9:19 PM Monday9 - February 2026
ಬ್ರೇಕಿಂಗ್ ನ್ಯೂಸ್
ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ*

ಇತ್ತೀಚಿನ ಸುದ್ದಿ

ಊರೆಲ್ಲ ಕೊಳ್ಳೆ ಹೊಡೆದ ಬಳಿಕ ಕೋಟೆ ಬಾಗಿಲು ಮುಚ್ಚಿದ್ರು!: ಮಟ್ಕಾ ಸೋಡಾ ಸ್ಟಾಲ್ ಗೆ ಪಾಲಿಕೆ ಆರೋಗ್ಯ ಸಿಬ್ಬಂದಿಗಳ ಕಣ್ಕಟ್ಟಿನ ರೈಡ್!!

24/10/2023, 21:05

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಊರೆಲ್ಲ ಕೊಳ್ಳೆ ಹೊಡೆದ ಬಳಿಕ ಕೋಟೆ ಬಾಗಿಲು ಮುಚ್ಚಿದ್ರು ಎನ್ನುವಂತಾಗಿದೆ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗದ ಕಥೆ. ದಸರಾ ಮಹೋತ್ಸವ ಸಂದರ್ಭದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ ಫುಡ್ ಸ್ಟಾಲ್, ಜ್ಯೂಸ್ ಸ್ಟಾಲ್, ಮಟ್ಕಾ ಸೋಡಾ ಸ್ಟಾಲ್ ಗಳ ಮೇಲೆ ಪಾಲಿಕೆಗೆ ನಿಯಂತ್ರಣವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.


ನವರಾತ್ರಿ ಮಹೋತ್ಸವ ಕೊನೆಯ ಹಂತದಲ್ಲಿದೆ. ವಿಶ್ವ ಪ್ರಸಿದ್ಧ ಕುದ್ರೋಳಿ ದೇಗುಲದ ಅನತಿ ದೂರದಲ್ಲಿ ಹಾಕಿದ ಮಟ್ಕಾ ಸೋಡಾ ಸ್ಟಾಲ್ ನ ಕೊಳೆತ ಸೋಡಾದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ಸ್ಟಾಲ್ ಗೆ ಭೇಟಿ ಕೊಟ್ಟಿದ್ದಾರೆ. ಆರೋಗ್ಯ ನಿರೀಕ್ಷಕ ಭಾಸ್ಕರ್ ಅವರು ಮಟ್ಕಾ ಸೋಡಾದ ಸ್ಟಾಲ್ ಗೆ ಭೇಟಿ ನೀಡಿದ್ದಾರೆ. ಕಷ್ಟ ಸುಖ ಮಾತನಾಡಿಕೊಂಡು ಬಂದಿದ್ದಾರೆ. ರೈಡ್ ಎಂಬ ಕಣ್ಕಟ್ಟಿನ ನಾಟಕವನ್ನು ಮಾಡಿ ಮುಗಿಸಿದ್ದಾರೆ ಎಂದು ಮಟ್ಕಾ ಸೋಡಾ ಕುಡಿದು ವಾಕರಿಕೆ ಮಾಡಲು ಆಗದೆ, ಜೀರ್ಣಿಸಿಕೊಳ್ಳಲೂ ಆಗದೆ ಸಂತ್ರಸ್ತರಾದವರು ದೂರುತ್ತಿದ್ದಾರೆ. ಪಾಲಿಕೆಯಿಂದ ಏನು ಕ್ರಮ ಕೈಗೊಂಡಿದ್ದೀರಿ ಎಂದು ಆರೋಗ್ಯ ನಿರೀಕ್ಷಕ ಭಾಸ್ಕರ್ ಅವರಲ್ಲಿ ಪ್ರಶ್ನಿಸಿದರೆ, ಅವರಿಂದ ಯಾವುದೇ ಉತ್ತರವಿಲ್ಲ.
ಸಾಮಾನ್ಯವಾಗಿ ನವರಾತ್ರಿ, ದಸರಾ, ಮಾರಿಗುಡಿ ಜಾತ್ರೆ, ಮಂಗಳಾದೇವಿ ಜಾತ್ರೆ ಮುಂತಾದ ಸಂದರ್ಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಫುಡ್ ಹಾಗೂ ಜ್ಯೂಸ್ ಸ್ಟಾಲ್ ಗಳು ತಲೆ ಎತ್ತುತ್ತವೆ. ಆದರೆ ಪಾಲಿಕೆ
ವ್ಯಾಪ್ತಿಯಲ್ಲಿ ಇಂತಹ ಫುಡ್ ಸ್ಟಾಲ್ ಗಳು ತಲೆ ಎತ್ತಿದರೆ ಪಾಲಿಕೆಯ ಆರೋಗ್ಯವಿಭಾಗಕ್ಕೆ ಯಾವುದೇ ಕಂಟ್ರೋಲ್ ಇರುವುದಿಲ್ಲ ಎನ್ನುವುದು ಮಟ್ಕಾ ಸೋಡಾದ ಕಥೆ ಮಂಗಳೂರಿನ ನಾಗರಿಕರಿಗೆ ಸಾರಿ ಸಾರಿ ಹೇಳುತ್ತಿದೆ. ವಾಸ್ತವದಲ್ಲಿ ಸ್ಟಾಲ್ ಗಳಿಗೆ ಪಾಲಿಕೆ ಪರ್ಮಿಷನ್ ಕೊಡುವಾಗ ಶುಲ್ಕ ಪಾವತಿಸಲು ಇರುತ್ತದೆ. ಹಾಗೆ ಪಾಲಿಕೆಯಿಂದ ಷರತ್ತು ವಿಧಿಸಲಾಗುತ್ತದೆ. ಹಾಗೆ, ಈ ಷರತ್ತನ್ನು ಸ್ಟಾಲ್ ಪಡೆದವರು ಪಾಲಿಸಿದ್ದಾರೆಯೇ ಎನ್ನುವುದರ ಬಗ್ಗೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ನಿಗಾ ಇಡಬೇಕಾಗುತ್ತದೆ. ಆದರೆ ಪಾಲಿಕೆ ಎಡವಿದ್ದೇ ಇಲ್ಲಿ. ಹಣ ಕಟ್ಟಿ ಪರ್ಮಿಷನ್ ತೆಗೆದುಕೊಂಡ ಸ್ಟಾಲ್ ಗಳು ಯಾವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಟ್ಟರೂ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕಾರಣವೂ ಇದೆ ಎಂದು ಮಂಗಳೂರಿನ ನಾಗರಿಕರು ದೂರುತ್ತಾರೆ. ಆ ಕಾರಣ ಏನೆಂದರೆ ಸ್ಟಾಲ್ ಗಳಿಂದ ಮಾಮೂಲಿ ಪಡೆಯುವುದು ಆಗಿದೆ. ಮಟ್ಕಾ ಸೋಡಾ ವಿಷಯದಲ್ಲಿಯೂ ನಡೆದದ್ದು ಇದುವೇ ಎಂದು ಕುದ್ರೋಳಿ ಆಸುಪಾಸಿನ ನಿವಾಸಿಯಾದ ಪುಷ್ಪಾ ಹಾಗೂ ಉರ್ವದ ಹಿರಿಯ ನಾಗರಿಕರಾದ ರಮೇಶ್ ಕುಮಾರ್ ಅವರು ಹೇಳುತ್ತಾರೆ.
ಇದೀಗ ನವರಾತ್ರಿ ಸಂದರ್ಭದಲ್ಲಿ ತಲೆ ಎತ್ತಿದ ಫುಡ್, ಜ್ಯೂಸ್, ಮಟ್ಕಾ ಸೋಡಾ ಸ್ಟಾಲ್ ಗಳ ಕತೆಯೂ ಇದೇ ಆಗಿದೆ. ಕುದ್ರೋಳಿ ಬಳಿಯ ಮಟ್ಕಾ ಸೋಡಾ ಸ್ಟಾಲ್ ನವರು ಕೊಳೆತು ಕಪ್ಪಗಾದ ನೀರಿನಲ್ಲಿ ಮಟ್ಕಾ ಸೋಡಾದ ಪಾತ್ರೆ ತೊಳೆದರೂ, ಜರ್ದ ತಿಂದು ಅಲ್ಲೇ ಉಗುಳಿದರೂ ಆರೋಗ್ಯ ಸಿಬ್ಬಂದಿಗಳಿಗೆ ಗೊತ್ತಾಗುವುದಿಲ್ಲ. ವೀಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕವೇ ಇವರು ಎಚ್ಚರವಾಗುವುದು. ಅದೇ ರೀತಿ
ಇಲ್ಲಿಯೂ ವೀಡಿಯೊ ವೈರಲ್ ಆದ ಬಳಿಕವೇ ಮಟ್ಕಾ ಸ್ಟಾಲ್ ಗೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿದ್ದಾರೆ. ಅಲ್ಲಿಗೆ ಎಲ್ಲ ತೇಪೆ ಹಚ್ಚುವ ಕಾರ್ಯ ಮುಗಿದೆ. ಸ್ಟಾಲ್ ಗಳ ಶುಚಿತ್ವ ಬಗ್ಗೆ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳು ಮೊದಲೇ ಎಚ್ಚೆತ್ತು ನಿಗಾ ವಹಿಸುತ್ತಿದ್ದರೆ, ಜನರ ಆರೋಗ್ಯದ ಜತೆ ಚೆಲ್ಲಾಟ ನಡೆಯುತ್ತಿರಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು