5:13 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

7 ತಾಸಿನಲ್ಲಿ 2 ಟ್ರಾಲಿಯಲ್ಲಿ 28 ಟನ್ ಕಬ್ಬು ಹೇರಿದ ಯುವಕ!: ಅನೀಲ್ ಕಾಬು ಜಾಧವ ಹೊಸ ದಾಖಲೆ

26/02/2022, 12:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ‌ ಬರಮಖೋಡಿ ಗ್ರಾಮದ ಅನೀಲ್ ಕಾಬು ಜಾಧವ ಎಂಬ ಯುವಕ, ತಾನೊಬ್ಬನೇ ಕೇವಲ 7 ತಾಸಿನಲ್ಲಿ 2 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು, ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕನೋರ್ವ ಇಷ್ಟೆ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9  ತಾಸು 30 ನಿಮಿಷ ಸಮಯ ತಗೊಂಡಿದ್ದ ಇದೀಗ ಜಾಧವ ಗ್ಯಾಂಗಿನ ಅನೀಲ್ ಕಾಬು ಜಾಧವ ಎಂಬ ಯುವಕ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 7 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿ ಹಳೆಯ ದಾಖಲೆಯನ್ನು‌ ಮುರಿದಿದ್ದಾನೆ ಎಂದು ಜಾಧವ ಗ್ಯಾಂಗಿನ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ದಾಖಲೆಯನ್ನು ನೋಡಿ ಪರಿಶೀಲಿಸಿ ದೃಢಿಕರಿಸಿ ಮಾತನಾಡಿದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ‌ ಸೋನಕರ ಅವರು ಅನೀಲ ಜಾಧವ ಎರಡು ಟ್ರಾಲಿ‌ ಕಬ್ಬನ್ನು ಸುಮಾರು 7 ಗಂಟೆಯಲ್ಲಿ ಹೇರಿದ್ದು‌‌‌ ನಿಜ, ಇದು ಉಳಿದ ಕಬ್ಬು ಹೇರುವ ಗ್ಯಾಂಗಿನವರಿಗೆ ಸ್ಪೂರ್ತಿ, ಇಂತಹ ದಾಖಲೆ ನಮ್ಮ ವಾರ್ಡಿನಲ್ಲಿ ಜರುಗಿರುವುದು ನಮಗೂ ಕೂಡ ಹೆಮ್ಮೆ ಎಂದರು.


ಈ ಕಬ್ಬು ಹೇರುವ ವೇಳೆ ಜಾಧವ ಗ್ಯಾಂಗಿನ ಕಾಬು ಜಾಧವ, ಮುತ್ತಪ್ಪ ಜಾಧವ, ಸಕಾರಾಮ ಚವ್ಹಾಣ, ಅನೀಲ ಜಾಧವ, ರಾಜು ಮಾಳಿ, ರಾಮು ಮಾಳಿ, ಲಾಲಸಾಬ ನದಾಫ, ಮುನ್ನಾಸಾಬ ನದಾಫ, ಪಿಂಟು ಗಡದೆ, ಬಾಳು ಮಾನೆ, ದೀಪಕ ಮಾನೆ, ಮಂಜು ಚಮಕೇರಿ, ಜಾಫರ್ ನದಾಫ್, ಸುನೀಲ ಜಾಧವ, ಓಂಕಾರ ಜಾಧವ, ಸಂಜೀವ ಜಾಧವ, ರಾಜು ಜಾಧವ, ಬಸವರಾಜ ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು