12:41 AM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ವಿಟಮಿನ್ ‘ಎ’ ಪ್ರಾಮುಖ್ಯತೆ: ಯಾವುದರಲೆಲ್ಲ ಇದು ಸಿಗುತ್ತದೆ?; ಕೊರತೆಯ ಲಕ್ಷಣಗಳೇನು ?

28/01/2022, 23:31

ಮೊಟ್ಟ ಮೊದಲು ಕಂಡುಹಿಡಿದ ವಿಟಮಿನ್ ಅಂದರೆ ವಿಟಮಿನ್ A. ಇದು ಕಣ್ಣಿನ ಆರೋಗ್ಯಕ್ಕೆ ಬೇಕಾದ ಅತೀ ಮುಖ್ಯವಾದ ಅಂಶವಾಗಿದೆ. ಇದು ಸಸ್ಯಾಹಾರ ಹಾಗು ಮಾಂಸಾಹಾರ ಎರಡೂ ಮೂಲಗಳಿಂದ ದೊರೆಯುತ್ತದೆ.

ಮೊಟ್ಟೆ, ಕೋಳಿ ಮಾಂಸ, ಲಿವರ್, ಹಾಲು, ತುಪ್ಪ ,ಬೆಣ್ಣೆ, ಕಾಳುಗಳು , ಹಸಿರು ತರಕಾರಿ, ಕ್ಯಾರಟ್, ಸಿಹಿಗುಂಬಳಕಾಯಿ, ಹಳದಿ ಬಣ್ಣದ ಹಣ್ಣು ಪಪ್ಪಾಯ, ಮಾವಿನಕಾಯಿ, ಫಿಶ್ ಲಿವರ್ ಆಯಿಲ್ ಇವುಗಳಲ್ಲಿ ಹೇರಳವಾಗಿ ವಿಟಮಿನ್ A ಕಂಡು ಬರುತ್ತದೆ.

ಬೇರೆ ಬೇರೆ ಕಾರಣಗಳಿಂದ ಇದರ ಅಂಶದ ಕೊರತೆ  ನಮ್ಮ ದೇಹದಲ್ಲಿ ಕಂಡುಬರುತ್ತದೆ.

* ಜೀರ್ಣನಾಂಗವ್ಯೂಹದಲ್ಲಿನ ತೊಂದರೆಯಿಂದಾಗಿ ನಾವು ಸೇವಿಸಿದ ವಿಟಮಿನ್ಅನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದರಿಂದ

* ಲಿವರ್ /ಪಿತ್ತಜನಕಾಂಗದ ಖಾಯಿಲೆ

* ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಅಧಿಕ  ಬೇಡಿಕೆ  ಇದ್ದಾಗ ಸರಿಯಾಗಿ ಆಹಾರದಲ್ಲಿ ಪೂರೈಕೆ ಆಗದೇ ಇರುವುದರಿಂದ ವಿಟಮಿನ್ A ಕೊರತೆ ಉಂಟಾಗುತ್ತದೆ.

ಲಕ್ಷಣಗಳು ಏನು?:

ಮೊತ್ತ ಮೊದಲಿಗೆ ಕಂಡು ಬರುವ ಲಕ್ಷಣ ಎಂದರೆ ಇರುಳುಗಣ್ಣು, ಮಂದ ಬೆಳಕಿನಲ್ಲಿ ಸರಿಯಾಗಿ ಕಾಣಿಸದೇ ಇರುವುದು, ಒಣ ಚರ್ಮ, ಮೂಳೆಗಳ ಸರಿಯಾದ ಬೆಳವಣಿಗೆ ಆಗದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸೋಂಕು  ಸುಲಭವಾಗಿ ತಗಲುವುದು , ನರಗಳ ಕಾರ್ಯಕ್ಷಮತೆ ತಗ್ಗುವುದು, ಕಣ್ಣಿನ ಬಿಳಿಭಾಗಕ್ಕೆ ಸಂಬಂಧಿಸಿದ ತೊಂದರೆ, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಹೀನರನ್ನಾಗಿ ಮಾಡಬಹುದು.

RDA ಪ್ರಕಾರ ಒಬ್ಬ ಆರೋಗ್ಯವಂತನಿಗೆ, ಮಗುವಿನಿಂದ ಹಿಡಿದು ವಯಸ್ಕರವರೆಗೆ ದಿನವೊಂದಕ್ಕೆ ಸುಮಾರು 350ರಿಂದ 950 ಮೈಕ್ರೋ ಗ್ರಾಂನಷ್ಟು ವಿಟಮಿನ್ A ಆಹಾರದ ಮೂಲಕ ಸೇವನೆ ಮಾಡುವುದದಿಂದ ಈ ಎಲ್ಲಾ ತೊಂದರೆಗಳು ಬಾರದಂತೆ ತಡೆಗಟ್ಟಬಹುದು. ಹಾಗೆಂದು ಅತಿಯಾದ ಸೇವನೆಯೂ ಸಹ ತೊಂದರೆಯನ್ನ ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ಸೇವನೆ ಮಾಡುವುದು ಒಳಿತು.

✍️ ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ

ಇತ್ತೀಚಿನ ಸುದ್ದಿ

ಜಾಹೀರಾತು