3:58 PM Sunday13 - July 2025
ಬ್ರೇಕಿಂಗ್ ನ್ಯೂಸ್
Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ

ವರಂಗ ಜೈನ ಮಠದ ಕೆರೆಯಲ್ಲಿ ಈಜಲಾಗದೆ ಒದ್ದಾಡಿದ ಯುವಕರು; ಲೈಫ್ ಜಾಕೆಟ್ ನೀಡಿ ರಕ್ಷಿಸಿದ ಪ್ರವಾಸಿಗರು

11/06/2024, 11:11

ಕಾರ್ಕಳ(reporterkarnataka.com): ಈಜಲು ಹೋದ ಯುವಕರು ನೀರಿನ ಮಧ್ಯದಲ್ಲಿ ಈಜಲು ಸಾಧ್ಯವಾಗದೆ ಒದ್ದಾಡುತ್ತಿದ್ದಾಗ ಲೈಫ್ ಜಾಕೆಟ್ ನೀಡಿ ಜೀವ ಉಳಿಸಿದ ಘಟನೆ ಹೆಬ್ರಿಯ ತಾಲೂಕಿನ ವರಂಗ ಜೈನ ಮಠದ ಕೆರೆಯಲ್ಲಿ ನಡೆದಿದೆ.

ಹೊರಜಿಲ್ಲೆಯಿಂದ ಆಗಮಿಸಿದ ಇಬ್ಬರು ಯುವಕರು ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ  ಈಜಿಕೊಂಡು ಸಾಗಿದ್ದಾರೆ. ಆದರೆ ನೀರಿನ ಮದ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಒದ್ದಾಡಿದ್ದಾರೆ . ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಪ್ರವಾಸಕ್ಕೆ  ಅಗಮಿಸಿದ್ದರು ಲೈಫ್ ಜಾಕೆಟ್ ಬಿಸಾಡಿ ಯುವಕರನ್ನು ರಕ್ಷಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ದೇವಾಲಯ ಪುರೋಹಿತರು ಯುವಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
*ಸೆಕ್ಯುರಿಟಿ ಇಲ್ಲ:* ದಿನನಿತ್ಯ ಒಂದುವರೆ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ವರಂಗ ಕೆರೆಬಸದಿಗೆ ಅಗಮಿಸಿ ನಿಸರ್ಗದ ನಡುವೆ ಖುಷಿ ಯನ್ನು ಕಳೆಯುತ್ತಾರೆ. ಆದರೆ ಅದರಲ್ಲೂ ವಿಕೆಂಡ್ ನಲ್ಳಿ ರಜಾದಿನಗಳಲ್ಲಿ ನಿತ್ಯ 2000 ಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಾರೆ ಆದರೆ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯ ವೆ ಘಟನೆ ಗೆ ಸಾಕ್ಷಿ ಯಾಗಿದೆ. ಮಧ್ಯಾಹ್ನ ಹೊತ್ತಿಗೆ ಒಂದು ಘಂಟೆಗೆ ಗಳ ಸಮಯದಲ್ಲಿ ಅಂಬಿಗ ಊಟಕ್ಕೆ ತೆರಳುವ ವೇಳೆಯಲ್ಲಿ ಸೆಕ್ಯುರಿಟಿ ಯನ್ನು ನೇಮಿಸಲು ಸಾಧ್ಯವಾಗಿಲ್ಲ. ಅಕಸ್ಮಾತ್ತಾಗಿ ಪ್ರಾಣ ಹಾನಿ ಸಂಭವಿಸಿದರೆ ದುರಂತ ನಡೆದುಹೋಗುತಿತ್ತು.. ಬಸದಿಯ ಆಡಳಿತ ಮಂಡಳಿಯ ತೀರಾ ನಿರ್ಲಕ್ಷ್ಯ ವೆ ಘಟಕನೆಗೆ ಹೊಣೆಯಾಗಿದೆ.
ಘಟನೆ ಬಗ್ಗೆ ಮಠದ ಆಡಳಿತ ಮಂಡಳಿಯನ್ನು  ವಿಚಾರಿಸಿದಾಗ ಘಟನೆಯು  ದೋಣಿಯ ಅಂಬಿಗ ಹಾಗೂ ಜೈನ‌ಮಠದ ಪೂಜಾರಿ  ಊಟಕ್ಕೆ ತೆರಳಿದ ವೇಳೆ ಈ ಯುವಕರು ನೀರಿಗಿಳಿದು  ಹುಚ್ಚಾಟ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು