ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ತಂಡದಿಂದ ಜೂನ್ ತಿಂಗಳ ಸಹಾಯಹಸ್ತ ಕವತ್ತಾರಿನ ವನಿತಾಗೆ ಹಸ್ತಾಂತರ
03/07/2021, 08:43
ಮಂಗಳೂರು(reporterkarnataka news): ಮೂಡುಬಿದರೆ ಸಮೀಪದ ನಿಡ್ಡೋಡಿಯ ಆರದಿರಲಿ ಬದುಕು ಆರಾಧನ ತಂಡದ ವತಿಯಿಂದ ಜೂನ್ ತಿಂಗಳ ಸಹಾಯ ಧನವನ್ನು ಕ್ಯಾನ್ಸ ರ್ ನಿಂದ ಬಳಲುತ್ತಿದ್ದ ಕವತ್ತಾರಿನ ವನಿತಾ ಅವರಿಗೆ ಹಸ್ತಾಂತರಿಸಲಾಯಿತು.
ಸಹಾಯ ಧನದ ಜತೆಗೆ ಅಕ್ಕಿ, ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು. ತಂಡವು ಲಾಕ್ ಡೌನ್ ಸಮಯದಲ್ಲಿ ಪೋಲೀಸರಿಗೆ ಮೇ13 ರಿಂದ ಜುಲೈ ವರೆಗೆ ಪ್ರತಿದಿನ 60 ಜನರಿಗೆ ಆಹಾರ ಪೊಟ್ಟಣ ವನ್ನು 50 ದಿನ ವಿತರಿಸಿತು.
ಅಭಿಷೇಕ್ ಶೆಟ್ಟಿ ಐಕಳ, ನವೀನ್ ಪುತ್ತೂರು, ದೇವಿ ಪ್ರಸಾದ್, ನಾಗರಾಜ ಶೆಟ್ಟಿ ಅಂಬೂರಿ, ರಂಗನಾಥ್ ಪಕ್ಷಿಕೆರೆ, ಧನಂಜಯ ಶೆಟ್ಟಿ, ಶ್ರೀನಿವಾಸ ಬಜಪೆ, ಗಣೇಶ್ ಪೈ , ವಿವೇಕ್ ನಿಡ್ಡೋಡಿ, ಪದ್ಮಶ್ರೀ ಭಟ್ ನಿಡ್ಡೋಡಿ, ಶಿವಮನ್ಯು, ರುದ್ರಮನ್ಯು, ರಾಕೇಶ್ ಪೊಳಲಿ ಹಾಗೂ ಆರದಿರಲಿ ಬದುಕು ಆರಾಧನ ತಂಡದ ಸರ್ವ ಸದಸ್ಯರು ವಾಯ್ಸ್ ಆಫ್ ಆರಾಧನಾ ಸದಸ್ಯರು ಸಹಕರಿಸಿದರು.