4:19 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಎತ್ತಿನಭುಜ: ಮೀಸಲು ಅರಣ್ಯದಲ್ಲಿ  ಮ್ಯಾರಥಾನ್ ಗೆ ಪರಿಸರಪ್ರಿಯರ ವಿರೋಧ

27/11/2021, 09:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

The Malnad Ultra ಎಂಬ ಸಂಸ್ಥೆಯು ಮೂಡಿಗೆರೆಯ ಎತ್ತಿನಭುಜ ಗುಡ್ಡದ ವ್ಯಾಪ್ತಿಯಲ್ಲಿ ಇಂದಿನಿಂದ ಮ್ಯಾರಥಾನ್ ಅನ್ನು ಆಯೋಜಿಸಿದೆ. 


ಆದರೆ ಈ ಮ್ಯಾರಥಾನ್ ಪಶ್ಚಿಮಘಟ್ಟ ಮೀಸಲು ಅರಣ್ಯದಲ್ಲಿ ಹಾದು ಹೋಗುವುದರಿಂದ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವ ಉದ್ದೇಶಕ್ಕೆ, ಯಾರ ಉದ್ಧಾರಕ್ಕೆ  ಮಾಹಿತಿಯಂತೆ 500 ಜನರ ಭಾಗವಹಿಸಲಿರುವ  ಮ್ಯಾರಥಾನ್ ಇದು. ಇಷ್ಟೊಂದು ಜನ ಒಟ್ಟಿಗೇ ಚಟುವಟಿಕೆ ಪ್ರಾರಂಭಿಸಿದರೆ ಪರಿಸರ ಸೂಕ್ಷ್ಮ ಪ್ರದೇಶದ ಗತಿಯೇನು !? ಇವರ ಶೌಚ ಕ್ರಿಯೆಯಿಂದಾಗಿ ಅಲ್ಲಿನ ಜಲಮೂಲಗಳು ಕುಲಗೆಟ್ಟು ಹೋಗುವುದಕ್ಕೆ ಯಾರು ಹೊಣೆ ? ಜಿಲ್ಲಾಡಡಳಿತ, ಅರಣ್ಯ ಇಲಾಖೆ ಹೇಗೆ ಇಂತಹ Mega Event ಗೆ ಅನುಮತಿ ನೀಡಿತು.? ನಮ್ಮ ಪ್ರಶ್ನೆಗಳಿಗೆ ಜಿಲ್ಲಾ ಉಪಸಂರಕ್ಷಣಾಧಿಕಾರಿಗಳು ಬರೀ ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. 


ಈ ಮ್ಯಾರಥಾನ್ ನ  ಸಂಚಾಲಕರೇ ಮಾಹಿತಿ ನೀಡಿರುವಂತೆ ಮ್ಯಾರಥಾನ್ ನಲ್ಲಿ ಭಾಗವಹಿಸುವವರಿಗೆ ತಲಾ 3000-3500 ರುಪಾಯಿ  ನಿಗದಿಪಡಿಸಲಾಗಿದೆ. 3000*400 ಜನ ಎಂದುಕೊಂಡರೂ 12 ಲಕ್ಷವಾಯಿತು. ಯಾವುದೋ ಖಾಸಗಿ ಈವೆಂಟ್ ಸಂಸ್ಥೆಗೆ ಲಾಭ ಮಾಡಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಪಶ್ಚಿಮಘಟ್ಟ ವನ್ನು ಧಾರೆಯೆರೆಯಿತಾ ? ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಇತ್ತೀಚಿನ ಸುದ್ದಿ

ಜಾಹೀರಾತು