9:32 AM Sunday5 - May 2024
ಬ್ರೇಕಿಂಗ್ ನ್ಯೂಸ್
ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ…

ಇತ್ತೀಚಿನ ಸುದ್ದಿ

ಹಬ್ಬಗಳಿಂದ ಸಂಬಂಧ ಸೌಹಾರ್ದತೆ, ಸಂಪರ್ಕ ಗಟ್ಟಿಯಾಗುತ್ತದೆ: ಮಾತೆ ಪಂಕಜಮ್ಮ

29/01/2024, 19:52

ವೃಷಭೇಂದ್ರ ವಿ.ಜಿ. ಕೂಡ್ಲಗಿ ವಿಜಯನಗರ

info.reporterkarnataka@gmail.com

ಹಬ್ಬಗಳಿಂದ ಪರಸ್ಪರ ಸಂಬಂಧಗಳು ಬೆಸೆದುಕೊಳ್ಳುತ್ತವೆ, ಸಮಾಜದಲ್ಲಿ ಸೌಹಾರ್ದತೆ ಇಮ್ಮಡಿಯಾಗುತ್ತದೆ, ಸಂಪರ್ಕ ಬೆಳೆಯುತ್ತದೆ ಎಂದು ಬಳ್ಳಾರಿಯ ಮಾತೆ ಪಂಕಜಮ್ಮರವರು ನುಡಿದರು. ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಚಿದಂಬರೇಶ್ವರ ದೇವಸ್ಥಾನದಲ್ಲಿ, ರಾಷ್ಟ್ರೀಯ ಸೇವಿಕ ಸಮಿತಿ ಕೂಡ್ಲಿಗಿ ಘಟಕದಿಂದ ಆಯೋಜಿಸಲಾಗಿದ್ದ. “ಸಂಕ್ರಮಣ ಉತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕ್ರತಿಗೆ ಮಾರು ಹೋಗಿರುವ ಯುವ ಪೀಳಿಗೆ, ನಮ್ಮ ದೇಶಿಯ ಸಂಸ್ಕ್ರತಿಯನ್ನು ಅಸಡ್ಡೆ ಮಾಡುತ್ತಿರುವುದು ಖೇದದ ಸಂಗತಿಯಾಗಿದೆ. ಪ್ರತಿಯೊಬ್ಬ ಭಾರತೀಯರು ಸನಾತನ ಧರ್ಮವನ್ನು ಗೌರವಿಸಬೇಕು, ಸಂಸ್ಕಾರ ಸಂಸ್ಕ್ರತಿ ಧಾರ್ಮಿಕ ನಿಷ್ಠೆ ಯನ್ನು ಹೊಂದಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ಉತ್ತಮ ಗುಣ ಮಟ್ಟದ ಶಿಕ್ಷಣದೊಂದಿಗೆ, ಉತ್ತಮ ಸಂಸ್ಕಾರ ನೀಡಬೇಕಿದ್ದು ಈ ನಿಟ್ಟಿನಲ್ಲಿ ದೇಶದ ಎಲ್ಲಾ ಪೋಷಕರು ಸಂಕಲ್ಪ ತೋಡಬೇಕು. ಹಬ್ಬಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಾಗೂ ಧಾರ್ಮಿಕ ಹಿನ್ನಲೆಯಲ್ಲಿ, ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕ‍ಾಗಿವೆ. ಕಾರಣ ಎಲ್ಲ‍ಾ ಪ್ರಮುಖ ಹಬ್ಬಗಳನ್ನು ಧರ್ಮಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜಮುನಾರವರು, ಸಂಘದ ನಿಯಮದಂತೆ ತರಗತಿ ನಡೆಸಿಕೊಟ್ಟರು. ಶ್ರೀರಾಮ ಮಂದಿರ ಕರಸೇವಕರಾದ ದಿವಂಗತ ಕೆ.ಬಿ.ನಾಗರಾಜರವರ ನೆನಪಾರ್ಥವಾಗಿ, ಅವರ ತಾಯಿ ಕೆ.ಬಿ.ಮಾರಮ್ಮರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಂತಿಮವಾಗಿ ನೆರೆದವರಿಗೆಲ್ಲ ಎಳ್ಳು ಬೆಲ್ಲ, ಹೂವು. ಹಾಗೂ ಸಿಹಿ ಹಂಚಿ ಸುಭ ಕೋರಿ ಸಂಕ್ರಮಣವನ್ನು ಸಂಭ್ರವಾಗಿ ಆಚರಿಸಲಾಯಿತು. ಮಮತಾ ಪ್ರಾರ್ಥಿಸಿದರು, ನಿರ್ಮಲಾ ಅಡ್ಮನಿರವರು ನಿರೂಪಿಸಿದರು. ಜಿ.ಶರಣ್ಯ ಸಂಘದ ಗೀತೆ ಹಾಡಿದರು. ಧನುಶ್ರೀರವರು ಶ್ಲೋಕವನ್ನು ಹೇಳಿದರು.
ಪ್ರತ್ಯುಷ ದೇವಿ ಅಮೃತ ವಚನ ವಾಚನ ಮಾಡಿದರು. ಮಹಾಲಕ್ಷ್ಮೀ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಡಾ”ರೂಪಾ ಉಪಸ್ಥಿತರಿದ್ದರು. ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು