ಇತ್ತೀಚಿನ ಸುದ್ದಿ
ಆಗುಂಬೆ ಘಾಟಿಯ ರಸ್ತೆ ತಡೆಗೋಡೆಯಲ್ಲಿ ಬಿರುಕು; ಮತ್ತೆ ಕುಸಿತದ ಭೀತಿ ವ್ಯಕ್ತಪಡಿಸಿದ ಸ್ಥಳೀಯರು
05/05/2024, 13:05
ತೀರ್ಥಹಳ್ಳಿ(reporterkarnataka.com): ಮಂಗಳೂರು- ಉಡುಪಿ- ಶಿವಮೊಗ್ಗ ಜಿಲ್ಲೆಗಳನ್ನು ಜೋಡಿಸುವ ಪ್ರಮುಖ ಕೊಂಡಿಯಾದ ಆಗುಂಭೆ ಘಾಟಿಯ ಸೂರ್ಯಾಸ್ತ ವೀಕ್ಷಿಸುವ ಸ್ಥಳದ ಬಳಿಯ ರಸ್ತೆಯ ತಡೆಗೋಡೆ ಬಳಿ ಬಿರುಕು ಬಿಟ್ಟಿದ್ದು, ಈ ಬಾರಿ ರಸ್ತೆ ತಡೆಗೋಡೆ ಕುಸಿತದ ಆತಂಕ ಮತ್ತೆ ಎದುರಾಗಿದೆ.
ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ವೀಕ್ಷಣೆಯ ಸ್ಥಳಚಾಗಿದ್ದು, ಇದರ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು ಅದು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘನ ವಾಹನಗಳ ಓಡಾಟದಿಂದ ವಾಹನಗಳು ತಡೆಗೋಡೆಗೆ ಡಿಕ್ಕಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ.