9:58 AM Thursday22 - January 2026
ಬ್ರೇಕಿಂಗ್ ನ್ಯೂಸ್
ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ…

ಇತ್ತೀಚಿನ ಸುದ್ದಿ

Udupi | ಒಣ ಮೀನು ಮಾರಿ ಮನೆ ಕಟ್ಟಲು ಕೂಡಿಟ್ಟ ಹಣದಿಂದ ಫುಡ್ ಕಿಟ್ ವಿತರಣೆ: ಲಕ್ಷ್ಮೀ ಹೃದಯ ಶ್ರೀಮಂತಿಕೆಗೆ ಡಿಕೆಶಿ ಫಿದಾ

07/07/2021, 10:38

ಉಡುಪಿ(reporterkarnataka news):

ಮಲ್ಪೆಯ ತೀರಾ ಬಡ ಕುಟುಂಬದಿಂದ ಬಂದಿರುವ ಲಕ್ಷ್ಮೀ ಅವರು ಹಸಿ ಮೀನು ಖರೀದಿಸಿ, ಅದನ್ನು ಒಣಮೀನಾಗಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು. ಜೀವನ ಸಂಜೆಯಲ್ಲಾದರೂ ಒಂದು ಸ್ವಂತ ಸೂರು ಹೊಂದಬೇಕೆಂದು ಒಣ ಮೀನು ಮಾರಾಟದಲ್ಲಿ 40 ಸಾವಿರ ರುಪಾಯಿ, ಉಳಿತಾಯ ಮಾಡಿಟ್ಟುಕೊಂಡಿದ್ದರು.

ಮೊದಲಿಂದಲೂ ಕಂಡವರ ಸಮಸ್ಯೆಗೆ ಕರಗುವ, ಮಮ್ಮುಲ ಮರುಗುವ ಗುಣ ರೂಢಿಸಿಕೊಂಡಿದ್ದ ಮಾತೃ ಹೃದಯದ ಲಕ್ಷ್ಮೀ ಅವರಿಗೆ ಕೊರೊನಾ ಸಂದರ್ಭದಲ್ಲಿ ತಮಗಿಂತಲೂ ಬಡವರು ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಸಹಿಸಿಕೊಳ್ಳಲು ಆಗಲಿಲ್ಲ.

ತಡಮಾಡದೇ, ಮನೆ ಕಟ್ಟಲೆಂದು ತಾವು ಕೂಡಿಟ್ಟಿದ್ದ 40 ಸಾವಿರ ರುಪಾಯಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಿಬಿಟ್ಟರು. ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಮತ್ತೊಬ್ಬರ ಕಷ್ಟಕ್ಕೆ ನೆರವಾಗಲು ಹಣವಂತಿಕೆಗೂ ಮಿಗಿಲಾಗಿ ಗುಣವಂತಿಕೆ ಬೇಕೆಂಬುದನ್ನು ಸಾರಿದರು.

ತದನಂತರ ಈ ವಿಷಯ ಮಾಧ್ಯಮಗಳ ಮೂಲಕ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು, ಆಕೆ ಆಹಾರ ಕಿಟ್ ಗಳ ವಿತರಣೆಗೆ ವಿನಿಯೋಗಿಸಿದ್ದ 40 ಸಾವಿರ ರೂಪಾಯಿಯನ್ನು ಮರಳಿಸಿದರು.

ಮಲ್ಪೆ ಬಂದರಿಗೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಅವರನ್ನು ಭೇಟಿ ಮಾಡಿ, ಆಕೆಯ ಮಾತೃ ವಾತ್ಸಲ್ಯವನ್ನು ಮನತುಂಬಿ ಕೊಂಡಾಡಿದರು. ನಿಮ್ಮಂತಹ ತಾಯಿ ಮಮತೆಯ ಸಂತತಿ ನೂರ್ಮಡಿಯಾಗಲಿ, ಮನುಕುಲಕ್ಕೆ ಮಾದರಿಯಾಗಲಿ ಎಂದು ಬಯಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು