1:28 PM Wednesday8 - July 2026
ಬ್ರೇಕಿಂಗ್ ನ್ಯೂಸ್
ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ…

ಇತ್ತೀಚಿನ ಸುದ್ದಿ

ರಕ್ತಹೀನತೆ: ಇದಕ್ಕೆ ಕಾರಣ ಏನು?; ರಕ್ತಹೀನತೆಯಿಂದ ಹೇಗೆ ಪಾರಾಗಬಹುದು?

22/01/2022, 08:03

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಗತ್ಯಕ್ಕಿಂತ ಪ್ರಮಾಣಕ್ಕಿಂತ ಕಡಿಮೆ ಆಗುವುದನ್ನು ರಕ್ತಹೀನತೆ ಎನ್ನುತ್ತಾರೆ. ಆರೋಗ್ಯವಂತರಲ್ಲಿ ಇದರ ಪ್ರಮಾಣ ಮಹಿಳೆಯರಲ್ಲಿ <12gm/dl ಹಾಗು ಪುರುಷರಲ್ಲಿ <13gm/ ಕಂಡು ಬರುತ್ತದೆ.
ಇದು ಇತ್ತೀಚಿನ ದಿನಮಾನದಲ್ಲಿ ಅತೀ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಸಮಸ್ಯೆ ಆಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ಕಾಣಬಹುದಾದೆ. ನಮ್ಮ ದೇಶದಲ್ಲಿ ಕಬ್ಬಿಣ ಅಂಶದ ಕೊರತೆಯಿಂದಾಗಿ ಬರುವ ರಕ್ತಹೀನತೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್, ಕ್ಯಾನ್ಸರ್, ಕೆಲವೊಂದು ಔಷಧಿಯ ಸೇವನೆಯಿಂದ, ಮಹಿಳೆಯರಲ್ಲಿ ಋತುಸ್ರಾವ, ಗರ್ಭಿಣಿಯರಲ್ಲಿ, ಬಾಣಂತಿಯರಲ್ಲಿ, ಹದಿಹರೆಯದ ಹೆಣ್ಣುಮಕ್ಕಳಲ್ಲಿ, ಜಂತುಹುಳುವಿನ ಸಮಸ್ಯೆಯಿಂದ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ರಕ್ತ ಹೀನತೆ ಕಂಡುಬರಬಹುದು.

ರಕ್ತಹೀನತೆಯಿಂದಾಗಿ ತಲೆಸುತ್ತವುದು, ಕೂದಲು ಉದುರುವುದು, ಉಬ್ಬಿದ ಉಗುರುಗಳು, ಉಸಿರಾಡಲು ತೊಂದರೆ, ಪದೇ ಪದೇ ಕಂಡುಬರುವ ಬಾಯಿಹುಣ್ಣು, ಆಯಾಸ, ಹೃದಯದ ಬಡಿತದಲ್ಲಿ ಏರಿಳಿತ, ಮುಟ್ಟಿನ ತೊಂದರೆಯೊಂದಿಗೆ , ಕೆಲವರಲ್ಲಿ ಆಹಾರೇತರ ವಸ್ತುಗಳಾದ ಮಂಜುಗಡ್ಡೆ, ಮಣ್ಣು, ಸೀಮೆಸುಣ್ಣದ ಸೇವನೆಯನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ಹಿಮೋಗ್ಲೋಬಿನ್ ಪ್ರಮಾಣವನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.

ರಕ್ತಹೀನತೆ ಸಮಸ್ಯೆಯಿಂದ ಮುಕ್ತರಾಗಬೇಕಾದರೆ ಮೊದಲು ಮೂಲ ಕಾರಣವನ್ನು ತಿಳಿದುಕೊಂಡು, ನಂತರ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯ ಕಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಆಹಾರಗಳಾದ ಹಸಿರು ತರಕಾರಿ, ಬೀಟ್ರೂಟ್, ಕ್ಯಾರಟ್, ಸೇಬು ಹಣ್ಣು, ದಾಳಿಂಬೆ ಹಣ್ಣು, ಬ್ರೋಕಲಿ, ಒಣ ದ್ರಾಕ್ಷಿ ಖರ್ಜುರ, ನುಗ್ಗೆಸೊಪ್ಪು,ಮಾಂಸಹಾರಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರಂಭಿಕ ಘಟ್ಟದಲ್ಲೇ ಪರಿಣಾಮಕಾರಿಯಾಗಿರುವುದು.

ರಕ್ತಹೀನತೆ ಎನ್ನುವುದು ಒಂದು ಖಾಯಿಲೆಯಲ್ಲ, ಕೆಲವೊಮ್ಮೆ ಇದು ಇತರ ರೋಗದ ಲಕ್ಷಣವಾಗಿರಬಹುದು. ಆದ್ದರಿಂದ ಇದನ್ನು ಕಡೆಗಣಿಸದೆ ಸೂಕ್ತ ಚಿಕಿತ್ಸೆಯನ್ನು ಆರಂಭಿಕ ಘಟ್ಟದಲ್ಲೇ ಪಡೆದುಕೊಳ್ಳುವುದರಿಂದ ಆರೋಗ್ಯದ  ಸುಸ್ಥಿತಿಯನ್ನು ಕಾಪಾಡಿಕೊಳ್ಳಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

drbhavyashetty10@gmail.com

ಇತ್ತೀಚಿನ ಸುದ್ದಿ

ಜಾಹೀರಾತು