2:25 PM Thursday28 - March 2024
ಬ್ರೇಕಿಂಗ್ ನ್ಯೂಸ್
ಕಾಜೂರು ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ: ಚುನಾವಣಾ ಉಸ್ತುವಾರಿ ರಮಾನಾಥ… ವಿಶಾಖಪಟ್ಟಣದಿಂದ ತಂದ 6 ಕೆಜಿಗೂ ಅಧಿಕ ಗಾಂಜಾ ವಶ: ಆರೋಪಿ ಬಂಧನ; 9… ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ… ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ; ಹೊಸಳಿಗಮ್ಮ… ಮಂಗಳೂರು: ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ಆಗಮಿಸಿದ ಡಾ. ಮಂಜುನಾಥ… ಜೆಡಿಎಸ್ ಸ್ಪರ್ಧಿಸಲಿರುವ 3 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ: ಮಂಡ್ಯದಿಂದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್… ಮನೆಯಲ್ಲಿ ಅಕ್ರಮ ನಾಡ ಬಂದೂಕು: ಬಣಕಲ್ ಸಮೀಪದ ವ್ಯಕ್ತಿಯ ಬಂಧನ ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ… ಲೋಕಸಭೆ ಚುನಾವಣೆ: ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ: ಹಿರಿಯ ಮುತ್ಸದ್ಧಿ ಜನಾರ್ದನ ಪೂಜಾರಿ… ಅಂಬೇಡ್ಕರ್ ವೃತ್ತ ಹೆಸರಿಡಲು ಕೈಗೊಂಡ ನಿರ್ಣಯದ ಪ್ರತಿ ಪಾಲಿಕೆಯಲ್ಲಿ ಇಲ್ಲವಂತೆ: ದಲಿತ ಮುಖಂಡರ…

ಇತ್ತೀಚಿನ ಸುದ್ದಿ

ನಾಗಮಂಗಲ: ಸಾಮೂಹಿಕ ಅಗ್ನಿ ಹೋತ್ರದ ಮೂಲಕ ಯೋಗ ಶಿಬಿರಕ್ಕೆ ಚಾಲನೆ

16/04/2021, 10:46

ಮಂಡ್ಯ( reporterkarnataka news): ಯೋಗ ಫಾರ್‌ ಇಮ್ಯುನಿಟಿ ಎಂಬ ಪರಿಕಲ್ಪನೆಯೊಂದಿಗೆ ಕೊರೊನಾ ಜಾಗೃತಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ  ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ವಿಶೇಷವಾಗಿ ಸಾಮೂಹಿಕ ಅಗ್ನಿಹೋತ್ರ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಬಸವ ಪತಂಜಲಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಕಪ್ಪದಗುಡ್ಡ  ಹಾಗೂ ಬಸವ ಪತಂಜಲಿ ಯೋಗ ಸಮಿತಿ ನಾಗಮಂಗಲ ಇವರ ಸಹಯೋಗದಲ್ಲಿ ಆಯೋಜಿಸಿರುವ 15 ದಿನಗಳ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ಸಾಮೂಹಿಕ ಅಗ್ನಿಹೋತ್ರದ ಮೂಲಕ ಪ್ರಾರಂಭಿಸಲಾಯಿತು.

ಅಗ್ನಿಹೋತ್ರದ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಪ್ತಗಿರಿ ಕ್ಲಿನಿಕ್  ನ  ವೈದ್ಯರಾದ ಡಾ. ವೆಂಕಟೇಶ್ ಕೆ.ಕೆ. ಅವರು ಅಗ್ನಿಹೋತ್ರದ ವೈಜ್ಞಾನಿಕ ಮಹತ್ವವನ್ನು ತಿಳಿಸಿದರು.

ಆಧುನಿಕ ಯುಗದಲ್ಲಿ ಮನುಷ್ಯ ತನ್ನ ಶ್ರಮವನ್ನು ಮಿತಿಗೊಳಿಸಿಕೊಳ್ಳಲು ಹೆಚ್ಚು ಹೆಚ್ಚು ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನದ ಮೋರೆ ಹೋಗುತ್ತಿರುವುದರ ಪರಿಣಾಮವಾಗಿ  ವಾತಾವರಣ  ಕಲುಷಿತಗೊಂಡು ಅನೇಕ  ದುಷ್ಪರಿಣಾಮಗಳನ್ನು ಇಂದು ಎದುರಿಸುವಂತಾಗಿದೆ. ಅಗ್ನಿಹೋತ್ರವನ್ನು ಮಾಡುವುದರಿಂದ ವಾತಾವರಣ ಶುದ್ದಿಗೋಳ್ಳುವುದರ ಜೊತೆಗೆ ಉಸಿರಾಟ ತೊಂದರೆ, ಚರ್ಮದ ರೋಗ,  ಮಾನಸಿಕ ಒತ್ತಡ ನಿವಾರಣೆಯಾಗುವುದಲ್ಲದೆ ರೋಗನಿರೋಧಕ ಶಕ್ತಿ ವೃದ್ದಿಯಾಗುತ್ತದೆ. ಜೊತೆಗೆ ಕೌಟುಂಬಿಕ ಸಾಮರಸ್ಯ ವೃದ್ಧಿಯಾಗಿ ಸ್ವಸ್ಥ ಸಾಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಪ್ರತಿ ದಿನ  ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರ ಮಾಡುವುದು ಸೂಕ್ತ.ಅತ್ಯಂತ ಉಪಯುಕ್ತವಾದ ಹಾಗೂ ಆರೋಗ್ಯಕರವಾದ ಇಂತಹ ಸನಾತನ ಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪ್ರತಿ ಮನೆ ಮನೆಯಲ್ಲೂ ಅಗ್ನಿಹೋತ್ರ ಮಾಡುವಂತೆ ಆಗಬೇಕು, ಅದು ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯ ವಾಗಿದೆ ಎಂದರು.

ನಂತರ ಮಾತನಾಡಿದ ಆಯುರ್ವೇದ ವೈದ್ಯ ರಾದ ಡಾ. ವಿಶ್ವನಾಥ್  ಅವರು ದೇಹದ ಅಂತರಂಗದಲ್ಲೂ ಅಗ್ನಿ ತತ್ವ ಪ್ರಧಾನವಾಗಿರುವುದರಿಂದ ಅಗ್ನಿಹೋತ್ರದ ಆಚರಣೆ ಆರೋಗ್ಯದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ಬೀರುವುದು. ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಅಲ್ಲದೆ ಅಗ್ನಿಹೋತ್ರದ ಭಸ್ಮವನ್ನು ಚರ್ಮದ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತಿದೆ ಎಂದರು.

ಬಸವ ಪತಂಜಲಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ ವಿರೇಶ್ ಗುರೂಜೀ ಯೋಗ ಶಿಬಿರ ನಿರ್ವಹಣೆ ಮಾಡಿದರು.

ನಾಗಮಂಗಲದ ಹಿರಿಯ ಯೋಗಾಚಾರ್ಯರಾದ  ನಾರಾಯಣಸ್ವಾಮಿ,  ಯೋಗ ಶಿಕ್ಷಕರಾದ ಲಕ್ಷ್ಮಣ್ ಜೀ, ಸತೀಶ್, ಮೂರ್ತಿ, ರಾಜಣ್ಣ, ಸ್ವಾಮಿ, ಚೇತನ ಗೌರೀಶ್, ಆಶಾ, ಶಿಕ್ಷಕಿ ಉಮಾ,  ಗೀತಾ, ಪ್ರೇಮ, ಸುರೇಖಾ, ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು