4:13 AM Monday20 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ… ಬಂಟ್ವಾಳ, ಬಾದಾಮಿ ಸಹಿತ ರಾಜ್ಯದ 4 ರೈಲು ನಿಲ್ದಾಣಗಳಿಗೆ ನ್ಯೂ ಲುಕ್: ಏರ್‌ಪೋರ್ಟ್… ಕೊಡಗಿನಲ್ಲಿ ಅಕ್ರಮ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಗುಂಡೇಟು: ಮಾಲು ಸಮೇತ ಇಬ್ಬರು… ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ… ಬೆಂಗಳೂರಿನಲ್ಲಿ ಘೋರ ದುರಂತ: ಹೋಟೆಲ್ ಲಿಫ್ಟ್ ನಲ್ಲಿ ತಲೆ ಸಿಲುಕಿ ಧಾರವಾಡ ಯುವಕ…

ಇತ್ತೀಚಿನ ಸುದ್ದಿ

ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ

23/10/2021, 16:49

ಅಂದು ,
ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು 
ಬಿಡದ ಹಿರಿಯರು,
ಆದರೆ ಚಿಣ್ಣರಿಗೆ ಬಲು ಆಸೆ 
ಏನಿರಬಹುದು? ಅದರಲ್ಲಿ ತಿಳಿವಾಸೆ
ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು 

ಇಂದು ,
 ಅದೇ ಹಿರಿಯರು ಬನ್ನಿ ವೀಡಿಯೋ ಪಾಠ
ನೋಡಿ ಎಂದರು
ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬಲೆಯಂತೆ
ಕಣ್ಣೆಲ್ಲ ಮಯ ಮಯ 

ಯಾರಿಗೆ ಬೇಕು ?ಈ ವಾಣಿ
ವರ್ಕ್ ಉಂಟು, ನೆಟ್ ಇಲ್ಲ, ವೈಫೈ ಹಾಕಿಲ್ಲ
ಆನ್ಲೈನ್ ಪಾಠದ ಗೋಳು ತಲೆಯೆಲ್ಲಾ ಹಾಳು  .

ಹೌದು 
ಅಂದು ಈ ಚಿಣ್ಣರು ಕಾಯುತ್ತಿದ್ದರು
ಶಾಲೆಗೆ ಯಾವಾಗ ರಜೆ.
ಇಂದು ಬಕಪಕ್ಷಿಯಂತೆ ಕಾಯುವರು
ಶಾಲೆ ಯಾವಾಗ ಎಂದು 
ಸುದ್ದಿ ಬಂತು
 ಶಾಲೆ ಆರಂಭವಾಗುವುದೆಂದು, ಕೇಳಿದ್ದೇ ತಡ ,ಚಿಣ್ಣರು
 ಸಂಚಾರಿವಾಣಿ ಯನ್ನು ಎತ್ತಿ ಹಾಕಿ 
ನಮಸ್ಕಾರ -ಎಂದಿಗೂ ನಿನ್ನ ಸಹವಾಸ ಬೇಡಪ್ಪ ಎನ್ನುತ್ತಾ 
ಖುಷಿ ಖುಷಿಯಿಂದ ಚಿಣ್ಣರೆಲ್ಲ ಒಟ್ಟುಗೂಡಿ
 ಹೆಗಲ ಮೇಲೆ ಚೀಲ ಹಾಕಿ ನಿಷ್ಕಲ್ಮಶ 
ನಗುವಿನೊಂದಿಗೆ ಹೊರಟಿದ್ದಾರೆ.

 ತರಗತಿಯಲ್ಲಿ ಪಾಠ ಕೇಳುವ ಆಸೆಯಿಂದ
 ಟೀಚರನ್ನು ನೋಡುವ ಉತ್ಸಾಹದಿಂದ
 ಗೆಳೆಯರೊಡನೆ ಆಡುವ ಆತುರದಿಂದ 
ನಗುತ್ತಾ ನಗುತ್ತಾ ಹೇಳುತ್ತಾರೆ ,ಅಯ್ಯೋ ದೇವರೇ ,ಎಂದೆಂದಿಗೂ 
ಈ ಮಾರಿ ಕೊರೋನಾ ಬಾರದಿರಲಿ .
ಸದಾಕಾಲ ನಮ್ಮ ನಡೆ ಶಾಲೆ ಕಡೆಗೆ ಇರಲಿ .   

– ಉಮಾ ಮಾಧವಿ
 ನಿವೃತ್ತ ಶಿಕ್ಷಕಿ, ಕೊಳಲಗಿರಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು