1:43 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ…

ಇತ್ತೀಚಿನ ಸುದ್ದಿ

30 ವರ್ಷಗಳ ಹಿಂದಿನ ಸಹಪಾಠಿಗೆ ಬಣಕಲ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು: ವಾಟ್ಸಾಪ್ ಗ್ರೂಪ್ ರಚಿಸಿ ಕಾರ್ಯಪ್ರವೃತ್ತಿ

24/02/2024, 10:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್ ಪ್ರೌಢಶಾಲೆಯ 1989-90 ಬ್ಯಾಚಿನ ವಿದ್ಯಾರ್ಥಿಗಳು ಸೊಂಟದ ಬಲ ಕಳೆದುಕೊಂಡು ಮೂಲೆಗುಂಪಾಗಿರುವ ಸಹಪಾಠಿ ಅಚ್ಯುತ ಪೂಜಾರಿ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಸೈಯದ್ ನವೀದ್ ಮಾತನಾಡಿ’ ಬಣಕಲ್ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿಗಳಾದ ನಾವು ನಮ್ಮ ಸ್ನೇಹಿತ ಸ್ಟ್ಯಾನಿ ಲೋಬೊ ಮುಖಾಂತರ ಮೂವತ್ತಮೂರು ವರ್ಷದ ನಂತರ ವಾಟ್ಸಾಪ್ ಗ್ರೂಪ್ ರಚಿಸಿ ಸ್ನೇಹಿತರ ಯೋಗಕ್ಷೇಮ ವಿಚಾರಿಸುತ್ತಿದ್ದೇವು. ಡಿಸೆಂಬರ್ ತಿಂಗಳಿನಲ್ಲಿ ಈ ಗ್ರೂಪ್ ರಚಿಸಿ ಕಷ್ಟದಲ್ಲಿರುವ ನಮ್ಮ ಸಹಪಾಠಿಗಳಿಗೆ ನೆರವಾಗುವ ಉದ್ದೇಶದಿಂದ ಈ ಗ್ರೂಪ್ ರಚಿಸಲಾಯಿತು’ಎಂದರು. ಸಹಪಾಠಿ ವಸಂತ್ ಎಸ್. ಪೂಜಾರಿ ಮಾತನಾಡಿ’ ನಮ್ಮ ಸಹಪಾಠಿ ಅಚ್ಯುತ ಪೂಜಾರಿ 28 ವರ್ಷದಿಂದ ಸೊಂಟದ ಬಲ ಕಳೆದು ಕೊಂಡು ದುಡಿಯಲಾಗದೇ ಮನೆಯ ಹಾಸಿಗೆ ಹಿಡಿದಿದ್ದರು. ಅವರ ಅಣ್ಣ ಅತ್ತಿಗೆ ಮಗನಂತೆ ಅವರ ಸೇವೆ ಮಾಡುತ್ತಿದ್ದಾರೆ ಎಂದು ವಿಷಯ ಕೇಳಿ ನಮಗೆ ಸಂತೋಷವಾಯಿತು. ಆದರೂ ಸ್ನೇಹಿತರ ಸಹಕಾರದಿಂದ ನಮ್ಮ ತಂಡದಿಂದ 1ಲಕ್ಷ 20 ಸಾವಿರ ಹಣವನ್ನು ಅಚ್ಯುತ ಪೂಜಾರಿ ಅವರಿಗೆ ಚೆಕ್ ಮೂಲಕ ನಾವು ವಿತರಿಸಿದೆವು. ಅಚ್ಯುತ ನಮ್ಮೆಲ್ಲರ ಸಹಪಾಠಿಗಳ ಗುರುತು ಹಚ್ಚಿ ಆನಂದ ಬಾಷ್ಪ ಸುರಿಸಿದರು. ಅವರ ಅಣ್ಣ ಅತ್ತಿಗೆಯವರ ಕಣ್ಣುಗಳು ಕೂಡ ತೇವವಾದವು. ಇದರಿಂದ ಬೇರೆ ವಿದ್ಯಾರ್ಥಿಗಳು ಕೂಡ ಶಾಲೆ ಸ್ನೇಹಿತರನ್ನು ಮರೆಯದೇ ಇತರರಿಗೂ ಇಂತಹ ಕಾರ್ಯಗಳು ಮಾದರಿಯಾಗಬೇಕು ಎಂಬುದು ನಮ್ಮ ತಂಡದ ಮೂಲ ಉದ್ದೇಶವಾಗಿದೆ’ಎಂದರು.ಈ ಸಂದರ್ಭದಲ್ಲಿ ಸ್ನೇಹಿತ ಸಹಪಾಠಿಗಳಾದ ಸ್ಟ್ಯಾನಿ ಲೋಬೊ,ಅಬ್ದುಲ್ ಸಲಾಂ, ಬಿ.ಜಿ.ಪ್ರಕಾಶ್, ವಿನಯ ಪ್ರಭು, ಮುನೀರ್,ಅನಿಲ್ ಮೊಂತೆರೊ, ನಾರಾಯಣ್,ಸುಕೇಶ್,ಬಿ.ಎಸ್.ಕಲ್ಲೇಶ್, ಎಸ್.ಎನ್.ರವಿ, ಸುವರ್ಣಲತ,ಕೆ.ಎಲ್.ರಘು, ರಿಯಾಜುದ್ದೀನ್,ಶಾರದಾ,ಟಿ.ಎಸ್.ಗಣೇಶ್,ಟಿ.ಎಸ್. ಪ್ರಸನ್ನ,ಗಣೇಶ್ ಸಬ್ಬೇನಹಳ್ಳಿ,ಹರೀಶ್ ಸುಭಾಷನಗರ, ಬಿ.ಸಿ.ಉಮೇಶ್,ಎಂ.ಎಸ್.ಪ್ರವೀಣ್, ಆಲ್ವಿನ್ ತೋಮಸ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು