3:26 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಸ್ವ ಉತ್ಪನ್ನ ವ್ಯಾಪಾರ ಮೇಳ: ಪ್ರಜ್ಞಾ ಮತ್ತು ತಂಡ ಪ್ರಥಮ

10/03/2022, 08:59

ಉಪ್ಪಿನಂಗಡಿ(reporterkarnataka.com):

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ವ ಉತ್ಪನ್ನ ವ್ಯಾಪಾರ ಮೇಳ ನಡೆಯಿತು. 

ಈ ವ್ಯಾಪಾರ ಮೇಳದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾಥಿ೯ಗಳು  ಅನೇಕ ಬಗೆಯ ಕರಕುಶಲ ವಸ್ತುಗಳನ್ನು ಹಾಗೂ ವಿವಿಧ ಬಗೆಯ ಆಹಾರ ಪದಾಥ೯ಗಳ ಉತ್ಪನ್ನಗಳನ್ನು, ಸ್ಥಳೀಯ ಪರಿಸರದಲ್ಲಿ ಸಿಗುವ ಹಣ್ಣುಹಂಪಲುಗಳನ್ನು, ವಿವಿಧ ಬಗೆಯ ಹಣ್ಣುಗಳ ಪಾನೀಯಗಳನ್ನು ಸಿದ್ದಪಡಿಸಿಕೊಂಡು ಮೇಳದಲ್ಲಿ ಪಾಲ್ಗೊಂಡರು.

ಕಾಲೇಜಿನ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾಥಿ೯ಗಳಿಗೆ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರಿಗೂ ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿ ವಿಕ್ರಯ ಮಾಡಿದರು. ಅನೇಕ ಬಗೆಯ ಸ್ವ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಬಳಕೆಯಾಗುವ ರೀತಿ ಅವುಗಳ ಗುಣಮಟ್ಟದ ಬಗ್ಗೆ ಸೃಜನಶೀಲತೆಯಿಂದ ಪ್ರಸ್ತುತಪಡಿಸಿದ ರೀತಿಯು ಆಕಷ೯ಣೀಯವಾಗಿತ್ತು. 

ಅತೀ ಹೆಚ್ಚು ವಸ್ತುಗಳನ್ನು ವ್ಯಾಪಾರ ಮಾಡುವುದರ ಮೂಲಕ ಪ್ರಜ್ಞಾ ಮತ್ತು ಅವರ ತಂಡ ಪ್ರಥಮ ಸ್ಥಾನವನ್ನು , ಅನುಷಾ ಮತ್ತು ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಾಣಿಜ್ಯ ಸಂಘದ ಸಂಚಾಲಕರಾದ ದಿವ್ಯ.ಕೆ  ಅವರು ಸ್ವ ಉತ್ಪನ್ನ ವ್ಯಾಪಾರ ಮೇಳದ ಕುರಿತು ಮಾಗ೯ದಶ೯ನವನ್ನು ನೀಡಿದರು. ಉಪನ್ಯಾಸಕರಾದ ವೆರೋನಿಕ ಪ್ರಭ , ಡಾ.ನೂರೋಂದಪ್ಪ, ಶೃತಿ ಯವರು ವಿದ್ಯಾಥಿ೯ಗಳಿಗೆ ಸ್ವ ಉತ್ಪನ್ನ ವ್ಯಾಪಾರ ಸಂದಭ೯ದಲ್ಲಿ ಗ್ರಾಹಕರೊಂದಿಗಿನ ಮಾತುಕತೆ,ಭಾಷೆ,ಓಡನಾಟ ಕುರಿತು ಅರಿವು ಮೂಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು