6:44 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕ್ಲಾಕ್ ಟವರ್ ಕೊನೆಗೂ ಉಪಯೋಗಕ್ಕೆ ಬಂತು !!: ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದ ಮಾನಸಿಕ ಅಸ್ವಸ್ಥ ವ್ಯಕ್ತಿ !

22/09/2021, 20:38

ಅನುಷ್ ಪಂಡಿತ್ ಮಂಗಳೂರು
Info.reporterkarnataka@gmail.com

ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಎಂದು ಪರಿಗಣಿಸಲಾದ ಹೆಚ್ಚು ಕಡಿಮೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕ್ಲಾಕ್ ಟವರ್ ಕೊನೆಗೂ ಉಪಯೋಗಕ್ಕೆ ಬಂತು ಎಂದು ಕಡಲನಗರಿಯ ನಾಗರಿಕರು ಆಡಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಕೂಡ ಉಂಟು. ಹಾಗಾದರೆ ಇದೇನು 

ಅಂತಹ ಮಹಾ ಕಾರಣ ಎಂಬ ಕುತೂಹಲ ನಿಮಗಿದೆಯೇ? ಮುಂದಕ್ಕೆ ಓದಿ…

ಹಳೆಯ ಕ್ಲಾಕ್ ಟವರ್ ತೆರವುಗೊಳಿಸಿ ದಶಕಗಳೇ ಉರುಳಿದ ಬಳಿಕ ಅದೇ ಜಾಗದಲ್ಲಿ ಮತ್ತೆ ಕ್ಲಾಕ್ ಟವರ್ ನಿರ್ಮಿಸುವ ಬಗ್ಗೆ ಮಂಗಳೂರಿನ ನಾಗರಿಕರ ತಂಡವೊಂದು ವಿರೋಧ ವ್ಯಕ್ತಪಡಿಸಿತ್ತು. ಪಾಲಿಕೆಯಲ್ಲಿ ಅಂದು ಪ್ರತಿಪಕ್ಷದ ಸಾಲಿನಲ್ಲಿದ್ದ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿತ್ತು. ಆದರೆ ಹಠಕ್ಕೆ ಬಿದ್ದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಕಾಮಗಾರಿಯಾಗಿ ಕ್ಲಾಕ್ ಟವರ್ ಕೈಗೆತ್ತಿಕೊಳ್ಳಲಾಯಿತು. ಇದೀಗ ಕ್ಲಾಕ್ ಟವರ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಜನರಿಗೆ ಟೈಮ್ ನೋಡಲು ಈ ಗಡಿಯಾರ ಗೋಪುರ ಬೇಕಿಲ್ಲದಿದ್ದರೂ ಬೇರೆ ರೀತಿಯಲ್ಲಿ ಅದು ಇಂದು ಉಪಯೋಗಕ್ಕೆ ಬಂದಿದೆ. ಅದೇನೆಂದರೆ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕ್ಲಾಕ್ ಟವರ್ ನ ಕಾರಂಜಿ ನೀರಿನಲ್ಲಿ ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಪಬ್ಲಿಕ್ ನಳ್ಳಿಗಳು ಇಲ್ಲದ ಈ ಕಾಲದಲ್ಲಿ ಸಿಕ್ಕಿದ್ದು ಅವಕಾಶ ಎಂಬಂತೆ ಮಾನಸಿಕ ಅಸ್ವಸ್ಥ ವ್ಯಕ್ತಿ ಇಲ್ಲಿ ಜಳಕ ಮಾಡಿದ್ದಾರೆ. ನಗರದಲ್ಲಿ ಸುತ್ತುವ ಜನರು ಈ ದೃಶ್ಯವನ್ನು ಕಂಡು ತೆಪ್ಪಗೆ ಮುಂದು ಸರಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು