8:36 PM Sunday24 - August 2025
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

ಇತ್ತೀಚಿನ ಸುದ್ದಿ

ಗೋಣಮಾಕನಹಳ್ಳ: ಹೆಣ್ಣಿನ ವಿಷಯದಲ್ಲಿ ನಡೆದ ಕೊಲೆ ಪ್ರಕರಣ; 3 ಮಂದಿ ಆರೋಪಿಗಳ ಬಂಧನ

19/12/2021, 09:48

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೆಜಿಎಫ್ ಪೊಲೀಸ್‌ ಜಿಲ್ಲೆಯ ಆಂಡಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಡಿ .17ರಂದು ಮಧ್ಯಾಹ್ನ ಹೆಣ್ಣಿನ ವಿಷಯದಲ್ಲಿ ಆದ ಗಲಾಟೆಯ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಲ್ಲಿ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್‌ ಬಾಬು ಅವರು ತಿಳಿಸಿದ್ದಾರೆ. 

ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಂಡಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಣಮಾಕನಹಳ್ಳಿಯ ನಿವಾಸಿ ಗಜೇಂದ್ರನಾಯ್ಡು ಅವರು ತನ್ನ ಮನೆಯ ಬಳಿ ಡಿ .17 ರಂದು ಮದ್ಯಾಹ್ನ 2.30 ರ ಸುಮಾರಿನಲ್ಲಿ ಬರುತ್ತಿರುವಾಗ , ಅದೇ ಗ್ರಾಮ ಗೋಣಮಾಕನಹಳ್ಳಿಯ ನಿವಾಸಿಗಳಾದ ರಾಘವೇಂದ್ರ ( 22  ) , ಹರೀಶ್ ( 23 )  ಹಾಗೂ ಜಿ.ಮಂಜುನಾಥ ( 21 )  ಅವರುಗಳು ಒಂದು ಹೆಣ್ಣಿನ ವಿಷಯದಲ್ಲಿ ಗಜೇಂದ್ರನಾಯ್ಡು ಸ್ವಾಮಿ ಅವರನ್ನು ಅಡ್ಡಗಟ್ಟಿ ದಾಳಿ ಮಾಡಿ ಗ್ರಾಮದ ಜಯರಾಮ್  ಅವರ ನೀಲಗಿರಿ ತೋಪಿಗೆ ಕರೆದುಕೊಂಡೋಗಿ ಚಾಕುಗಳಿಂದ ಕುತ್ತಿಗೆ ಕೋಯ್ದು , ಚೆನ್ನಾಗಿ ಹೊಡೆದು ಕೊಲೆ ಮಾಡಿ ಸಾಯಿಸಿದ್ದರು ಎಂದು ಆರೋಪಿಸಲಾಗಿದೆ.


ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ , ಡಿವೈಎಸ್ಪಿ ಪಿ.ಮುರಳೀಧರ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ರಾಬರ್ಟ್‌ಸನ್‌ಪೇಟೆ ಸಿಪಿಐ ಕೆ.ನಾಗರಾಜ್ , ಸಿಬ್ಬಂದಿಗಳಾದ ಮ್ಯಾಥ್ಯ ಅಲೆಕ್ಸಾಂಡರ್ , ನಾರಾಯಣಸ್ವಾಮಿ , ಟಿ.ಶಿವಯ್ಯ ಗಜೇಂದ್ರ , ಗೋಪಾಲಕೃಷ್ಣ , ಮಧುಸೂಧನ್ , ರಾಜೇಶ್‌ಬಾಬು , ಸುನಿಲ್ , ಮಹೇಂದ್ರ , ರಘು , ಮುರಳಿ , ಎಸ್.ಗಜೇಂದ್ರ , ಚಂದ್ರಕುಮಾರ್ , ಪ್ರಭಾಕರ್ , ಸತ್ಯಪ್ರಕಾಶ್ ಅವರುಗಳು ತೀವ್ರ ಕಾರ್ಯಾಚರಣೆ ನಡೆಸಿ , ಕೊಲೆ ಪ್ರಕರಣದ ಆರೋಪಿಗಳು ರಾಘವೇಂದ್ರ , ಹರೀಶ್ , ಮಂಜುನಾಥ ರವರುಗಳನ್ನು ಆಂದಪದೇಶದ ಶಾಂತಿಪುರಂನಲ್ಲಿ ಡಿ .18 ರಂದು ಪೊಲೀಸರು ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ನಾ ಕಿಶೋರ್ ಬಾಬು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು