರಫ್ತ್ತು ಉದ್ಯಮ ವಿಟ್ಲ ಕೊಡಪದವು ಸಮೀಪದ ರಾಜರಾಮ್ ಒಡೆತನದ ಇಕೋ ಬ್ಳಿಸ್ ಉದ್ಯಮಕ್ಕೆ ಭೇಟಿ ನೀಡಿ ಹಾಳೆ  ತಟ್ಟೆ ಉದ್ಯಮ, ಮಾರುಕಟ್ಟೆ ಸಂವರ್ಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳೆ  ತಟ್ಟೆ ಬೇಡಿಕೆ,ಪೂರೈಕೆ  ಮತ್ತು ಬೆಲೆಗಳ  ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಸ್ವದ್ಯೋಗಿಳಿಗೆ  ತಾವೇ ನಿರ್ಮಿಸಿ ವಿನ್ಯಾಸ ಗೊಳಿಸಿದ  ಯಂತ್ರೋಪಕರಣ ಮಾಹಿತಿ ಹಾಗೂ ಸಂಸ್ಥೆಯಲ್ಲಿನ  ಉದ್ಯೋಗಿಗಳಿಗೆ ಕೊಡಮಾಡುವ ಸೌಕರ್ಯ ಗಳ  ಬಗ್ಗೆ ಮಾಹಿತಿ ನೀಡಿದರು. ರಫ್ತ್ತುವಿನ ವಿವಿಧ ಹಂತಗಳ  ಬಗ್ಗೆ ವಿಸ್ತಾರವಾದ  ಮಾಹಿತಿಯನ್ನು ನೀಡಿದರು.ಕಲ್ಲಡ್ಕ ಸಮೀಪದ ಧೀರಜ್  ಹಾಗೂ ಅಜಿತ್ ಒಡೆತನದ ಫಾರ್ಚುನ್ ಪೆಟ್ ಜಾರ್ ಇಂಡಸ್ಟ್ರಿಗೆ ತೆರಳಿ  ವಿವಿಧ  ವಿನ್ಯಾಸದ ಶೀಷೆ ತಯಾರಿಕಾ ಮಾಹಿತಿಯನ್ನು  ಪಡೆಯಲಾಯಿತು. ನಾರಾಯಣ  ಸೋಮಯಾಜಿ ಎರಕಲ ಒಡೆತನದ ಐತಿಹಾಸಿಕ ಬ್ರಹತ್  ಹಂಚು, ಇಟ್ಟಿಗೆ ಮತ್ತು ಟೈಲ್ಸ್ ತಯಾರಿಕ ಘಟಕ ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಪ್ರೈವೆಟ್. ಲಿ. ಇಲ್ಲಿಗೆ ಭೇಟಿನೀಡಿ  ಸಂಸ್ಥೆಯ  ಇತಿಹಾಸ , ಪ್ರೋಸೆಸ್ಸಿಂಗ್, ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳು  ಅದರ ಮಾರುಕಟ್ಟೆ ವಿಚಾರದ  ಬಗ್ಗೆ ಮಾಹಿತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದು  ಕೊಂಡರು

 ಪ್ರಥಮ  ಬಿ. ಕಾಮ್ ಹಾಗೂ ಬಿ. ಬಿ. ಎ ಯ  ಒಟ್ಟು 123 ವಿದ್ಯಾರ್ಥಿ ಅಧ್ಯಯನ ಪ್ರವಾಸದಲ್ಲಿ  ಪಾಲ್ಗೊಂಡಿದ್ದು, ಸಂಸ್ಥೆಯ  ವಾಣಿಜ್ಯ  ಹಾಗೂ ಉದ್ಯಮಾಡಳಿತ ವಿಭಾಗದ ಉಪನ್ಯಾಸಕರಾದ ಶ್ರೀ ರಮಾನಾಥ್. ಎ, ಶಿವಪ್ರಸಾದ್. ಎಸ್ ಮತ್ತು ಕೃತಿಕಾ ಪಿ.ಎಸ್ ಮಾರ್ಗದರ್ಶನ  ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು