3:10 AM Saturday16 - May 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ…

ಇತ್ತೀಚಿನ ಸುದ್ದಿ

7 ತಾಸಿನಲ್ಲಿ 2 ಟ್ರಾಲಿಯಲ್ಲಿ 28 ಟನ್ ಕಬ್ಬು ಹೇರಿದ ಯುವಕ!: ಅನೀಲ್ ಕಾಬು ಜಾಧವ ಹೊಸ ದಾಖಲೆ

26/02/2022, 12:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ‌ ಬರಮಖೋಡಿ ಗ್ರಾಮದ ಅನೀಲ್ ಕಾಬು ಜಾಧವ ಎಂಬ ಯುವಕ, ತಾನೊಬ್ಬನೇ ಕೇವಲ 7 ತಾಸಿನಲ್ಲಿ 2 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು, ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕನೋರ್ವ ಇಷ್ಟೆ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9  ತಾಸು 30 ನಿಮಿಷ ಸಮಯ ತಗೊಂಡಿದ್ದ ಇದೀಗ ಜಾಧವ ಗ್ಯಾಂಗಿನ ಅನೀಲ್ ಕಾಬು ಜಾಧವ ಎಂಬ ಯುವಕ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 7 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿ ಹಳೆಯ ದಾಖಲೆಯನ್ನು‌ ಮುರಿದಿದ್ದಾನೆ ಎಂದು ಜಾಧವ ಗ್ಯಾಂಗಿನ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ದಾಖಲೆಯನ್ನು ನೋಡಿ ಪರಿಶೀಲಿಸಿ ದೃಢಿಕರಿಸಿ ಮಾತನಾಡಿದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ‌ ಸೋನಕರ ಅವರು ಅನೀಲ ಜಾಧವ ಎರಡು ಟ್ರಾಲಿ‌ ಕಬ್ಬನ್ನು ಸುಮಾರು 7 ಗಂಟೆಯಲ್ಲಿ ಹೇರಿದ್ದು‌‌‌ ನಿಜ, ಇದು ಉಳಿದ ಕಬ್ಬು ಹೇರುವ ಗ್ಯಾಂಗಿನವರಿಗೆ ಸ್ಪೂರ್ತಿ, ಇಂತಹ ದಾಖಲೆ ನಮ್ಮ ವಾರ್ಡಿನಲ್ಲಿ ಜರುಗಿರುವುದು ನಮಗೂ ಕೂಡ ಹೆಮ್ಮೆ ಎಂದರು.


ಈ ಕಬ್ಬು ಹೇರುವ ವೇಳೆ ಜಾಧವ ಗ್ಯಾಂಗಿನ ಕಾಬು ಜಾಧವ, ಮುತ್ತಪ್ಪ ಜಾಧವ, ಸಕಾರಾಮ ಚವ್ಹಾಣ, ಅನೀಲ ಜಾಧವ, ರಾಜು ಮಾಳಿ, ರಾಮು ಮಾಳಿ, ಲಾಲಸಾಬ ನದಾಫ, ಮುನ್ನಾಸಾಬ ನದಾಫ, ಪಿಂಟು ಗಡದೆ, ಬಾಳು ಮಾನೆ, ದೀಪಕ ಮಾನೆ, ಮಂಜು ಚಮಕೇರಿ, ಜಾಫರ್ ನದಾಫ್, ಸುನೀಲ ಜಾಧವ, ಓಂಕಾರ ಜಾಧವ, ಸಂಜೀವ ಜಾಧವ, ರಾಜು ಜಾಧವ, ಬಸವರಾಜ ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು