5:14 PM Thursday18 - June 2026
ಬ್ರೇಕಿಂಗ್ ನ್ಯೂಸ್
ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು

ಇತ್ತೀಚಿನ ಸುದ್ದಿ

ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ನೇತಾರ ಪಮ್ಮಿ ಕೊಡಿಯಾಲ್ ಬೈಲ್ ಗೆ ನಿಗಮ – ಮಂಡಳಿಗಳಲ್ಲಿ ಪ್ರಾತಿನಿಧ್ಯ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಗೆ ಮನವಿ

11/11/2021, 15:28

ಮಂಗಳೂರು(reporterkarnataka.com):
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ಮುಂದಾಳು ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ಅವರು ತಮ್ಮ ವಿಶಿಷ್ಟ ಸೇವಾ ಮನೋಭಾವದಿಂದ ನಾಡಿನೆಲ್ಲೆಡೆ ಪರಿಚಿತರಾಗಿದ್ದಾರೆ. ಜನ ಸಾಮಾನ್ಯರ  ನೋವು- ನಲಿವು, ದುಃಖ- ದುಮ್ಮಾನಗಳಿಗೆ ತನ್ನ ಬದುಕನ್ನೇ ಧಾರೆಯೆರೆದ ಅವರಿಗೆ ನಿಗಮ -ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಲಾಗಿದೆ.

ಪ್ರವೀಣ್ ಕುಮಾರ್  ಅವರು ಧಾಮಿ೯ಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಸಂಖ್ಯಾತ ಬಡ ಬಗ್ಗರ, ದೀನ, ದುಖಿ:ತರ ಆಶ್ರಯದಾತರಾಗಿರುವ  ಪಮ್ಮಿ ಅವರು ವಿಭಿನ್ನ ರೀತಿಯ ಅಧ್ಯಾಯವನ್ನು ಸೃಷ್ಠಿಸಿದ ಮೇರು ವ್ಯಕ್ತಿತ್ವದ ಯುವ  ಧುರೀಣರಾಗಿದ್ದಾರೆ.  ತನ್ನ ವರಮಾನದ ಬಹು ಭಾಗವನ್ನು ಧಾಮಿ೯ಕ, ಸಾಮಾಜಿಕ ರಂಗಗಳಲ್ಲಿ ಧಾರೆಯೆರೆದು ಸಮಾಜದ ಬಹುಮುಖ ಪ್ರಗತಿಗಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ಕ್ರಿಯಾಶೀಲ ವ್ಯಕ್ತಿ.

ಶ್ರೀ ಭಗವತಿ ದೇವಸ್ಥಾನದ ಅಭಿವೃದ್ಧಿಗಾಗಿ ರಾತ್ರಿ, ಹಗಲೆನ್ನದೆ ದುಡಿಯುತ್ತಿರುವ  ಅವರು ಧಾಮಿ೯ಕ, ಸಾಂಸ್ಕ್ರತಿಕ, ಸಾಹಿತ್ಯಿಕ, ಚಲನ ಚಿತ್ರ ನಿಮಾ೯ಣ ಮುಂತಾದ ವಿವಿಧ ರಂಗಗಳಲ್ಲಿ ವಿಜೃಂಭಿಸಿ ಜನ ಮನಗಳ ಹೃದಯದಲ್ಲಿ ನೆಲೆಸಿದ್ದಾರೆ.

ಸಾಮಾಜಿಕ ರಂಗದ ಬಹುದೊಡ್ಡ ಹೆಸರಾದ ಪಮ್ಮಿ ಕೊಡಿಯಾಲ್ ಬೈಲ್ ಬಡವ – ಬಲ್ಲಿದ,  ಹಿರಿಯ – ಕಿರಿಯ ಭೇದಭಾವವಿಲ್ಲದ ಎಲ್ಲರೊಂದಿಗೆ ಮಾನವೀಯತೆಯಿಂದ ವತಿ೯ಸುವ ಹೃದಯ ಶ್ರೀಮಂತಿಕೆಯ ಓವ೯ ತ್ಯಾಗ ಜೀವಿಯಾಗಿದ್ದಾರೆ.  ಅಹಂಕಾರ, ಅಹಂಭಾವಗಳ ಪರಿಚಯವೇ ಇಲ್ಲದ, ದ್ವೇಷ ಮತ್ಸರಗಳ ಅರಿವಿಲ್ಲದ ಸರಳ ನಿರಾಂಡಬರ ವ್ಯಕ್ತಿತ್ವದ ನಿಷ್ಕಳಂಕತೆಯ ನಿಜರೂಪದ ಸದ್ಗುಣ ಸಂಪನ್ನತೆ, ಸಚ್ಚಾರಿತ್ಯಗಳ ಸಂಗಮವಾಗಿರುವ  ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ರವರಿಗೆ ಕನಾ೯ಟಕ ಸರಕಾರವು ನಿಗಮ ಮಂಡಳಿಗಳನ್ನು  ಪುನಾ ರಚನೆ ಮಾಡುವ ಸಂದಭ೯ದಲ್ಲಿ ಸೂಕ್ತ ಪ್ರಾತಿನಿಧ್ಯ  ನೀಡ ಬೇಕಾಗಿದೆ.  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಪ್ರವೀಣ್ ಕುಮಾರ್ (ಪಮ್ಮಿ) ರವರಿಗೆ ರಾಜ್ಯದ ನಿಗಮ ಮಂಡಳಿಯ ಸೂಕ್ತ ಹುದ್ದೆ ದೊರಕಿಸಿ ಕೊಡುತ್ತಾರೆಂಬ ಭರವಸೆ ಜಿಲ್ಲೆಯ ಜನತೆಯದ್ದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು