1:07 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ನಕಲಿ ವೈದ್ಯರ ಹಾವಳಿ; ನಾಯಿಕೊಡೆ ತರಹ ತಲೆ ಎತ್ತುತ್ತಿರುವ ಖಾಸಗಿ ಕ್ಲಿನಿಕ್ ಗಳು

23/01/2022, 19:45

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನಲ್ಲಿ ಸರಕಾರಿ ವೈದ್ಯರ ಕೊರತೆ ಹೆಚ್ಚುತ್ತಲೇ ಇದ್ದು, ಇನ್ನೊಂದು ಕಡೆ ನಕಲಿ ವೈದ್ಯರ ಸಂಖ್ಯೆ ಕೂಡ ಕಡಿಮೆಯಾಗುತ್ತಿಲ್ಲ. ತಾಲೂಕಿನಲ್ಲಿ ಅಸಲಿ ವೈದ್ಯರು ಯಾರು ನಕಲಿ ಯಾರು ಎನ್ನುವ ಮಾಹಿತಿ  ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಗೆ ಇದ್ದರೂ ಸಹ ನಕಲಿ ವೈದ್ಯರಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ನಗರ  ಹಾಗೂ ಗ್ರಾಮೀಣ ಭಾಗಗಳಲ್ಲಿ ಖಾಸಗಿಯಾಗಿ ಕ್ಲಿನಿಕ್ ನಡೆಸುವ ಎಲ್ಲ ವೈದ್ಯರು ತಾಲೂಕು ಆರೋಗ್ಯಾಧಿಗಳ ಕಚೇರಿಯಲ್ಲಿ ಸಂಬಂದಪಟ್ಟ ದಾಖಲೆಗಳೊಂದಿಗೆ ನೊಂದಾಯಿಸಿ ಕೊಳ್ಳಬೇಕು. ಇಲ್ಲವಾದಲ್ಲಿ ಅವರು ನಕಲಿ ವೈದ್ಯರೆಂದು ಪರಿಗಣಿಸಿ ಕಾನೂನು  ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಜಾರಿ ಮಾಡಿದರೂ ಸಹ ಆರೋಗ್ಯ ಇಲಾಖೆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ರಾಜಾರೋಷವಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 62 ನಕಲಿ ವೈದ್ಯರು ಸೇವೆ ಸಲ್ಲಿಸುತ್ತಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಕೆಲವು ವೈದ್ಯರು ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಾಯಿ ಕೊಡೆಗಳಂತೆ ಹಬ್ಬಿದ ಕ್ಲಿನಿಕ್‍ಗಳು: ತಾಲೂಕಿನಲ್ಲಿ ಸರಕಾರಿ ವೈದ್ಯರ ಹುದ್ದೆ ಹಲವು ವರ್ಷಗಳಿಂದ ಖಾಲಿಯಾಗಿದ್ದು,ಖಾಸಗಿ ಕ್ಲಿನಿಕ್‍ಗಳು ಹೆಚ್ಚುತ್ತಿವೆ. ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವ ವೈದ್ಯರು ತಾವೆ ಖಾಸಗಿ ಕ್ಲಿನಿಕ್‍ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ದಮ್ಮಯ್ಯ ಎಂದರೂ ಸರಕಾರಿ ಆಸ್ಪತ್ರೆಗೆ ಎಂ.ಬಿ.ಬಿಎಸ್ ಪದವಿ ಪಡೆದವರು ಬರುತ್ತಿಲ್ಲ. ಇತ್ತೀಚಿನ  ದಿನಗಳಲ್ಲಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ವೈದ್ಯರನ್ನೇ ಜನರು ಹೊಣೆ ಮಾಡುತ್ತಿರುವುದು ಮತ್ತು ಹಲ್ಲೆಯಂತಹ ಘಟನೆ ನಡೆಯುವುದು ಸಹ ವೈದ್ಯರಿಗೆ ಸರಕಾರಿ ಸೇವೆ ಹಿಡಿಸದೇ ಇರಲು ಕಾರಣವೆಂದು ಹೇಳಲಾಗುತ್ತಿದೆ.

ಮೊತ್ತೊಂದೆಡೆ ಸರಕಾರಿ ವೈದ್ಯರೇ ತಮ್ಮ ಕರ್ತವ್ಯ ಮುಗಿಸಿದ ಮೇಲೆ ಖಾಸಗಿಯಾಗಿ ಕ್ಲಿನಿಕ್‍ಗಳನ್ನು  ನಡೆಸುತ್ತಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಖಾಸಗೀ ಕ್ಲಿನಿಕ್‍ಗಳ ಸಂಖ್ಯೆ ಕೂಡ ನಾಯಿ ಕೊಡೆಗಳಂತೆ ಹಬ್ಬಿವೆ. ಹೀಗಾಗಿ ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ ಸಹ ಖಾಲಿ ಖಾಲಿ ಖಾಸಗಿ ಆಸ್ಪತ್ರೆಯತ್ತ ಹೆಜ್ಜೆ ಹಾಕಲಾಗುತ್ತಿದೆ.

ನಕಲಿ ವೈದ್ಯರು: ಪಟ್ಟಣ ಹಾಗೂ ಗ್ರಾಮೀಣ ಭಾಗದ ಆಂಧ್ರ ಗಡಿಭಾಗ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಹತೆ ಪಡೆಯದ ವೈದ್ಯರ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಂಥವರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿಲ್ಲ. ಬದಲಾಗಿ ವೈದ್ಯರ ನೊಂದಣೆಗೆ ಸೂಚಿಸುತ್ತಿದೆ. ದಾಖಲೆ ಪತ್ರಗಳು ಮತ್ತು ಅರ್ಹತೆಯುಳ್ಳ ವೈದ್ಯರು ಮಾತ್ರ ನೊಂದಣೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅರ್ಹತೆಯಿಲ್ಲದ ವೈದ್ಯರು ವೈದ್ಯಕೀಯ ಭಾಷೆಯ ಪ್ರಕಾರ ನಕಲಿ ವೈದ್ಯರೆಂದೆ ಹೇಳಲಾಗುತ್ತಿದೆ. ಈಗಾಗಲೆ ಯಾರು ಅಸಲಿ- ನಕಲಿ ಎಂಬುವರ ಪಟ್ಟಿ ನಮ್ಮ ಬಳಿ ಇದೆ

ಎಂದು ಜಿಲ್ಲಾ ಕುಟುಂಬ ಆರೋಗ್ಯ ಇಲಾಖೆ ಅಧಿಕಾರಿ ಡಾ.ರಂಗನಾಥ್ ಅವರು ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇಂತಹ ಯಾವುದೇ ಪದ್ದತಿಯಲ್ಲೂ ಶಿಕ್ಷಣ ಪಡೆಯದೆ ಸಾರಾಸಗಟು ಎಲ್ಲ ಖಾಯಿಲೆಗಳಿಗೂ ಚಿಕಿತ್ಸೆ ನೀಡುವ ಸ್ವಯಂಘೋಸಿತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಇಂತಹ ಬಹುತೇಕ ವೈದ್ಯರಿಗೆ ವೈದ್ಯಕೀಯದ ಗಂಧ ಗಾಳಿಯೇ ಗೊತ್ತಿಲ್ಲ. ನೆಗೆಡೆಗೆ ಸಿಪಿಎಂ, ಜ್ವರಕ್ಕೆ ಪ್ಯಾರಸಿಟಮಲ್, ನೋವಿಗೆ ನ್ಯೂಮ್ಯೂಸೆಲೈಡ್, ಅಸಿಡಿಟಿಗೆ ರ್ಯಾಟೆಂಕ್, ಜಿಂಟಕ್ ಹೀಗೆ ಔಷಧಿ ಅಂಗಡಿಗಳಲ್ಲಿ ಲಭ್ಯವಾಗುವ ಕಳಪೆ ದರ್ಜೆಯ ಔಷಧಿಗಳನ್ನು ಖರೀದಿಸಿ ಚುಚ್ಚು ಮದ್ದು ಗ್ಲೂಕೋಸ್ ಹಾಕುತ್ತಿದ್ದಾರೆ.

ಎಲ್ಲೆಲ್ಲಿದ್ದಾರೆ: ಚಳ್ಳಕೆರೆ ನಗರದ ಗಾಂಧಿ ನಗರ, ರಹೀಂ ನಗರ, ವಿವಿಧ ವಾರ್ಡ್‍ಗಲ್ಲಿ ಹಾಗೂ ಗ್ರಾಮೀಣ ಭಾಗದ ಸಾಣೀಕೆರೆ, ದೊಡ್ಡಉಳ್ಳಾರ್ತಿ, ಹಿರೆಹಳ್ಳಿ, ನಾಯಕನಹಟ್ಟಿ, ಬೇಡರೆಡ್ಡಿಹಳ್ಳಿ, ಗೌರಸಮುದ್ರ, ದೊಡ್ಡಚೆಲ್ಲೂರು, ತಳಕು, ಮುಷ್ಠಲಗುಮ್ಮಿ ನಾಗಪ್ಪನಹಳ್ಳಿಗೇಟ್, ನಾರಾಯಣಪುರ, ಕಲಮರಹಳ್ಳಿ, ಹೀಗೆ ಮತ್ತಿತರ ಗಡಿ ಭಾಗಗಳಲ್ಲಿ  ಸುಮಾರು 62 ಜನರ ನಖಲಿ ವೈದ್ಯರು ರಾಜಾರೋಷವಾಗಿ ತಮ್ಮ ವೃತ್ತಿ ನಡೆಸುತ್ತಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಇವರು ನೀಡುವ ಅನೇಕ ಔಷಧಿಗಳು ತಾತ್ಕಾಲಿಕವಾಗಿ ಸಂಜೀವಿನಿಯಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಇವುಗಳ ಗಂಭೀರ ಪರಿಣಾಮಗಳಿಂದ ಜೀವಕ್ಕೆ ಮಾರಕವಾಗಿರುವ ಅನೇಕ ಉದಾಹರಣೆಗಳಿವೆ. ಕೂಡಲೇ ನಕಲಿ ವೈದ್ಯರು ಬಗ್ಗೆ ಸಂಬಂಧ ಪಟ್ಟ ಆರೋಗ್ಯ ಇಲಾಖೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು