11:19 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗಲಿ: ಶಿವಕುಮಾರ ಸವದಿ

06/11/2021, 14:34

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ನೂತನ ಹೆಜ್ಜೆ ಇಟ್ಟಿದೆ. ಕ್ರಿಕೆಟ್ ಪಟುಗಳಿಗೆ ನುರಿತ ಆಟಗಾರರಿಂದ ತರಬೇತಿ ನೀಡಲು ಅಥಣಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್  ಸ್ಪೋರ್ಟ್ಸ್ ಕ್ಲಬ್ ಮುಂದಾಗಿದೆ.

ಅಥಣಿ ಪಟ್ಟಣದಲ್ಲಿರುವ ಸುವರ್ಣ ವಿದ್ಯಾಭೂಮಿಯ ಹಿಂದುಗಡೆ ಈ ಸ್ಪೋರ್ಟ್ಸ್ ಕ್ಲಬ್ ಹಾಗೂ ತರಬೇತಿ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. 

ನಂತರ ಮಾತನಾಡಿದ ಯುವ ಮುಖಂಡ ಶಿವಕುಮಾರ ಸವದಿ, ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯ ಮಹತ್ವ ತಿಳಿಸುವ ಮೂಲಕ ಅವರಿಗೆ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಆನಂದ ಮಟಗಾರ ಅವರ ನೇತೃತ್ವದ ಈ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.


ಸುಸಜ್ಜಿತವಾದ ಕ್ರಿಕೆಟ್ ಮೈದಾನದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಪಡೆದ ಕ್ರೀಡಾಳುಗಳು ಉನ್ನತ ಮಟ್ಟದ ಸಾಧನೆ ಮಾಡುವಂತಾಗಿ ಈ ಕ್ರಿಕೆಟ್ ಕ್ಲಬ್   ಹೆಸರುವಾಸಿಯಗಲಿ ಎಂದು ಕ್ಲಬ್ ನ ರೂವಾರಿಗಳಾದ ಆನಂದ ಮಟಗಾರ್, ಮಲ್ಲಪ್ಪ ಗದ್ಯಾಳ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕ್ರೀಡೆಗಳಲ್ಲಿ ಆಸಕ್ತಿರುವ 8 ರಿಂದ 23 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ತರಬೇತಿ ನೀಡಿ ಸಂಪನ್ಮೂಲ ಭರಿತ ಕ್ರಿಡಾಪಟುಗಳನ್ನಾಗುವಂತೆ ಮಾಡುವುದು ಈ ಕ್ಲಬ್ ನ ಮೂಲ ಉದ್ದೇಶವಾಗಿದೆ. ಈಗಾಗಲೇ 26-10- 2021ರಿಂದ ಪ್ರವೇಶಗಳು ಪ್ರಾರಂಭವಾಗಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅರ್ಹತೆ ಪಡೆದ ನುರಿತ ತರಬೇತುದಾರರಿಂದ 15 ದಿನಗಳಿಗೊಮ್ಮೇ ತರಬೇತಿ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ವಾರಕ್ಕೊಮ್ಮೆ ಅಭ್ಯಾಸ ಪಂದ್ಯಗಳನ್ನು ನಡೆಸಿ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತದೆ.

ಹೀಗೆ ಅನೇಕ ನೂತನ ಆಲೋಚನೆ ಗಳೊಂದಿಗೆ ಈ ಕ್ಲಬ್ ಮುನ್ನಡೆಯುತ್ತಿರುವುದು ತಾಲೂಕಿನ ಕ್ರೀಡಾಳುಗಳಿಗೆ ಹೊಸ ಹುರುಪಿನೊಂದಿಗೆ ತರಬೇತಿ ಪಡೆಯುವಂತಾಗಿದೆ.


ಈ ವೇಳೆಯಲ್ಲಿ ಆನಂದ ಮಟಗಾರ, ಬಸಯ್ಯ ಸ್ವಾಮೀಜಿ, ಮಾರುತಿ ಬಸಗೌಡರ್, ಮಲ್ಲಪ್ಪ ಗದ್ಯಾಳ, ಆಕಾಶ್ ಹೊನ್ನಳ್ಳಿ,ಮಾಂತೇಶ್ ಮಾಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು