8:19 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಪರಿಶಿಷ್ಟ ಕಾಲೋನಿಯಲ್ಲಿ ಸ್ಮಶಾನ ಮಂಜೂರು:  ಮನೆ ತೆರವಿಗೆ ಅಧಿಕಾರಿಗಳ ಸೂಚನೆ; ಸಾರ್ವಜನಿಕರು ವಿರೋಧ; ಶಾಸಕ ಕುಮಠಳ್ಳಿ ಏನು ಮಾಡುತ್ತಿದ್ದಾರೆ?

26/12/2021, 12:23

ಬೆಳಗಾವಿ(reporterkarnataka.com): ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ   ಸ್ಮಶಾನಕ್ಕೆ  ಭೂಮಿ ಮೂಜೂರು ಮಾಡಿದ್ದು, ಸುತ್ತಮುತ್ತಲಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ ನೀಡಿರುವ ಅಧಿಕಾರಿಗಳ ಕ್ರಮ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ  ತಹಶೀಲ್ದಾರ್ ಡಿ.ಎಚ್. ಕೋಮಾರ ಹಾಗೂ ಸಿಪಿಐ ಶಂಕರಗೌಡ ಬಸವನಗೌಡರ ಅವರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ತೆರವುಗೊಳಿಸಲು ಸೂಚಿಸಿದರು.

ಐಗಳಿ ಗ್ರಾಮದ ಜನತಾ ಕಾಲನಿಯಲ್ಲಿ ಸುಮಾರು 5 ಎಕರೆ ಸರಕಾರಕ್ಕೆ ನೀಡಿದ ದಾನದ  ಜಮೀನು ಇದ್ದು ಅದರಲ್ಲಿ ಮೂರು ಎಕರೆ ಜನ ವಸತಿ ಪ್ರದೇಶ ಹಾಗೂ ಎರಡು ಎಕರೆ ಸ್ಮಶಾನ  ಭೂಮಿಯಿದ್ದು  ಎರಡು ಎಕರೆಯಲ್ಲಿ  ಶವ ಸಂಸ್ಕಾರ ಮಾಡಲು ಅಗತ್ಯ ಕ್ರಮವಹಿಸಲು ಗ್ರಾಮ ಪಂಚಾಯತಿ ಅಭಿವೃಧ್ಧಿ  ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ನಡೆಗೆ ದಲಿತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಮಗೆ 1972 ರಲ್ಲಿ  ಗ್ರಾಮ ಪಂಚಾಯತಿ ವತಿಯಿಂದ  ಹಕ್ಕುಪತ್ರ ನೀಡಿ ಮನೆ ಮಂಜೂರು ಮಾಡಿದ್ದಾರೆ.  ನಾವು ಹಲವಾರು ದಶಕದಿಂದ ವಾಸ ಮಾಡುತ್ತಿದ್ದೇವೆ. ಈ ಜಾಗದಲ್ಲಿ ನಾವು ಮನೆಗಳನ್ನು ಕಟ್ಟಿಕೋಂಡು ಜೀವನ ಸಾಗಿಸುತ್ತಿದ್ದೇವೆ. ಏಕಾಎಕಿ ಅಧಿಕಾರಿಗಳು ಬಂದು ಇದು ಸ್ಮಶಾನ ಭೂಮಿ ಇದೆ  ಎಂದು ಯಾವುದೇ ಮುನ್ನಸೂಚನೆ ಇಲ್ಲದೇ ಮನೆಗಳನ್ನು ತೆರವುಗೋಳಿಸಲು ಮುಂದಾಗಿದ್ದಾರೆ.  ಇದರಿಂದ ಎಸ್ಸಿ  ಹಾಗೂ ಇನ್ನೂಳಿದ ಸಮುದಾಯದ ಕುಟುಂಬಗಳು ಬೀದಿಗೆ ಬಿಳ್ಳುವು ಆತಂಕದಲ್ಲಿ ಇದ್ದಿವೆ ಎಂದು ಸ್ಥಳೀಯರು ತಿಳಿಸಿದರು.

ಗ್ರಾಮದಲ್ಲಿ ಹಲವಾರ ಕಡೆ ಸರಕಾರಿ ಗೌಟನ ಜಾಗ ಇದ್ದು, ಸಾರ್ವಜನಿಕರು ವಾಸಿಸುವ ಸ್ಥಳದಲ್ಲಿ   ಸ್ಮಶಾನ  ಮಾಡುವುತ್ತೀರುವುದು ಸರಿ ಅಲ್ಲ. ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು   ಎಂದು ಜನತಾ ಕಾಲನಿಯ ಸಾರ್ವಜನಿಕರು ಮತ್ತು  ಗ್ರಾಮಸ್ಥರ   ಬೇಡಿಕೆಯಾಗಿದೆ. ಈ ಕುರಿತು ಅಥಣಿ ಶಾಸಕರು  ಮಹೇಶ ಕುಮಠಳ್ಳಿ  ಅವರು ಗಮನಹರಿಸಲು  ಸಾರ್ವಜನಿಕರು ಒತ್ತಾಯಿಸಿದ್ದರೆ.

ಇತ್ತೀಚಿನ ಸುದ್ದಿ

ಜಾಹೀರಾತು