12:32 AM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

110 ವರ್ಷಗಳ ಹಿಂದೆ ಮಂಗಳೂರು ರಥಬೀದಿಯ ವೆಂಕಟರಮಣ ದೇಗುಲದಲ್ಲಿ ಏನಿತ್ತು ವಿಶೇಷ?: ಬನ್ನಿ, ಆ ಹಳೆಯ ನೋಟಿಸ್ ಓದೋಣ !

09/06/2021, 15:48

ಮಂಗಳೂರು(reporterkarnataka news): ಇದು ಅಪರೂಪದಲ್ಲಿ ಅತೀ ಅಪರೂಪ, ವಿರಳದಲ್ಲಿ ಅತೀ ವಿರಳ ಎಂದೇ ಹೇಳಬಹುದು. ಶತಮಾನ ಹಿಂದಿನ, ಬ್ರಿಟಿಷ್ ಸಾಮ್ರಾಜ್ಯ ಕಾಲದ ನೋಟಿಸ್ ಇದು. ಹಾಗೆಂತ ಜನಪದ ಕಲೆಯಾದ ಯಕ್ಷಗಾನ, ಕಂಬಳದ ನೋಟಿಸ್ ಅಲ್ಲ. ಬದಲಿಗೆ ಮಂಗಳೂರಿನ ರಥಬೀದಿಯಲ್ಲಿರುವ ಐತಿಹಾಸಿಕ ಶ್ರೀ ವೆಂಕಟರಮಣ ದೇವಾಲಯಕ್ಕೆ ಸಂಬಂಧಿಸಿದ ನೋಟಿಸ್ (ಆಮಂತ್ರಣ ಪತ್ರಿಕೆ). ಬಹಳ ಶ್ರದ್ಧೆಯಿಂದಲೇ ಇದನ್ನು ಕಾಪಾಡಿಕೊಂಡು ಬರಲಾಗಿದೆ.

ಅದು ಬ್ರಿಟಿಷ್ ಸಾಮ್ರಾಜ್ಯದ ಕಾಲ. 5ನೇ ಜಾರ್ಜರ ಆಳ್ವಿಕೆಯ ಅವಧಿ. 1911ನೇ ಇಸವಿ. ಅಂದ್ರೆ ಸುಮಾರು 110 ವರ್ಷಗಳ ಹಿನ್ನೋಟವನ್ನು ಇದು ನಮ್ಮೆಲ್ಲರ ಮನ ತುಂಬಿಸುತ್ತದೆ, ಹೃದಯವನ್ನು ನವಿರಾಗಿ ತಟ್ಟುತ್ತದೆ.

ಬ್ರಿಟಿಷ್ ದೊರೆ 5ನೇ ಜಾರ್ಜ್ ಹಾಗೂ ಮಹಾರಾಣಿ ಮೇರಿ ಅವರ ಪಟ್ಟಾಭಿಷೇಕದ ಸಂಭ್ರಮವನ್ನು ಸಾಕ್ಷಾತ್ಕರಿಸುವ ಕಾಲವಾಗಿತ್ತು. ಇದರ ಅಂಗವಾಗಿ ರಥಬೀದಿ(ಅಂದಿನ ತೇರಬೀದಿ)ಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆಯ ವಿವರ ನೋಟಿಸ್ ಎಂಬ ಈ ಆಮಂತ್ರಣ ಪತ್ರಿಕೆಯಲ್ಲಿ ಲಭ್ಯವಿದೆ. 1911 ಡಿಸೆಂಬರ್ 12ನೇ ಮಂಗಳವಾರದಂದು ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ ನಡೆದಿತ್ತು ಎನ್ನುವುದನ್ನು ಇದು ಸಾದರಪಡಿಸುತ್ತದೆ. ಅಂದು ದೇವಳದ ಮೊಕ್ತೇಸರರಾಗಿ ಸಾವಕಾರ ಪಾಂಡುರಂಗ ಪೈ, ಸಾವಕಾರ ರಂಗ ಪೈ ಹಾಗೂ ನಗರ ಗಣಪತಿ ರಾವ್ ಸೇವೆ ಸಲ್ಲಿಸಿದ್ದರು. ದೇಗುಲದ ಆಡಳಿತ ಮಂಡಳಿಯ ಸದಸ್ಯರಾಗಿ ಎಂ. ನಾಗಪ್ಪ ಭಂಡಾರಿ, ಬಿ. ನಾರಾಯಣಪ್ಪ ಹಾಗೂ ಎ. ಶ್ರೀನಿವಾಸ ರಾವ್ ಕಾರ್ಯನಿರ್ವಹಿಸಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು