11:58 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಸಂವಿಧಾನ ದೇಶದ ಅಡಿಪಾಯ, ಅದಕ್ಕೆ ತಾಯಿಯ ಸ್ಥಾನವಿದೆ: ಕೆನರಾ ಸಂಧ್ಯಾ ಕಾಲೇಜಿನ ಸಂವಿಧಾನ ದಿನಾಚರಣೆಯಲ್ಲಿ ಡಾ. ಅನಂತಕೃಷ್ಣ ಭಟ್

02/12/2021, 10:19

ಮಂಗಳೂರು(reporterkarnataka.com): ಸಂವಿಧಾನ ಒಂದು ದೇಶದ ಅಡಿಪಾಯವಿದ್ದಂತೆ. ಅದಕ್ಕೆ ತಾಯಿಯ ಸ್ಥಾನವಿದೆ. ಅತ್ಯಂತ ಸುದೀರ್ಘವಾದ ಕ್ರಮಬದ್ಧವಾದ ಸಂವಿಧಾನ ನಮ್ಮದು. ಸಂವಿಧಾನ ನಿಂತ ನೀರಲ್ಲ: ಹರಿಯುವ ನದಿಯಂತೆ ಅದರಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಾ ಹೋಗುತ್ತವೆ ಅಲ್ಲದೆ ಅದು ಜನತೆಯ ಆಶೋತ್ತರಗಳನ್ನು ಪ್ರತಿಫಲಿಸುವಂತಿರಬೇಕು ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ ಪಿ. ಅನಂತಕೃಷ್ಣ ಭಟ್ ಹೇಳಿದರು.

ಅವರು ಸಂವಿಧಾನ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಕೆನರಾ ಸಂಧ್ಯಾ ಕಾಲೇಜು ಹಮ್ಮಿಕೊಂಡಿದ್ದ “ಭಾರತೀಯ ಸಂವಿಧಾನ ರಚನೆ: ಸ್ಥಳೀಯ ಪ್ರಸ್ತುಕತೆಯ ಬಗ್ಗೆ ಅಜ್ಞಾತ ಸಂಗತಿಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.




ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ ಆದ್ಯಕ್ಷತೆ ವಹಿಸಿದ್ದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಖಜಾಂಜಿ ಹಾಗೂ ಕಾಲೇಜಿನ ಸಂಚಾಲಕ ಸಿ ಎ ವಾಮನ ಕಾಮತ್ , ಬದಲಿ ಖಜಾಂಚಿಗಳಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ , ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರೇಮಲತಾ ವಿ ಉಪಸ್ಥಿತರಿದ್ದರು.

ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಅನಿಲ ಸ್ವಾಗತಿಸಿದರು, ಹಿಂದಿ ಪ್ರಾಧ್ಯಾಪಕಿ ಸುಜಾತ ಜಿ ನಾಯಕ್ ಅತಿಥಿಗಳನ್ನು ಪರಿಚಯಿಸದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ಸೀಮಾ ಪ್ರಭು ಎಸ್ ವಂದಿಸಿದರು. ಕನ್ನಡ ಪ್ರಾಧ್ಯಪಿಕೆ ವಾಣಿ ಯು ಎಸ್ ನಿರೂಪಿಸಿದರು. ಉಷಾ ನಾಯಕ್ ಹಾಗೂ ಸುಜಾತಾ ಜಿ ನಾಯಕ್ ಪ್ರಾರ್ಥಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು