12:29 PM Wednesday8 - July 2026
ಬ್ರೇಕಿಂಗ್ ನ್ಯೂಸ್
ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ…

ಇತ್ತೀಚಿನ ಸುದ್ದಿ

ಸಕಲೇಶಪುರ ಹೆಬ್ಬನಹಳ್ಳಿ ತೋಟದಲ್ಲಿ ಬೆಳೆದಿದೆ ಗಜ ಗಾತ್ರದ ಹಲಸು; ತೂಕ 72 ಬರೋಬ್ಬರಿ ಕೆಜಿ!!

08/07/2026, 12:28

ಹಾಸನ(reporterkarnataka.com): ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ತೋಟವೊಂದರ ಹಲಸಿನ ಮರದಲ್ಲಿ 72 ಕೆ.ಜಿ. ತೂಕದ ಹತ್ತು ಹಲಸಿನ ಹಣ್ಣುಗಳು ಬಿಟ್ಟಿವೆ! ಹೆಬ್ಬನಹಳ್ಳಿಯ ಎಚ್‌.ಬಿ. ಪ್ರತಾಪ್‌ಕುಮಾರ್ ಎಂಬುವರು ತಮ್ಮ ತೋಟದ ಮರದಲ್ಲಿದ್ದ ಮೂರು ಹಲಸಿನ ಹಣ್ಣುಗಳನ್ನು ಇಲ್ಲಿಯ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಮೂರು ದಿನಗಳಿಂದ ನಡೆದ ಹಲಸು ಹಾಗೂ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.ಬೃಹತ್‌ ಗಾತ್ರದ ಹಲಸಿನ ಹಣ್ಣುಗಳು ಎಲ್ಲರ ಗಮನ ಸೆಳೆದವು.ಮೇಳಕ್ಕೆ ಬಂದವರು ಈ ದೈತ್ಯ ಹಲಸಿನ ಹಣ್ಣುಗಳನ್ನು ನೋಡಿ ಬೆರಗಾದರು. ಒಂದು ಹಣ್ಣನ್ನು ಒಬ್ಬರ ಕೈಯಿಂದ ಎತ್ತಲು ಸಾಧ್ಯವಿಲ್ಲ. ಕನಿಷ್ಠ ಇಬ್ಬರು ಬೇಕು.
‘ಇಷ್ಟು ಗಜಗಾತ್ರದ ಹಲಸಿನ ಹಣ್ಣುಗಳನ್ನು ನಾನು ನೋಡಿಯೇ ಇಲ್ಲ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಇ. ಭಾನುಪ್ರಕಾಶ್‌ ಅಚ್ಚರಿ ವ್ಯಕ್ತಪಡಿಸಿದರು. ಪ್ರತಾಪ್ ಅವರ ತೋಟಕ್ಕೂ ಹೋಗಿ ಮರದಲ್ಲಿದ್ದ ಇಷ್ಟೇ ಗಾತ್ರದ ಏಳು ಹಣ್ಣುಗಳ ವಿಡಿಯೊ ಮಾಡಿಕೊಂಡು ಬಂದಿದ್ದಾರೆ.

‘54.43 ಕೆ.ಜಿ. ತೂಕದ ಹಲಸಿನ ಹಣ್ಣು ಇದುವರೆಗಿನ ಜಗತ್ತಿನ ಅತಿ ದೊಡ್ಡ ಹಣ್ಣು ಎಂದು ಗೂಗಲ್ ಮಾಹಿತಿ ಹೇಳುತ್ತದೆ. ಹೆಬ್ಬನಹಳ್ಳಿ ಪ್ರತಾಪ್ ಪ್ರದರ್ಶನಕ್ಕೆ ಇಟ್ಟಿದ್ದ ಹಲಸಿನ ಹಣ್ಣುಗಳು 72 ಕೆ.ಜಿ. ತೂಗುತ್ತವೆ. ತೋಟಗಾರಿಕಾ ಇಲಾಖೆಯಲ್ಲಿ ಇಷ್ಟು ತೂಕದ ಹಲಸಿನ ಹಣ್ಣಿನ ತಳಿ ಇಲ್ಲ. ಜಗತ್ತಿನ ಅತಿ ದೊಡ್ಡ ಹಾಗೂ ಹೆಚ್ಚು ತೂಕದ ಹಲಸಿನ ಹಣ್ಣುಗಳು ಇವೇ ಇರಬಹುದೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ, ಈ ಹಣ್ಣುಗಳ ತೂಕ, ಗಾತ್ರವೇ ದೊಡ್ಡದು ಎಂದು ಸಾಬೀತಾದರೆ ಹೆಬ್ಬನಹಳ್ಳಿಯ ದೈತ್ಯ ಹಲಸಿನ ಹಣ್ಣುಗಳು ದಾಖಲೆ ಪುಸ್ತಕ ಸೇರಲಿವೆ’ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು