9:18 PM Tuesday28 - April 2026
ಬ್ರೇಕಿಂಗ್ ನ್ಯೂಸ್
ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು… ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು

ಇತ್ತೀಚಿನ ಸುದ್ದಿ

ಪರಿಶಿಷ್ಟ ಕಾಲೋನಿಯಲ್ಲಿ ಸ್ಮಶಾನ ಮಂಜೂರು:  ಮನೆ ತೆರವಿಗೆ ಅಧಿಕಾರಿಗಳ ಸೂಚನೆ; ಸಾರ್ವಜನಿಕರು ವಿರೋಧ; ಶಾಸಕ ಕುಮಠಳ್ಳಿ ಏನು ಮಾಡುತ್ತಿದ್ದಾರೆ?

26/12/2021, 12:23

ಬೆಳಗಾವಿ(reporterkarnataka.com): ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ   ಸ್ಮಶಾನಕ್ಕೆ  ಭೂಮಿ ಮೂಜೂರು ಮಾಡಿದ್ದು, ಸುತ್ತಮುತ್ತಲಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ ನೀಡಿರುವ ಅಧಿಕಾರಿಗಳ ಕ್ರಮ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ  ತಹಶೀಲ್ದಾರ್ ಡಿ.ಎಚ್. ಕೋಮಾರ ಹಾಗೂ ಸಿಪಿಐ ಶಂಕರಗೌಡ ಬಸವನಗೌಡರ ಅವರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ತೆರವುಗೊಳಿಸಲು ಸೂಚಿಸಿದರು.

ಐಗಳಿ ಗ್ರಾಮದ ಜನತಾ ಕಾಲನಿಯಲ್ಲಿ ಸುಮಾರು 5 ಎಕರೆ ಸರಕಾರಕ್ಕೆ ನೀಡಿದ ದಾನದ  ಜಮೀನು ಇದ್ದು ಅದರಲ್ಲಿ ಮೂರು ಎಕರೆ ಜನ ವಸತಿ ಪ್ರದೇಶ ಹಾಗೂ ಎರಡು ಎಕರೆ ಸ್ಮಶಾನ  ಭೂಮಿಯಿದ್ದು  ಎರಡು ಎಕರೆಯಲ್ಲಿ  ಶವ ಸಂಸ್ಕಾರ ಮಾಡಲು ಅಗತ್ಯ ಕ್ರಮವಹಿಸಲು ಗ್ರಾಮ ಪಂಚಾಯತಿ ಅಭಿವೃಧ್ಧಿ  ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ನಡೆಗೆ ದಲಿತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಮಗೆ 1972 ರಲ್ಲಿ  ಗ್ರಾಮ ಪಂಚಾಯತಿ ವತಿಯಿಂದ  ಹಕ್ಕುಪತ್ರ ನೀಡಿ ಮನೆ ಮಂಜೂರು ಮಾಡಿದ್ದಾರೆ.  ನಾವು ಹಲವಾರು ದಶಕದಿಂದ ವಾಸ ಮಾಡುತ್ತಿದ್ದೇವೆ. ಈ ಜಾಗದಲ್ಲಿ ನಾವು ಮನೆಗಳನ್ನು ಕಟ್ಟಿಕೋಂಡು ಜೀವನ ಸಾಗಿಸುತ್ತಿದ್ದೇವೆ. ಏಕಾಎಕಿ ಅಧಿಕಾರಿಗಳು ಬಂದು ಇದು ಸ್ಮಶಾನ ಭೂಮಿ ಇದೆ  ಎಂದು ಯಾವುದೇ ಮುನ್ನಸೂಚನೆ ಇಲ್ಲದೇ ಮನೆಗಳನ್ನು ತೆರವುಗೋಳಿಸಲು ಮುಂದಾಗಿದ್ದಾರೆ.  ಇದರಿಂದ ಎಸ್ಸಿ  ಹಾಗೂ ಇನ್ನೂಳಿದ ಸಮುದಾಯದ ಕುಟುಂಬಗಳು ಬೀದಿಗೆ ಬಿಳ್ಳುವು ಆತಂಕದಲ್ಲಿ ಇದ್ದಿವೆ ಎಂದು ಸ್ಥಳೀಯರು ತಿಳಿಸಿದರು.

ಗ್ರಾಮದಲ್ಲಿ ಹಲವಾರ ಕಡೆ ಸರಕಾರಿ ಗೌಟನ ಜಾಗ ಇದ್ದು, ಸಾರ್ವಜನಿಕರು ವಾಸಿಸುವ ಸ್ಥಳದಲ್ಲಿ   ಸ್ಮಶಾನ  ಮಾಡುವುತ್ತೀರುವುದು ಸರಿ ಅಲ್ಲ. ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು   ಎಂದು ಜನತಾ ಕಾಲನಿಯ ಸಾರ್ವಜನಿಕರು ಮತ್ತು  ಗ್ರಾಮಸ್ಥರ   ಬೇಡಿಕೆಯಾಗಿದೆ. ಈ ಕುರಿತು ಅಥಣಿ ಶಾಸಕರು  ಮಹೇಶ ಕುಮಠಳ್ಳಿ  ಅವರು ಗಮನಹರಿಸಲು  ಸಾರ್ವಜನಿಕರು ಒತ್ತಾಯಿಸಿದ್ದರೆ.

ಇತ್ತೀಚಿನ ಸುದ್ದಿ

ಜಾಹೀರಾತು