ಇತ್ತೀಚಿನ ಸುದ್ದಿ
ಮಂಗಳೂರು: ಸ್ವಾತಂತ್ರ್ಯ ಸಂಭ್ರಮ ಕವಿಗೋಷ್ಠಿ; 25 ಕವಿಗಳಿಂದ ಕವನ ವಾಚನ; ಮೂವರು ಸಾಧಕರಿಗೆ ಸನ್ಮಾನ
15/08/2023, 23:14
ಮಂಗಳೂರು(reporterkarnataka.com):ಗುರುಕುಲ ಕಲಾ ಪ್ರತಿಷ್ಠಾನ (ರಿ) ವತಿಯಿಂದ ನಗರದ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ ಸ್ವಾತಂತ್ರ್ಯ ಸಂಭ್ರಮ ಕವಿಗೋಷ್ಟಿ ನಡೆಯಿತು.
ಕಾರ್ಯಕ್ರಮವನ್ನು ಕಲ್ಲಚ್ಚು ಪ್ರಕಾಶನ ಇದರ ಮಹೇಶ್ ಆರ್. ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕವಿಗೋಷ್ಟಿ ಅಧ್ಯಕ್ಷತೆಯನ್ನು ಹಿರಿಯ ಕವಿ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಸಾಹಿತಿ ಡಾ.ಸುರೇಶ್ ನೆಗಳ ಗುಳಿ,ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ ಮತ್ತಿತರರು ಉಪಸ್ಥಿತರಿದ್ದರು.
25 ಕವಿಗಳು ಕವನ ವಾಚನ ಮಾಡಿದರು. ಈ ವೇಳೆ 3 ಸಾಧಕರನ್ನು ಸನ್ಮಾನಿಸಲಾಯಿತು. ಪುಪ್ಷಲತಾ ಹಾಗೂ ಸಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.