4:09 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಯೋಗಿ ಭರ್ಜರಿ ಜಯ: ಕದ್ರಿ ಜೋಗಿ ಮಠ ಹರ್ಷಮಯ!!; ದೂರದ ಉತ್ತರ ಪ್ರದೇಶಕ್ಕೂ ದಕ್ಷಿಣದ ಮಂಗಳೂರಿಗೂ ಎತ್ತಣ ಸಂಬಂಧ?

10/03/2022, 20:16

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದೂರದ ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿ ಸಂಭ್ರಮ ಆಚರಿಸಲಾಯಿತು. ಉತ್ತರದ 

ಹಿಮಾಲಯ ತಪ್ಪಲಿನ ಉತ್ತರ ಪ್ರದೇಶಕ್ಕೂ ದಕ್ಷಿಣದ ಮಂಗಳೂರಿಗೂ ಎತ್ತಣ ಸಂಬಂಧ ಎಂದು ನೀವೆಲ್ಲ ತಲೆ ಕೆರೆದುಕೊಳ್ಳಬಹುದು. ಆದರೆ ಸಂಬಂಧ ಇರುವುದರಿಂದಲೇ ಕದ್ರಿಯ ಜೋಗಿ ಮಠದಲ್ಲಿ ಸಂಭ್ರಮ ನೆಲೆಸಿದೆ.

ಆದಿತ್ಯನಾಥ್ ಯೋಗಿ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯೋಗಿ ಅವರು ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಇವೆಲ್ಲ ಖುಷಿ ಉತ್ತರ ಪ್ರದೇಶ ಮಾತ್ರವಲ್ಲದೆ ದಕ್ಷಿಣ ಭಾರತದ ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿಯೂ ಮಡುಗಟ್ಟಿ ನಿಂತಿದೆ.

ಯೋಗಿ ಆದಿತ್ಯನಾಥ್‌ ಅವರಿಗೂ  ಮಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ಯೋಗಿಯವರ ಭರ್ಜರಿ ಗೆಲುವು ಇಲ್ಲಿಯ ಕದ್ರಿಯಲ್ಲಿರುವ ಕದಳಿ ಶ್ರೀ ಯೋಗೇಶ್ವರ (ಜೋಗಿ) ಮಠದಲ್ಲಿ ಸಂಭ್ರಮ ನೆಲೆಸುವಂತೆ ಮಾಡಿದೆ.

ಯೋಗಿ ಆದಿತ್ಯನಾಥ್ ಅವರು ಅಖಿಲ ಭಾರತ ವರ್ಷಿಯ ಅವಧೂತ್ ಯೋಗಿ ಮಹಾ ಸಭಾ ಭೇಕ್ ಭಾರಹ ಪಂಥದ ಮಹಾಂತ್ ಆಗಿದ್ದು, 12
ವರ್ಷಗಳಿಗೊಮ್ಮೆ ನಡೆಯುವ ಮಂಗಳೂರು ಕದ್ರಿಯ ಜೋಗಿ ಮಠದ ಮಠಾಧಿಪತಿ (ರಾಜ) ಗಳ ಆಯ್ಕೆ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಯೋಗಿ ನೇತೃತ್ವದಲ್ಲಿಯೇ ಮಠಾಧಿಪತಿಯ ಆಯ್ಕೆ ನಡೆಯುತ್ತದೆ. ಭಾರಹ ಪಂಥದ ಪದಾಧಿಕಾರಿಗಳ ಸಮ್ಮುಖದಲ್ಲಿ ಕುಂಭಮೇಳದ ಸಮಯದಲ್ಲಿ ನಾಸಿಕ್ ಸಮೀಪದ ತ್ರಯಂಬಕೇಶ್ವರದಲ್ಲಿ 12 ಪಂಗಡಗಳ ಶ್ರೀಗಳು ಮಂಗಳೂರು ಜೋಗಿ  ಮಠದ  ‘ರಾಜ’ವನ್ನು ಆಯ್ಕೆ ಮಾಡುತ್ತಾರೆ.

ಯೋಗಿಯವರು ಆಯ್ಕೆ ಮಾಡಿದ ಬೈರಾಗ್ ಪಂಥದ ಶ್ರೀ ಯೋಗಿ ನಿರ್ಮಲನಾಥ್ ಅವರು ಸದ್ಯ ಜೋಗಿ ಮಠದ ‘ರಾಜ’ನಾಗಿದ್ದಾರೆ. ಜೋಗಿ ಮಠಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. 

ಯೋಗಿಯವರು ಇಲ್ಲಿಯ ತನಕ ಮಂಗಳೂರಿಗೆ 6 ಸಲ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದಾಗ ಪ್ರತೀ ಸಂದರ್ಭದಲ್ಲೂ ಅವರು ಜೋಗಿ ಮಠಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ವಿಶ್ರಾಂತಿ, ವಾಸ್ತವ್ಯಕ್ಕೆ ಜೋಗಿ ಮಠವನ್ನೇ ಆಶ್ರಯಿಸುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯನಂತೆ ನೆಲದ ಮೇಲೆಯೇ ಪವಡಿಸುತ್ತಾರೆ. ಒಟ್ಟಿನಲ್ಲಿ ಕದ್ರಿ ಜೋಗಿ ಮಠದಲ್ಲಿ ಸಂಭ್ರಮ ನೆಲೆಸುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು