ಇತ್ತೀಚಿನ ಸುದ್ದಿ
ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ, ವಿಎಚ್ ಪಿ ನಾಯಕ ಮನೋಹರ ತುಳಜ ರಾಮ ಇನ್ನಿಲ್ಲ
02/07/2021, 23:09
ಮಂಗಳೂರು(reporterkarnataka news): ಎಬಿವಿಪಿಯ ಮಾಜಿ ರಾಜ್ಯಾಧ್ಯಕ್ಷ ಮನೋಹರ ತುಳಜ ರಾಮ ಶುಕ್ರವಾರ ನಿಧನರಾದರು.
ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಿವಾಸಿಯಾದ ಅವರು ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷರಾಗಿಯೂ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ನೇರ ನಡೆ ನುಡಿ, ಸರಳ – ಶಿಸ್ತಿನ ವ್ಯಕ್ತಿತ್ವದ ತುಳಜರಾಮ ಅವರು ಕಾರ್ಯಕರ್ತರು ಅಚ್ಚುಮೆಚ್ಚಿನ ಗುರುಗಳು. 70 ಮತ್ತು 80ರ ದಶಕದಲ್ಲಿ ಅವರು ಎಬಿವಿಪಿ ಅಭಿಯಾನದಲ್ಲಿ ಸಕ್ರಿಯರಾಗಿದ್ದರು. ಮಂಗಳೂರಿನಲ್ಲಿ ಎಬಿವಿಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಅವರ ಸೇವೆ ಅನನ್ಯವಾದದ್ದು.
ಕಳೆದ ತಿಂಗಳು ಅವರ ಪತ್ನಿ ಶ್ಯಾಮಲಾ ಮನೋಹರ್ ಅವರು ನಿಧನರಾಗಿದ್ದರು.