2:23 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು