9:38 PM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ತುಳುವಿಗಾಗಿ ಮತ್ತೊಮ್ಮೆ ಕೈ ಎತ್ತುವ ಸರದಿ: ಸೆ. 5ರಂದು ‘ಟ್ವೀಟ್ ತುಳುನಾಡು’; ಕವಿ ಮಂದಾರ ಕೇಶವ ಭಟ್ ಮತ್ತೆ ನೆನಪಿಗೆ

04/09/2021, 19:18

ಮಂಗಳೂರು(reporterkarnataka.com): 

ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಕುರಿತು ತುಳುವರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಾ ಹೋರಾಟ ಮಾಡಿಕೊಂಡು ಬಂದರೂ ಇನ್ನೂ ಅದು ಕಾರ್ಯಗತಗೊಂಡಿಲ್ಲ. ಹಲವು ಸರಕಾರಗಳು ಬದಲಾದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವ ಬದಲಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮನ್ನಾಳುವವರನ್ನು ಬಡಿದೆಬ್ಬಿಸಲು ಮತ್ತೆ ತುಳುವಿಗಾಗಿ ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 5 ರಂದು ಟ್ವೀಟ್ ಅಭಿಯಾನ ಸಾಕಾರಗೊಳ್ಳಲಿದೆ.

ತುಳುವರ ಸ್ವಾಭಿಮಾನದ ದೃಷ್ಟಿಯಿಂದ ಸೆ.5ರಂದು 

ನಡೆಯುವ#TuluOfficialinKA_KL ಟ್ವೀಟ್ ಅಭಿಯಾನವು ಬಹಳಷ್ಟು ಮಹತ್ವ ಪಡೆದಿದೆ. ಈ ಹಿಂದೆ ಜೂನ್ 14ರಂದು ನಡೆದ

ಟ್ವೀಟ್ ಅಭಿಯಾನದಲ್ಲಿ 4 ಲಕ್ಷ ಮಂದಿ ಪಾಲ್ಗೊಂಡು ರಾಷ್ಟ ಮಟ್ಟದಲ್ಲಿ ಹೊಸ ದಾಖಲೆಯ ಬರೆದಿದ್ದರು. ಇಷ್ಟೇ ಅಲ್ಲದೆ ಇದು ದೇಶವ್ಯಾಪ್ತಿಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಾಜಕೀಯ ವಲಯದಲ್ಲಿಯೂ ಬಿರುಗಾಳಿ ಎನ್ನಿಸಿತು.

ತುಳುವಿಗೆ 60 ವರ್ಷಗಳ ಕಾಲ ಯಾವುದೇ ಸ್ಥಾನಮಾನ ಕೊಡದೇ ಇರುವ ವಿರುದ್ಧ ಜನಾಕ್ರೋಶ ಟ್ವೀಟ್ ಮೂಲಕ ಹೊರಹೊಮ್ಮಿತ್ತು. ವಿಶೇಷವೆಂದರೆ ಬಹಳಷ್ಟು ರಾಜಕೀಯ ಪಕ್ಷಗಳ ನಾಯಕರು ಅಭಿಯಾನದಲ್ಲಿ ಕೈಜೋಡಿಸಿ ತುಳುವಿಗಾಗಿ ಕೈ ಎತ್ತಿದ್ದರು. ಆದರೆ ಅಷ್ಟಕ್ಕೆ ತುಳುವರ ಬೇಡಿಕೆ ಈಡೇರುವುದಿಲ್ಲ.

ಕಾಸರಗೋಡಿನ ನೀಲೇಶ್ವರದಿಂದ ಆರಂಭವಾಗಿ ಬಾರಕೂರು ವರೆಗೆ ಹಬ್ಬಿರುವ ಈ ವಿಶಾಲವಾದ ತುಳುನಾಡಿನಲ್ಲಿ ತುಳುವರಿಗೆ ಇದೊಂದು ಬರೇ ಭಾಷೆಯಲ್ಲ. ಬದಲಿಗೆ ಇದೊಂದು ಜೀವನ ವಿಧಾನ, ಸಂಸ್ಕೃತಿ ಆಗಿದೆ. ತುಳುವಿನಲ್ಲಿ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಕವಿತೆ, ಕಥೆ, ಮಹಾಕಾವ್ಯ, ಕಾದಂಬರಿ, ನಾಟಕ, ರೂಪಕ, ಯಕ್ಷಗಾನ ರಚನೆಯಾಗಿದೆ. ತುಳು ಸಿನಿಮಾಗಳು ಬಂದಿವೆ. ತುಳುವಿನ ವಾಲ್ಮೀಕಿ ಎಂದೇ ಪ್ರಸಿದ್ಧರಾದ ಮಂದಾರ ಕೇಶವ ಭಟ್ ಅವರು ತುಳುವಿನಲ್ಲಿ ಮಹಾಕಾವ್ಯವನ್ನೇ ಸೃಷ್ಟಿಸಿದ್ದಾರೆ. ಮಂದಾರ ರಾಮಾಯಣ ಬರೆದಿದ್ದಾರೆ. ಇದರ ಜತೆಗೆ ತುಳು ಭಾಷೆಗಾಗಿ ಕೇಶವ ಭಟ್ ಅವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ತುಳು ಭಾಷೆಯ ನಡೆದಾಡುವ ವಿಶ್ವವಿದ್ಯಾನಿಲಯವೇ ಅವರಾಗಿದ್ದರು. ಆದರೆ ಅವರು ಹುಟ್ಟಿದ ಮನೆ ಮಂಗಳೂರಿನ ಪಚ್ಚನಾಡಿ ಸಮೀಪದ ಮಂದಾರದಲ್ಲಿ ತ್ಯಾಜ್ಯ ಸುನಾಮಿಗೆ ಸಿಲುಕಿ ಶಿಥಿಲಗೊಂಡಿದೆ. ಅದನ್ನು ಉಳಿಸುವ ಪ್ರಯತ್ನ ನಡೆಯಬೇಕಾಗಿದೆ.ಅವರು ಬದುಕಿರುತ್ತಿದ್ದರೆ ಈ ಕಾಲಘಟ್ಟದಲ್ಲಿ ತುಳುಭಾಷೆಯ ಉಳಿವಿನ ಹೋರಾಟದಲ್ಲಿ ಮುಂಚೋಣಿಯಲ್ಲಿರುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಇದೀಗ ಸೆ.  5ರಂದು ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 13 ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದರಿಂದ ಸೆ. 5ರ ಟ್ವೀಟ್ ಅಭಿಯಾನ ಬಹಳಷ್ಟು ಮಹತ್ವ ಪಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು