3:49 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗಲಿ: ಶಿವಕುಮಾರ ಸವದಿ

06/11/2021, 14:34

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ನೂತನ ಹೆಜ್ಜೆ ಇಟ್ಟಿದೆ. ಕ್ರಿಕೆಟ್ ಪಟುಗಳಿಗೆ ನುರಿತ ಆಟಗಾರರಿಂದ ತರಬೇತಿ ನೀಡಲು ಅಥಣಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್  ಸ್ಪೋರ್ಟ್ಸ್ ಕ್ಲಬ್ ಮುಂದಾಗಿದೆ.

ಅಥಣಿ ಪಟ್ಟಣದಲ್ಲಿರುವ ಸುವರ್ಣ ವಿದ್ಯಾಭೂಮಿಯ ಹಿಂದುಗಡೆ ಈ ಸ್ಪೋರ್ಟ್ಸ್ ಕ್ಲಬ್ ಹಾಗೂ ತರಬೇತಿ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. 

ನಂತರ ಮಾತನಾಡಿದ ಯುವ ಮುಖಂಡ ಶಿವಕುಮಾರ ಸವದಿ, ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯ ಮಹತ್ವ ತಿಳಿಸುವ ಮೂಲಕ ಅವರಿಗೆ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಆನಂದ ಮಟಗಾರ ಅವರ ನೇತೃತ್ವದ ಈ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.


ಸುಸಜ್ಜಿತವಾದ ಕ್ರಿಕೆಟ್ ಮೈದಾನದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಪಡೆದ ಕ್ರೀಡಾಳುಗಳು ಉನ್ನತ ಮಟ್ಟದ ಸಾಧನೆ ಮಾಡುವಂತಾಗಿ ಈ ಕ್ರಿಕೆಟ್ ಕ್ಲಬ್   ಹೆಸರುವಾಸಿಯಗಲಿ ಎಂದು ಕ್ಲಬ್ ನ ರೂವಾರಿಗಳಾದ ಆನಂದ ಮಟಗಾರ್, ಮಲ್ಲಪ್ಪ ಗದ್ಯಾಳ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕ್ರೀಡೆಗಳಲ್ಲಿ ಆಸಕ್ತಿರುವ 8 ರಿಂದ 23 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ತರಬೇತಿ ನೀಡಿ ಸಂಪನ್ಮೂಲ ಭರಿತ ಕ್ರಿಡಾಪಟುಗಳನ್ನಾಗುವಂತೆ ಮಾಡುವುದು ಈ ಕ್ಲಬ್ ನ ಮೂಲ ಉದ್ದೇಶವಾಗಿದೆ. ಈಗಾಗಲೇ 26-10- 2021ರಿಂದ ಪ್ರವೇಶಗಳು ಪ್ರಾರಂಭವಾಗಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅರ್ಹತೆ ಪಡೆದ ನುರಿತ ತರಬೇತುದಾರರಿಂದ 15 ದಿನಗಳಿಗೊಮ್ಮೇ ತರಬೇತಿ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ವಾರಕ್ಕೊಮ್ಮೆ ಅಭ್ಯಾಸ ಪಂದ್ಯಗಳನ್ನು ನಡೆಸಿ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತದೆ.

ಹೀಗೆ ಅನೇಕ ನೂತನ ಆಲೋಚನೆ ಗಳೊಂದಿಗೆ ಈ ಕ್ಲಬ್ ಮುನ್ನಡೆಯುತ್ತಿರುವುದು ತಾಲೂಕಿನ ಕ್ರೀಡಾಳುಗಳಿಗೆ ಹೊಸ ಹುರುಪಿನೊಂದಿಗೆ ತರಬೇತಿ ಪಡೆಯುವಂತಾಗಿದೆ.


ಈ ವೇಳೆಯಲ್ಲಿ ಆನಂದ ಮಟಗಾರ, ಬಸಯ್ಯ ಸ್ವಾಮೀಜಿ, ಮಾರುತಿ ಬಸಗೌಡರ್, ಮಲ್ಲಪ್ಪ ಗದ್ಯಾಳ, ಆಕಾಶ್ ಹೊನ್ನಳ್ಳಿ,ಮಾಂತೇಶ್ ಮಾಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು