ಇತ್ತೀಚಿನ ಸುದ್ದಿ
ಮೂಡಿಗೆರೆ: ಮತ್ತೆ ಮತ್ತೆ ಕಾಡಾನೆ ಹಾವಳಿ; ತೋಟಕ್ಕೆ ಲಗ್ಗೆ ಇಟ್ಟ ಗಜರಾಜನಿಂದ ಲಕ್ಷಕ್ಕೂ ಅಧಿಕ ಹಾನಿ
04/07/2022, 16:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಇಲ್ಲಿನ ಮೂಡಿಗೆರೆ ತಾಲೂಕಿನ ಬೆಟ್ಟಿಗೆರೆ ಗ್ರಾಮದಲ್ಲಿ ತೋಟವೊಂದಕ್ಕೆ ದಾಳಿ ಮಾಡಿದ ಕಾಡಾನೆ ಅಪಾರ ನಷ್ಟ ಉಂಟು ಮಾಡಿದೆ.
ಅಣ್ಣಿ ಪೂಜಾರಿ ಎಂಬವರ ತೋಟಕ್ಕೆ ಭಾನುವಾರ ರಾತ್ರಿ ದಾಳಿ ಇಟ್ಟ ಕಾಡನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ತೋಟದಲ್ಲಿ ಬೆಳೆದು ನಿಂತಿದ್ದ ಕಾಫಿ, ಅಡಿಕೆ, ಮೆಣಸು, ತೆಂಗು, ಏಲಕ್ಕಿ ಮೊದಲಾದ ಬೆಲೆಗಳನ್ನು ನಾಶ ಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.