11:16 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಇತ್ತೀಚಿನ ಸುದ್ದಿ

ವೈದ್ಯ ಶಿಕ್ಷಣಕ್ಕೆ ಭಾರತೀಯರೇಕೆ ಉಕ್ರೇನ್ ಆಶ್ರಯಿಸಿದ್ದಾರೆ? ಇದಕ್ಕೆ ಏನು ಕಾರಣ? 

27/02/2022, 22:14

ಹೊಸದಿಲ್ಲಿ(reporterkarnataka.com): ಉಕ್ರೇನ್ ನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿರುವುದೇ ರಷ್ಯಾ ಜತೆ ಯುದ್ಧ ಆರಂಭವಾದ ಬಳಿಕ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳು 

ವಿಶೇಷವಾಗಿ ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ಆಯ್ಕೆ ಮಾಡುತ್ತಿದ್ದಾರೆ. ಹಾಗಾದರೆ ಇದಕ್ಕೆ ಕಾರಣಗಳೇನು? ಉಕ್ರೇನ್ ಭಾರತೀಯರ ಪಾಲಿಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಪ್ರಶಸ್ತ ಸ್ಥಳವಾಗಿರುವುದಾದರೂ ಹೇಗೆ? ನೋಡೋಣ ಬನ್ನಿ.

1. ಭಾರತದಲ್ಲಿ ಸರ್ಕಾರಿ ವೈದ್ಯ ಸೀಟು ಸಿಗದಿದ್ದವರಿಗೆ ಇಲ್ಲಿನ ಖಾಸಗಿ ಕಾಲೇಜುಗಳಿಗೆ ದುಬಾರಿ ಮೊತ್ತ ತೆರುವುದಕ್ಕಿಂತ ಉತ್ತಮ ಆಯ್ಕೆ ಉಕ್ರೇನ್. ವರದಿಗಳ ಪ್ರಕಾರ ವಾರ್ಷಿಕ ರುಪಾಯಿ 4 ಲಕ್ಷದ ಖರ್ಚಲ್ಲಿ ವೈದ್ಯ ಪದವಿ ಓದಬಹುದು. ಹಾಗೆಂದೇ ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹೊರದೇಶದವರ ಪೈಕಿ ಭಾರತದ ಪಾಲು ಶೇ. 22.

2. ಇಲ್ಲಿನ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆಯೂ ಒಳ್ಳೆಯ ಮಾತುಗಳಿವೆ. ಇಲ್ಲಿನ ವೈದ್ಯ ವಿಶ್ವವಿದ್ಯಾಲಯಗಳು ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣ ಗಳಿಸಿರುವುದರಿಂದ ಜಾಗತಿಕ ಅವಕಾಶಗಳು ಸುಲಭ.

3. ಇಲ್ಲಿ ಓದಿದವರು ಯುರೋಪಿನಲ್ಲಿ ವೃತ್ತಿ ಅವಕಾಶಗಳನ್ನು ಪಡೆಯುವುದಕ್ಕೂ ಹೆಚ್ಚು ಅನುಕೂಲವಾಗುತ್ತದೆ. ಏಕೆಂದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕೋರ್ಸುಗಳಿಗೆ ಯುರೋಪ್ ಮತ್ತು ಇಂಗ್ಲೆಂಡಿನ ಮೆಡಿಕಲ್ ಕೌನ್ಸಿಲ್ ಗಳು ಮಾನ್ಯತೆ ನೀಡಿವೆ.

4. ಹೆಚ್ಚಿನ ವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲ

5. ಯುರೋಪ್ ಎಂದಕೂಡಲೇ ಸಾಮಾನ್ಯವಾಗಿ ಇಂಗ್ಲೀಷೇತರ ಮಾಧ್ಯಮದಲ್ಲಿ ಕಲಿಕೆ ಇರುತ್ತದೆ. ಆದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುವುದು ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು