6:41 AM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ರಕ್ತಹೀನತೆ: ಇದಕ್ಕೆ ಕಾರಣ ಏನು?; ರಕ್ತಹೀನತೆಯಿಂದ ಹೇಗೆ ಪಾರಾಗಬಹುದು?

22/01/2022, 08:03

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಗತ್ಯಕ್ಕಿಂತ ಪ್ರಮಾಣಕ್ಕಿಂತ ಕಡಿಮೆ ಆಗುವುದನ್ನು ರಕ್ತಹೀನತೆ ಎನ್ನುತ್ತಾರೆ. ಆರೋಗ್ಯವಂತರಲ್ಲಿ ಇದರ ಪ್ರಮಾಣ ಮಹಿಳೆಯರಲ್ಲಿ <12gm/dl ಹಾಗು ಪುರುಷರಲ್ಲಿ <13gm/ ಕಂಡು ಬರುತ್ತದೆ.
ಇದು ಇತ್ತೀಚಿನ ದಿನಮಾನದಲ್ಲಿ ಅತೀ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಸಮಸ್ಯೆ ಆಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ಕಾಣಬಹುದಾದೆ. ನಮ್ಮ ದೇಶದಲ್ಲಿ ಕಬ್ಬಿಣ ಅಂಶದ ಕೊರತೆಯಿಂದಾಗಿ ಬರುವ ರಕ್ತಹೀನತೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್, ಕ್ಯಾನ್ಸರ್, ಕೆಲವೊಂದು ಔಷಧಿಯ ಸೇವನೆಯಿಂದ, ಮಹಿಳೆಯರಲ್ಲಿ ಋತುಸ್ರಾವ, ಗರ್ಭಿಣಿಯರಲ್ಲಿ, ಬಾಣಂತಿಯರಲ್ಲಿ, ಹದಿಹರೆಯದ ಹೆಣ್ಣುಮಕ್ಕಳಲ್ಲಿ, ಜಂತುಹುಳುವಿನ ಸಮಸ್ಯೆಯಿಂದ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ರಕ್ತ ಹೀನತೆ ಕಂಡುಬರಬಹುದು.

ರಕ್ತಹೀನತೆಯಿಂದಾಗಿ ತಲೆಸುತ್ತವುದು, ಕೂದಲು ಉದುರುವುದು, ಉಬ್ಬಿದ ಉಗುರುಗಳು, ಉಸಿರಾಡಲು ತೊಂದರೆ, ಪದೇ ಪದೇ ಕಂಡುಬರುವ ಬಾಯಿಹುಣ್ಣು, ಆಯಾಸ, ಹೃದಯದ ಬಡಿತದಲ್ಲಿ ಏರಿಳಿತ, ಮುಟ್ಟಿನ ತೊಂದರೆಯೊಂದಿಗೆ , ಕೆಲವರಲ್ಲಿ ಆಹಾರೇತರ ವಸ್ತುಗಳಾದ ಮಂಜುಗಡ್ಡೆ, ಮಣ್ಣು, ಸೀಮೆಸುಣ್ಣದ ಸೇವನೆಯನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ಹಿಮೋಗ್ಲೋಬಿನ್ ಪ್ರಮಾಣವನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.

ರಕ್ತಹೀನತೆ ಸಮಸ್ಯೆಯಿಂದ ಮುಕ್ತರಾಗಬೇಕಾದರೆ ಮೊದಲು ಮೂಲ ಕಾರಣವನ್ನು ತಿಳಿದುಕೊಂಡು, ನಂತರ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯ ಕಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಆಹಾರಗಳಾದ ಹಸಿರು ತರಕಾರಿ, ಬೀಟ್ರೂಟ್, ಕ್ಯಾರಟ್, ಸೇಬು ಹಣ್ಣು, ದಾಳಿಂಬೆ ಹಣ್ಣು, ಬ್ರೋಕಲಿ, ಒಣ ದ್ರಾಕ್ಷಿ ಖರ್ಜುರ, ನುಗ್ಗೆಸೊಪ್ಪು,ಮಾಂಸಹಾರಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರಂಭಿಕ ಘಟ್ಟದಲ್ಲೇ ಪರಿಣಾಮಕಾರಿಯಾಗಿರುವುದು.

ರಕ್ತಹೀನತೆ ಎನ್ನುವುದು ಒಂದು ಖಾಯಿಲೆಯಲ್ಲ, ಕೆಲವೊಮ್ಮೆ ಇದು ಇತರ ರೋಗದ ಲಕ್ಷಣವಾಗಿರಬಹುದು. ಆದ್ದರಿಂದ ಇದನ್ನು ಕಡೆಗಣಿಸದೆ ಸೂಕ್ತ ಚಿಕಿತ್ಸೆಯನ್ನು ಆರಂಭಿಕ ಘಟ್ಟದಲ್ಲೇ ಪಡೆದುಕೊಳ್ಳುವುದರಿಂದ ಆರೋಗ್ಯದ  ಸುಸ್ಥಿತಿಯನ್ನು ಕಾಪಾಡಿಕೊಳ್ಳಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

drbhavyashetty10@gmail.com

ಇತ್ತೀಚಿನ ಸುದ್ದಿ

ಜಾಹೀರಾತು