7:57 PM Friday30 - January 2026
ಬ್ರೇಕಿಂಗ್ ನ್ಯೂಸ್
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್

ಇತ್ತೀಚಿನ ಸುದ್ದಿ

7 ತಾಸಿನಲ್ಲಿ 2 ಟ್ರಾಲಿಯಲ್ಲಿ 28 ಟನ್ ಕಬ್ಬು ಹೇರಿದ ಯುವಕ!: ಅನೀಲ್ ಕಾಬು ಜಾಧವ ಹೊಸ ದಾಖಲೆ

26/02/2022, 12:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ‌ ಬರಮಖೋಡಿ ಗ್ರಾಮದ ಅನೀಲ್ ಕಾಬು ಜಾಧವ ಎಂಬ ಯುವಕ, ತಾನೊಬ್ಬನೇ ಕೇವಲ 7 ತಾಸಿನಲ್ಲಿ 2 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು, ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕನೋರ್ವ ಇಷ್ಟೆ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9  ತಾಸು 30 ನಿಮಿಷ ಸಮಯ ತಗೊಂಡಿದ್ದ ಇದೀಗ ಜಾಧವ ಗ್ಯಾಂಗಿನ ಅನೀಲ್ ಕಾಬು ಜಾಧವ ಎಂಬ ಯುವಕ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 7 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿ ಹಳೆಯ ದಾಖಲೆಯನ್ನು‌ ಮುರಿದಿದ್ದಾನೆ ಎಂದು ಜಾಧವ ಗ್ಯಾಂಗಿನ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ದಾಖಲೆಯನ್ನು ನೋಡಿ ಪರಿಶೀಲಿಸಿ ದೃಢಿಕರಿಸಿ ಮಾತನಾಡಿದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ‌ ಸೋನಕರ ಅವರು ಅನೀಲ ಜಾಧವ ಎರಡು ಟ್ರಾಲಿ‌ ಕಬ್ಬನ್ನು ಸುಮಾರು 7 ಗಂಟೆಯಲ್ಲಿ ಹೇರಿದ್ದು‌‌‌ ನಿಜ, ಇದು ಉಳಿದ ಕಬ್ಬು ಹೇರುವ ಗ್ಯಾಂಗಿನವರಿಗೆ ಸ್ಪೂರ್ತಿ, ಇಂತಹ ದಾಖಲೆ ನಮ್ಮ ವಾರ್ಡಿನಲ್ಲಿ ಜರುಗಿರುವುದು ನಮಗೂ ಕೂಡ ಹೆಮ್ಮೆ ಎಂದರು.


ಈ ಕಬ್ಬು ಹೇರುವ ವೇಳೆ ಜಾಧವ ಗ್ಯಾಂಗಿನ ಕಾಬು ಜಾಧವ, ಮುತ್ತಪ್ಪ ಜಾಧವ, ಸಕಾರಾಮ ಚವ್ಹಾಣ, ಅನೀಲ ಜಾಧವ, ರಾಜು ಮಾಳಿ, ರಾಮು ಮಾಳಿ, ಲಾಲಸಾಬ ನದಾಫ, ಮುನ್ನಾಸಾಬ ನದಾಫ, ಪಿಂಟು ಗಡದೆ, ಬಾಳು ಮಾನೆ, ದೀಪಕ ಮಾನೆ, ಮಂಜು ಚಮಕೇರಿ, ಜಾಫರ್ ನದಾಫ್, ಸುನೀಲ ಜಾಧವ, ಓಂಕಾರ ಜಾಧವ, ಸಂಜೀವ ಜಾಧವ, ರಾಜು ಜಾಧವ, ಬಸವರಾಜ ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು