11:36 PM Friday11 - April 2025
ಬ್ರೇಕಿಂಗ್ ನ್ಯೂಸ್
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್…

ಇತ್ತೀಚಿನ ಸುದ್ದಿ

ಮೊರಬ ಶ್ರೀವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಹೆಜ್ಜೇನು ಗೂಡು: ಶುಭ ಅಶುಭದ ಲೆಕ್ಕಾಚಾರ; ಹೂ ಫಲ ಕೇಳಿದ ಗ್ರಾಮದ ದೈವಸ್ಥರು!!

08/09/2021, 09:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದಲ್ಲಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಟರಾಸಿನ್ನಲ್ಲಿ ಹೆಜ್ಜೇನು ಹುಳುಗಳು ಗೂಡು ಕಟ್ಟಿವೆ. ಬೃಹದಾಕಾರದಲ್ಲಿ ನಿರ್ಮಿಸಲಾಗಿರುವ ಹೆಜ್ಜೇನು ಗೂಡು ದೇವರ ದರ್ಶನಕ್ಕೆ ಬರುವ ಭಕ್ತರನ್ನ ಸ್ವಾಗತಿಸುತ್ತಿವೆ. ಅಸಂಖ್ಯಾತ ಹೆಜ್ಜೇನು ಹುಳುಗಳು ಬೃಹತ್ ಗೂಡು(ಹುಟ್ಟು)ಕಟ್ಟಿದ್ದು ಶುಭವೋ ಅಶುಭವೋ ಭಕ್ತರಿಗೆ ತೊಂದರೆ ಕೊಡುತ್ತವೆಯೋ..!?ಎಂಬ ಆತಂಕ ಗ್ರಾಮದ ದೈವಸ್ಥರಲ್ಲಿ ಮನೆ ಮಾಡಿತ್ತು.ಅದಕ್ಕಾಗಿ ಪ್ರಾರಂಭದಲ್ಲಿಯೇ ಈ ಬಗ್ಗೆ ಗ್ರಾಮದ ದೈವಸ್ಥರು, ಶ್ರೀ ವೀರಭದ್ರ ದೇವರಲ್ಲಿ ಶುಭ ಅಶುಭ ಕುರಿತು ಮತ್ತು ಜೇನು ಹುಟ್ಟು ತೆರವು ಗೊಳಿಸಲು ಅನುಮತಿ ಕೋರಿ ಹೂ ಫಲ ಕೇಳಿದ್ದಾರೆ. ಶ್ರೀವೀರಭದ್ರೇಶ್ವರ ಸ್ವಾಮಿ ಎಡಭಾಗದ ಹೂ ಕೊಡೋ ಮೂಲಕ, ಭಕ್ತರಿಗೆ ಅಭಯ ನೀಡಿದ್ದು ಹಾಗೂ ಜೇನು ಹುಳುಗಳಿಗೂ ಆಶ್ರಯ ಹಸ್ತ ನೀಡಿದ್ದಾರೆ.

ಈ ಹೆಜ್ಜೇನು ಕಳೆದ ಆರು ತಿಂಗಳಿಂದ ದೇವಸ್ಥಾನದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಬೃಹತ್ ಗಾತ್ರದ ಹೆಜ್ಜೇನು ಹುಳುಗಳು ಹಾರಾಡುತ್ತಿರುತ್ತವೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನ ನಯವಾಗಿ ಸ್ಪರ್ಶಿಸುವ ನಿರುಪದ್ರವಿಗಳಾಗಿದ್ದು, ಹೆಜ್ಜೇನು ಹುಳುಗಳು ಭಕ್ತರನ್ನು ಸ್ವಾಗತಿಸಿ ಕೊಳ್ಳುತ್ತಿವೆ ಎಂಬಂತೆ  ಸನ್ನಿವೇಶ ಸೃಷ್ಠಿಯಾಗಿದೆ. ಕಳೆದ ಆರು ತಿಂಗಳಿಂದ ನಿರ್ಮಾಣವಾಗಿರುವ ಹೆಜ್ಜೇನಿನ ಬೃಹತ್ ಗೂಡು ಬಲು ಆಕರ್ಷಕವಾಗಿದ್ದು, ಹುಳುಗಳಿಂದ ಯಾರಿಗೂ ಯಾವೂದೇ ಕಾರಣಕ್ಕೂ ತೊಂದರೆ ಆಗಿಲ್ಲ. ಹೆಜ್ಜೆನು ಗೂಡು ನಿರ್ಮಾಣದಿಂದ ಶ್ರೀವೀರಭದ್ರೇಶ್ವರ ಭಕ್ತರ ಪಾಲಿಗೂ ಶುಭ ಶಕುನವಾಗಿ ಪರಿಣಮಿಸಿದೆ ಯಂತೆ, ದೇವಸ್ಥಾನದಲ್ಲಿ ಹೆಜ್ಜೇನು ವಾಸ ಮಾಡಿರುವುದರಿಂದಾಗಿ ಸಕಲರಿಗೂ ಹಿತವಾಗಲಿದೆ ಎಂದು ಆಸ್ತಿಕರು ಆಶಾಮನೋಭಾವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು