6:22 PM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ಪಿಲಿಕುಂಡೇಲ್ ದಾಳಿ: ಎಡಪದವಿನಲ್ಲಿ ಎಸಿ ಮೆಕಾನಿಕ್ ಯುವಕ ದಾರುಣ ಸಾವು; ನಡೆದ ಘಟನೆಯಾದರೂ ಏನು?

23/09/2021, 19:19

ಮಂಗಳೂರು(reporterkarnataka.com): ಕಣಜದ ಹುಳುಗಳ(ಪಿಲಿಕುಂಡೇಲ್) ದಾಳಿಗೆ ಎಸಿ ಮೆಕಾನಿಕ್ ವೊಬ್ಬರು ಮೃತಪಟ್ಟ ದಾರುಣ ಘಟನೆ ಎಡಪದವಿನಲ್ಲಿ ನಡೆದಿದೆ. ಕೇಶವ ಯಾನೆ ಕಿಟ್ಟಿ (24) ಮೃತಪಟ್ಟವರು.

ಕೇಶವ ಅವರು ತಮ್ಮ ಮನೆಯ ತೆಂಗಿನ ಕಾಯಿ ಕೀಳಲು ಹೊಸದಾಗಿ ಖರೀದಿಸಿದ ಮರವೇರುವ ಯಂತ್ರದ ಮೂಲಕ ತೆಂಗಿನ ಮರವನ್ನೇರಿದ್ದರು. ಈ ಸಂದರ್ಭದಲ್ಲಿ ತೆಂಗಿನ ಮರದಲ್ಲಿ ಗೂಡುಕಟ್ಟಿದ್ದ ಕಣಜದ ಹುಳಗಳ ಗೂಡಿಗೆ ಕೇಶವ ಅವರ ತಲೆ ತಾಗಿತ್ತು. ಭಯಗೊಂಡ ಕಣಜದ ಹುಳಗಳು ಗೂಡಿನಿಂದ ಹಠಾತ್ ಹೊರಬಂದು ಕೇಶವ ಅವರ ಮೇಲೆ ದಾಳಿ ಮಾಡಲಾರಂಭಿಸಿತು. ಮೈಮೇಲೆ ಎಲ್ಲೆಂದರಲ್ಲಿ ಕಣಜದ ಹುಳಗಳು ಕಚ್ಚಿ ಗಾಯಗೊಳಿಸಿತು. ತೀವ್ರ ಗಾಯಗೊಂಡ ಕೇಶವ ಅವರನ್ನು ಮೂಡುಬಿದರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಎಂಸಿಎಫ್ ನಲ್ಲಿ ಎಸಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೇಶವ ಅವರು ಎಡಪದವಿನ ಪಟ್ಲಚ್ಚಿಲ್ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿಯ ಪುತ್ರ. ಅವಿವಾಹಿತರಾದ ಅವರು ಮೂವರು ಸಹೋದರರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು