3:21 AM Wednesday29 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಪಂಜಾಬ್‌: ಆಪರೇಶನ್ ಕಮಲ ಸಂಚಿಗೆ ರಾಜ್ಯಪಾಲರ ಸಾಥ್: ಆಮ್ ಆದ್ಮಿ ಪಾರ್ಟಿ ಆರೋಪ

25/09/2022, 13:38

ಚಂಡೀಗಢ(reporterkarnataka.com),: ಪಂಜಾಬ್‌ನಲ್ಲಿ ಆಪರೇಶನ್ ಕಮಲ ನಡೆಸಲು ಸಂಚು ಹೂಡಿರುವ ಬಿಜೆಪಿಯ ಅಣತಿಯಂತೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡೆದುಕೊಳ್ಳುತ್ತಿದ್ದಾರೆಂದು ಭಗವಂತ ಮಾನ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರಕಾರ ಆರೋಪಿಸಿದೆ.

ಬಿಜೆಪಿಯು ಅಧಿಕಾರದಲ್ಲಿರದ ರಾಜ್ಯಗಳಲ್ಲಿ ವಿರೋಧ ಪಕ್ಷವಾಗಿ ವರ್ತಿಸುವ ಹಾಗೂ ಆಡಳಿತಾರೂಢ ಸರಕಾರವು ಕೆಲಸ ಮಾಡದಂತೆ ತಡೆಯುವ ಅದರ ಅಜೆಂಡಾವನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯಪಾಲರಿಗೆ ವಹಿಸಲಾಗಿದೆ ಎಂದು ಪಂಜಾಬ್‌ನ ಇಂಧನ ಸಚಿವ ಅಮಾನ್ ಆರೋರಾ ಆರೋಪಿಸಿದ್ದಾರೆ. ಪಂಜಾಬ್‌ನ ಆಪ್ ಸರಕಾಕ್ಕೆ ರಾಜ್ಯಪಾಲರು ಕಳುಹಿಸಿರುವ ನೋಟಿಸ್‌ಗಳು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಸರಕಾರವು ಕಾರ್ಯಾಚರಿಸುವುದಕ್ಕೆ ತಡೆಯೊಡ್ಡಿವೆ ಎಂದವರು ಆರೋಪಿಸಿದರು.

“ಕಳೆದ 75 ವರ್ಷಗಳಲ್ಲಿ ಯಾವುದೇ ರಾಷ್ಟ್ರಪತಿಯವರಾಗಲಿ ಅಥವಾ ರಾಜ್ಯಪಾಲರಾಗಲಿ, ಅಧಿವೇಶವನ್ನು ಕರೆಯುವುದಕ್ಕೆ ಮುನ್ನ ಶಾಸನಸಭೆಯ ಕಲಾಪಗಳ ಪಟ್ಟಿಯನ್ನು ನೀಡುವಂತೆ ಕೇಳಿರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಇದು ನಡೆದಿದೆ. ಯಾಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಆಮ್ ಆದ್ಮಿ ಸರಕಾರವು ಶ್ರಮಿಸುವುದನ್ನು ತಡೆಗಟ್ಟಲು ಪಂಜಾಬ್‌ನ ರಾಜ್ಯಪಾಲರು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ” ಎಂದು ಆಮನ್ ಆರೋರಾ ಆರೋಪಿಸಿದರು.

ಇತ್ತೀಚೆಗೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಪತ್ರವೊಂದನ್ನು ಬರೆದು, ಸರಕಾರದ ಕಾನೂನು ಸಲಹೆಗಾರರು ತನಗೆ ಸಮರ್ಪಕವಾಗಿ ವಿವರಣೆಗಳನ್ನು ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಸರಕಾರವು ಕಾರ್ಯನಿರ್ವಹಿಸದಂತೆ ತಡೆಯುತ್ತಿದ್ದರೆ, ಪಂಜಾಬ್‌ನಲ್ಲಿ ಈ ಕೆಲಸವನ್ನು ಬಿಜೆಪಿಯು ರಾಜ್ಯಪಾಲರಿಗೆ ವಹಿಸಿದೆ. ಆಪ್‌ನ ಜನಪ್ರಿಯತೆಯಿಂದ ಅವರು ಹೆದರಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷವು ಜನತೆಯ ಪರವಾದ ವಿಷಯಗಳನ್ನು ಪ್ರಸ್ತಾವಿಸದಂತೆ ತಡೆಯಲು ಬಿಜೆಪಿಯು ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದೆ ಎಂದವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು