11:22 AM Sunday17 - August 2025
ಬ್ರೇಕಿಂಗ್ ನ್ಯೂಸ್
ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಇತ್ತೀಚಿನ ಸುದ್ದಿ

ಕುಟುಂಬದ ದೈವ, ದೇವರ ಆರಾಧನೆಯಿಂದ ಒಳಿತು: ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ 

26/11/2021, 18:27

ಮಂಗಳೂರು(reporterkarnataka.com) : ನಮ್ಮ ಕುಟುಂಬದ ದೈವ, ದೇವತಾರಾಧನೆ ಅಗತ್ಯವಾಗಿ ನಡೆಯಬೇಕಾಗಿದೆ. ನಮ್ಮ ಹಿರಿಯರು ಮಾಡಿಕೊಂಡು ಬಂದ ಸಂಪ್ರದಾಯ, ಕಟ್ಟುಕಟ್ಟಳೆಗಳನ್ನು ಪಾಲಿಸಿಕೊಂಡು ಬಂದಲ್ಲಿ ನಮಗೆ ಸುಖಃ ಸಮೃದ್ಧಿ ಸಿಗುತ್ತದೆ.  ಕುಟುಂಬದ ದೇವತಾಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮೂಡುಬಿದಿರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.

ಕೊಣಾಜೆ ಬೆಳ್ಮ ಅಡ್ಕರಮಜಲುವಿನ ಬೋಲ್ಡನ್‌ ಕುಟುಂಬಸ್ಥರ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿದ ದೈವದ ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ನಾವು ಎಷ್ಟು ಪೂಜೆ, ಪುನಸ್ಕಾರ ಮಾಡುತ್ತೇವೆನ್ನುವುದು ಮುಖ್ಯ ಅಲ್ಲ. ಅಂತರಂಗ ಶುದ್ಧಿ ಇಟ್ಟುಕೊಂಡು ದೈವಸ್ಥಾನದ ಪ್ರವೇಶಿಸೋಣ. ನನ್ನ ಜೊತೆಗೆ ನನ್ನ ಕುಟುಂಬದವರಿಗೂ ಒಳ್ಳೆಯದಾಗಲಿ ಎನ್ನುವ ಒಳ್ಳೆಯ ಮನಸ್ಸಿನಿಂದ ಒಂದು ಹೂವಿನ ಎಸಲು ಇಟ್ಟರೂ ದೈವ ದೇವರು ಸಂತೃಪ್ತರಾಗುತ್ತಾರೆ. ನಾವೆಲ್ಲರೂ ಒಳ್ಳೆಯ ಮನಸ್ಸಿನಿಂದ ದೇವರ ಕಾರ್ಯದಲ್ಲಿ ಭಾಗಿಯಾಗಬೇಕು. ನಮ್ಮ ಮನಸ್ಸು, ನಾಲಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.


ದೈವದೇವರ ಕಾರ್ಯದಲ್ಲಿ ಯಾವುದೇ ಮನಕ್ಲೇಷಗಳನ್ನು ಇಟ್ಟುಕೊಂಡು ಪಾಲ್ಗೊಳ್ಳಬಾರದು.  ನಮ್ಮ ಜೀವನವನ್ನು ನೋಡಿ ಇನ್ನೊಬ್ಬರು ಕಲಿಯುವಂತಾಗಬೇಕು. ಸದಾ ಒಳ್ಳೆಯದನ್ನು ಮಾಡಬೇಕು. ಹೀಗಿದ್ದರೆ ಮಾತ್ರ ನಮ್ಮ ಬದುಕು ಸಾರ್ಥಕ. ಇಲ್ಲಿ ಜಗದೊಡೆಯ ದೇವರು. ಇಲ್ಲಿ ನಾನು ಎನ್ನುವುದನ್ನು ಬಿಟ್ಟು, ದೇವರು ನನ್ನಿಂದ ಈ ಸೇವೆ ಮಾಡಿಸಿದರು ಎನ್ನುವ ಸೇವೆಯನ್ನು ಮಾಡಿಸಿದರೇ ಅದೇ ಸಾರ್ಥಕ ಎಂದು ಹರಸಿದರು.



ನೂತನ ಮನೆಯಲ್ಲಿ ದೈವಗಳ ಪ್ರತಿಷ್ಠಾಪನೆ :  

ದೈವಗಳಿಗೆ ನಿರ್ಮಿಸಿದ ನೂತನ ದೈವದ ಗೃಹಪ್ರವೇಶವನ್ನು ಅಂಬ್ಲಮೊಗರು ಪ್ರಶಾಂತ್‌ ಉಡುಪ ದಿವ್ಯಹಸ್ತದಿಂದ ನೆರವೇರಿಸಲಾಯಿತು. ನಾಗದೇವರಿಗೆ ತಂಬಿಲ, ಅಶ್ಲೇಷ ಪೂಜೆ, ವಾಸ್ತು ಹೋಮ, ಅಘೋರ ಹೋಮ, ಸತ್ಯನಾರಾಯಣ ಪೂಜೆ, ವೆಂಕಟ್ರಮಣ ಪೂಜೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ, ಗುಳಿಗನಿಗೆ ಕೋಲೋತ್ಸವ ನಡೆಯಿತು. 



ವಾಸ್ತು ಶಿಲ್ಪಿ ಪ್ರಸನ್ನ ಮುಳಿಯಾಲು, ಗಣೇಶ್‌ ಭಟ್‌ ಮಿತ್ತೂರು, ಬೋಲ್ದನ್ ಕುಟುಂಬಸ್ಥರ ತರವಾಡು ಮನೆಯ ಹಿರಿಯರಾದ ಐತಪ್ಪ ಬೆಳ್ತಂಗಡಿ, ಮೋಹಿನಿ ಬೆಳ್ಮ, ಕಾರ್ಯಕಾರಿ ಸಮಿತಿ ಪ್ರಮುಖರು, ಕುಟುಂಬಸ್ಥರು, ಊರಿನ ಭಕ್ತಾದಿಗಳು, ಹಿಂದೂ ಸಮಾಜದ ಮುಖಂಡರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು