8:17 AM Wednesday31 - December 2025
ಬ್ರೇಕಿಂಗ್ ನ್ಯೂಸ್
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ

ಇತ್ತೀಚಿನ ಸುದ್ದಿ

ಪಂಜಾಬ್‌: ಆಪರೇಶನ್ ಕಮಲ ಸಂಚಿಗೆ ರಾಜ್ಯಪಾಲರ ಸಾಥ್: ಆಮ್ ಆದ್ಮಿ ಪಾರ್ಟಿ ಆರೋಪ

25/09/2022, 13:38

ಚಂಡೀಗಢ(reporterkarnataka.com),: ಪಂಜಾಬ್‌ನಲ್ಲಿ ಆಪರೇಶನ್ ಕಮಲ ನಡೆಸಲು ಸಂಚು ಹೂಡಿರುವ ಬಿಜೆಪಿಯ ಅಣತಿಯಂತೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡೆದುಕೊಳ್ಳುತ್ತಿದ್ದಾರೆಂದು ಭಗವಂತ ಮಾನ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರಕಾರ ಆರೋಪಿಸಿದೆ.

ಬಿಜೆಪಿಯು ಅಧಿಕಾರದಲ್ಲಿರದ ರಾಜ್ಯಗಳಲ್ಲಿ ವಿರೋಧ ಪಕ್ಷವಾಗಿ ವರ್ತಿಸುವ ಹಾಗೂ ಆಡಳಿತಾರೂಢ ಸರಕಾರವು ಕೆಲಸ ಮಾಡದಂತೆ ತಡೆಯುವ ಅದರ ಅಜೆಂಡಾವನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯಪಾಲರಿಗೆ ವಹಿಸಲಾಗಿದೆ ಎಂದು ಪಂಜಾಬ್‌ನ ಇಂಧನ ಸಚಿವ ಅಮಾನ್ ಆರೋರಾ ಆರೋಪಿಸಿದ್ದಾರೆ. ಪಂಜಾಬ್‌ನ ಆಪ್ ಸರಕಾಕ್ಕೆ ರಾಜ್ಯಪಾಲರು ಕಳುಹಿಸಿರುವ ನೋಟಿಸ್‌ಗಳು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಸರಕಾರವು ಕಾರ್ಯಾಚರಿಸುವುದಕ್ಕೆ ತಡೆಯೊಡ್ಡಿವೆ ಎಂದವರು ಆರೋಪಿಸಿದರು.

“ಕಳೆದ 75 ವರ್ಷಗಳಲ್ಲಿ ಯಾವುದೇ ರಾಷ್ಟ್ರಪತಿಯವರಾಗಲಿ ಅಥವಾ ರಾಜ್ಯಪಾಲರಾಗಲಿ, ಅಧಿವೇಶವನ್ನು ಕರೆಯುವುದಕ್ಕೆ ಮುನ್ನ ಶಾಸನಸಭೆಯ ಕಲಾಪಗಳ ಪಟ್ಟಿಯನ್ನು ನೀಡುವಂತೆ ಕೇಳಿರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಇದು ನಡೆದಿದೆ. ಯಾಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಆಮ್ ಆದ್ಮಿ ಸರಕಾರವು ಶ್ರಮಿಸುವುದನ್ನು ತಡೆಗಟ್ಟಲು ಪಂಜಾಬ್‌ನ ರಾಜ್ಯಪಾಲರು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ” ಎಂದು ಆಮನ್ ಆರೋರಾ ಆರೋಪಿಸಿದರು.

ಇತ್ತೀಚೆಗೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಪತ್ರವೊಂದನ್ನು ಬರೆದು, ಸರಕಾರದ ಕಾನೂನು ಸಲಹೆಗಾರರು ತನಗೆ ಸಮರ್ಪಕವಾಗಿ ವಿವರಣೆಗಳನ್ನು ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಸರಕಾರವು ಕಾರ್ಯನಿರ್ವಹಿಸದಂತೆ ತಡೆಯುತ್ತಿದ್ದರೆ, ಪಂಜಾಬ್‌ನಲ್ಲಿ ಈ ಕೆಲಸವನ್ನು ಬಿಜೆಪಿಯು ರಾಜ್ಯಪಾಲರಿಗೆ ವಹಿಸಿದೆ. ಆಪ್‌ನ ಜನಪ್ರಿಯತೆಯಿಂದ ಅವರು ಹೆದರಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷವು ಜನತೆಯ ಪರವಾದ ವಿಷಯಗಳನ್ನು ಪ್ರಸ್ತಾವಿಸದಂತೆ ತಡೆಯಲು ಬಿಜೆಪಿಯು ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದೆ ಎಂದವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು